Surat Diamond Bourse: ಪೆಂಟಗನ್‌ ಮೀರಿಸುವ ಸೂರತ್‌ನ ವಜ್ರದ ಸಂಕೀರ್ಣ ನಾಳೆ ಪ್ರಧಾನಿಯಿಂದ ಉದ್ಘಾಟನೆ - Vistara News

ದೇಶ

Surat Diamond Bourse: ಪೆಂಟಗನ್‌ ಮೀರಿಸುವ ಸೂರತ್‌ನ ವಜ್ರದ ಸಂಕೀರ್ಣ ನಾಳೆ ಪ್ರಧಾನಿಯಿಂದ ಉದ್ಘಾಟನೆ

ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವೆನಿಸಲಿರುವ ವಜ್ರದ ವ್ಯಾಪಾರ ಸಂಸ್ಥೆಗಳ ಸಂಕೀರ್ಣ (Surat Diamond Bourse) ಸೂರತ್‌ನಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿದೆ.

VISTARANEWS.COM


on

Surat Diamond Bourse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೂರತ್:‌ ವಿಶ್ವದ ಅತಿ ದೊಡ್ಡ ಕಚೇರಿ ಸಂಕೀರ್ಣ, ಅಮೆರಿಕದ ಭದ್ರತಾ ಸಂಸ್ಥೆ ಕಟ್ಟಡ ಪೆಂಟಗನ್ (Pentagon) ಅನ್ನೂ ಮೀರಿಸುವ ಗಾತ್ರದ ಹೊಸ ವಜ್ರದ ವ್ಯಾಪಾರ ಸಂಸ್ಥೆಗಳ ಸಂಕೀರ್ಣ (Surat Diamond Bourse) ಸೂರತ್‌ನಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ.

ವಿಶ್ವದ ವಜ್ರ ವ್ಯಾಪಾರದ ರಾಜಧಾನಿ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಈ ಸಂಕೀರ್ಣ ಈಡೇರಿಸಲಿದೆ. ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 67 ಲಕ್ಷ ಚದರಡಿ (620,000 ಚದರ ಮೀಟರ್) ಪ್ರದೇಶದಲ್ಲಿ ರೂಪುಗೊಂಡಿದೆ. ಜುಲೈನಲ್ಲಿ 32 ಶತಕೋಟಿ ರೂಪಾಯಿಗಳಲ್ಲಿ ಇದು ಪೂರ್ಣಗೊಂಡು ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವೆನಿಸಿದೆ. ಅಮೆರಿಕದ ಹೆಗ್ಗುರುತಾದ ಪೆಂಟಗನ್‌ ಅನ್ನು 1943ರಲ್ಲಿ ತೆರೆಯಲಾಗಿದ್ದು, 65 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದೆ.

ಸೂರತ್‌ನಲ್ಲಿರುವ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ. ಗುಜರಾತನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಪ್ರಧಾನಿ ಮೋದಿಯವರ ಆಡಳಿತ ನಡೆಸುತ್ತಿರುವ ಹಲವು ಪ್ರಯತ್ನಗಳಲ್ಲಿ ಇದೊಂದು. ಮುಂಬಯಿ ಸದ್ಯ ಭಾರತದಲ್ಲಿ ವಜ್ರಗಳ ರಫ್ತಿನ ಕೇಂದ್ರವಾಗಿದೆ. ʼಡೈಮಂಡ್ ಸಿಟಿʼ (Diamond City) ಎಂದೂ ಕರೆಯಲ್ಪಡುವ ಸೂರತ್ ಅಮೂಲ್ಯ ರತ್ನಗಳ ಸಂಸ್ಕರಣೆಯಲ್ಲಿ ಪ್ರಾಬಲ್ಯ ಹೊಂದಿದೆ. ಪ್ರಪಂಚದ ಸುಮಾರು 90 ಪ್ರತಿಶತದಷ್ಟು ಒರಟು ವಜ್ರಗಳನ್ನು ಇಲ್ಲಿಯೇ ಕತ್ತರಿಸಿ ಹೊಳಪು ನೀಡಲಾಗುತ್ತದೆ. ಅಮೆರಿಕ ಮತ್ತು ಚೀನಾಗಳಲ್ಲಿ ಇವುಗಳನ್ನು ಮಾರಲಾಗುತ್ತದೆ. ಹೊಸ ಬೋರ್ಸ್, ಈ ಉದ್ಯಮವನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.

“ಸೂರತ್ ಒಂದು ಪ್ರಮುಖ ವಜ್ರ ಕತ್ತರಿಸುವ ಕೇಂದ್ರ. ಡೈಮಂಡ್‌ ಎಕ್ಸ್‌ಚೇಂಜ್‌ ಇಲ್ಲಿಗೆ ಬಹಳ ಸಮಯದಿಂದ ಅಗತ್ಯವಿತ್ತು. ವಿಶ್ವದಾದ್ಯಂತದ ವಿತರಕರು ಈ ಸುರಕ್ಷಿತ ಮತ್ತು ಕೇಂದ್ರೀಕೃತ ಸ್ಥಳದಿಂದ ಆತ್ಮವಿಶ್ವಾಸದಿಂದ ವ್ಯಾಪಾರ ಮಾಡಬಹುದು” ಎಂದು ಡೈಮಂಡ್ ಬೋರ್ಸ್‌ಗಳ ವಿಶ್ವ ಫೆಡರೇಶನ್‌ನ ಗೌರವಾಧ್ಯಕ್ಷ ಎಲಿ ಇಝಾಕೋಫ್ ಹೇಳುತ್ತಾರೆ.

Surat Diamond Bourse

ಹೊಸ ಸಂಕೀರ್ಣವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ ಸಿಟಿಯೊಳಗೆ ಇದೆ. ಇದು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಅಥವಾ ಗಿಫ್ಟ್ ಸಿಟಿಯ ಮಾದರಿಯ ವ್ಯಾಪಾರ ಜಿಲ್ಲೆ. ಇದು ಪ್ರಧಾನಿ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದು. 15 ಅಂತಸ್ತಿನ ಗೋಪುರಗಳ ಒಂಬತ್ತು ಕಟ್ಟಡಗಳು ಮತ್ತು ಸುಮಾರು 4,700 ಕಚೇರಿಗಳನ್ನು ಹೊಂದಿದೆ. ಸೂರತ್ ಡೈಮಂಡ್ ಬೋರ್ಸ್‌ನ ಅಧ್ಯಕ್ಷ ನಾಗಜಿಭಾಯ್ ಸಕರಿಯಾ ಪ್ರಕಾರ, ಸುಮಾರು 130 ಕಚೇರಿಗಳು ಈಗಾಗಲೇ ಬಳಕೆಯಲ್ಲಿವೆ.

SDB ಮುಂದೆ ಇಸ್ರೇಲ್ ಡೈಮಂಡ್ ಎಕ್ಸ್ಚೇಂಜ್ ಕೂಡ ಈಗ ಸಣ್ಣದೆನಿಸಲಿದೆ. ಅದು 80,000 ಚದರ ಮೀಟರ್‌ ವಿಸ್ತೀರ್ಣದ್ದು. ಟೆಲ್ ಅವಿವ್ ಸಂಕೀರ್ಣವು 1,000 ಕಚೇರಿಗಳನ್ನು ಮಾತ್ರವಲ್ಲದೆ ವಿಮಾದಾರರು, ಬ್ಯಾಂಕ್‌ಗಳು, ಅಂಚೆ ಕಚೇರಿ, ಕಸ್ಟಮ್ಸ್ ಕಚೇರಿ ಮತ್ತು ಮನರಂಜನೆ, ಆಹಾರ ಮತ್ತು ಧಾರ್ಮಿಕ ಸೌಲಭ್ಯ ಸೇವೆಗಳನ್ನು ಒಳಗೊಂಡಿದೆ.

ಐತಿಹಾಸಿಕವಾಗಿ ಭಾರತ ಮತ್ತು ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಪೋರ್ಚುಗಲ್‌ನಂತಹ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಕೊಂಡಿಗಳಲ್ಲಿ ಸೂರತ್ ಒಂದು. ಏಕೆಂದರೆ ಅರೇಬಿಯನ್ ಸಮುದ್ರ ತೀರಕ್ಕೆ ಇದು ಸಮೀಪ. 17 ಮತ್ತು 18ನೇ ಶತಮಾನಗಳಲ್ಲಿ ಬಾಂಬೆ ದೊಡ್ಡ ಬಂದರು ಆಗಿ ಹೊರಹೊಮ್ಮಿ ಚಿತ್ರಣ ಬದಲಾಯಿತು. ಇಲ್ಲಿ ವಜ್ರ ಉದ್ಯಮ ಸುಮಾರು ಆರು ದಶಕಗಳ ಹಿಂದೆ ಕಾರ್ಯಾರಂಭಿಸಿತು. ಆಸ್ಟ್ರೇಲಿಯಾದಲ್ಲಿ ದೊಡ್ಡ ನಿಕ್ಷೇಪಗಳ ಆವಿಷ್ಕಾರ ಮತ್ತು 1990ರ ದಶಕದಲ್ಲಿ ಭಾರತದ ಆರ್ಥಿಕ ಸುಧಾರಣೆಗಳ ನಂತರ ವೇಗ ಪಡೆದುಕೊಂಡಿತು. ಮುಂಬೈ, ಪ್ರಪಂಚದೊಂದಿಗೆ ಉತ್ತಮ ಸಂಪರ್ಕದಿಂದಾಗಿ ವ್ಯಾಪಾರ ಕೇಂದ್ರವಾಗಿ ಉಳಿಯಿತು.

ಸೂರತ್ ವಜ್ರ ತಯಾರಿಕಾ ಕೇಂದ್ರವಾಗಿ ಬೆಳೆಯಿತು. ದೇಶ, ವಿಶ್ವದ ನಾನಾ ಕಡೆಯ ವಜ್ರ ಪಾಲಿಶ್ ಮಾಡುವವರು ಇಲ್ಲಿಗೆ ಬಂದರು. 1994ರಲ್ಲಿ ನಗರದಲ್ಲಿ ನ್ಯುಮೋನಿಕ್ ಪ್ಲೇಗ್ ಉಲ್ಬಣಗೊಂಡಾಗ ಕಾರ್ಮಿಕರು ಸೂರತ್‌ನಿಂದ ಪಲಾಯನ ಮಾಡಿದರು. ಉದ್ಯಮ ದೊಡ್ಡ ಹಿನ್ನಡೆ ಅನುಭವಿಸಿತು. ಪ್ಲೇಗ್‌ ನಿಯಂತ್ರಣಕ್ಕೆ ಬಂದ ನಂತರ ಸೂರತ್ ಆಡಳಿತ ಮತ್ತು ಮೂಲಸೌಕರ್ಯದಲ್ಲಿ ಕೂಲಂಕಷ ಬದಲಾವಣೆ ಮಾಡಿತು. ಇಂದು ಇದು ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ.

ಇಂದು ಸೂರತ್‌ನ ಮಹಿಧರ್‌ಪುರ ಅತಿದೊಡ್ಡ ವಜ್ರದ ಬಜಾರ್‌. ಇಲ್ಲಿನ ಕಟ್ಟಡಗಳಲ್ಲಿ ಸಾಲು ಮೇಜುಗಳ ಮುಂದೆ ಕುಳಿತಿರುವ ವ್ಯಾಪಾರಿಗಳು ಪ್ರಕಾಶಮಾನವಾದ ದೀಪಗಳ ಅಡಿಯಲ್ಲಿ ಬೆಲೆಬಾಳುವ ಕಲ್ಲುಗಳನ್ನು ಪರಿಶೀಲಿಸುತ್ತಿರುತ್ತಾರೆ. ಕೆಲವರು ಬೀದಿಗಳಲ್ಲೂ ವ್ಯಾಪಾರ ಮಾಡುತ್ತಾರೆ. ವ್ಯಾಪಾರಿಗಳು ಸಾಮಾನ್ಯವಾಗಿ ತಮ್ಮ ಶರ್ಟ್‌ಗಳ ಒಳಭಾಗದಲ್ಲಿ ಹೊಲಿಸಿದ ಜೇಬುಗಳಲ್ಲಿ ಅಥವಾ ಸಣ್ಣ ಚೀಲಗಳಲ್ಲಿ ವಜ್ರಗಳನ್ನು ಸುತ್ತಿಟ್ಟುಕೊಂಡು ನಗರದಲ್ಲಿ ಓಡಾಡುತ್ತಾರೆ.

ವಜ್ರದ ಎಲ್ಲಾ ವ್ಯವಹಾರಗಳನ್ನು ಒಂದೇ ಸೂರಿನಡಿ ತರುವ ಸವಾಲನ್ನು SDB ಎದುರಿಸುತ್ತಿದೆ. ಸೂರತ್‌ನಲ್ಲಿ ಈಗಿರುವ ಬಜಾರ್‌ನಲ್ಲಿ ಕಡಿಮೆ ಬಾಡಿಗೆ ಮತ್ತಿತರ ವೆಚ್ಚದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು ಹೊಸ ಆಧುನಿಕ ಕಚೇರಿಗೆ ಸ್ಥಳಾಂತರಿಸಲು ಹಿಂಜರಿಯುತ್ತಾರೆ. ಮುಂಬೈನ ಭಾರತ್ ಡೈಮಂಡ್ ಬೋರ್ಸ್‌ಗೂ ಆರಂಭಿಕ ವರ್ಷಗಳಲ್ಲಿ ಹೀಗೇ ಆಗಿತ್ತು. ಮುಂಬಯಿಯ ಹಳೆಯ ಡೈಮಂಡ್ ಡಿಸ್ಟ್ರಿಕ್ಟ್ ಬಳಿ 2011ರ ಭಯೋತ್ಪಾದಕ ಬಾಂಬ್ ಸ್ಫೋಟಗಳು ನಡೆಯುವವರೆಗೆ ಮತ್ತು ಕಸ್ಟಮ್ಸ್ ಸೇವೆಗಳು ಕಟ್ಟಡವನ್ನು ಮುಚ್ಚುವವರೆಗೆ ಅದು ಬೆಳೆಯಲಿಲ್ಲ. ಇಂದು ಉಪನಗರ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಹೊಸ ಕಚೇರಿಗಳಿಗೆ ವ್ಯವಹಾರಗಳು ಸ್ಥಳಾಂತರಗೊಂಡಿವೆ.

ಮುಂಬಯಿ ಮೂಲದ ಕೆಲವು ವಜ್ರದ ವ್ಯವಹಾರಗಳು ಸೂರತ್‌ಗೆ ಸ್ಥಳಾಂತರಗೊಳ್ಳಲೂ ಸ್ವಲ್ಪ ಕಷ್ಟವಾಗಬಹುದು. ಸೂರತ್‌ನ ಕಡಿಮೆ ಜೀವನವೆಚ್ಚ, ಹೊಸ ಬೋರ್ಸ್‌ನಲ್ಲಿ ವ್ಯಾಪಾರಗಳ ಕೇಂದ್ರೀಕರಣದಿಂದ ಲಾಭವಾಗಬಹುದು. ಸೂರತ್‌ನ ಹೊರವಲಯದಲ್ಲಿ ಬೋರ್ಸ್ ಇರುವುದರಿಂದ ಮೂಲಸೌಕರ್ಯಗಳು ಅಥವಾ ಮನರಂಜನೆ ವ್ಯವಸ್ಥೆ ಕಡಿಮೆ. ಸೂರತ್‌ಗೆ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಅತಿ ಕಡಿಮೆ ಇದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾಕ್ಕೆ ಕೇವಲ ಒಂದೇ ಅಂತಾರಾಷ್ಟ್ರೀಯ ವಿಮಾನ ಸೌಲಭ್ಯವಿದೆ.

ಸೂರತ್‌ನಲ್ಲಿ ಸಂಸ್ಕರಿಸುವ ಹಲವು ವಜ್ರಗಳು ಸೈಬೀರಿಯಾದಿಂದ ಬರುತ್ತವೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ರಷ್ಯಾದ ವಜ್ರ ಗಣಿಗಾರರ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಇದರಿಂದ ಉದ್ಯಮ ನಷ್ಟ ಅನುಭವಿಸಿದೆ. ರಷ್ಯಾದ ವಜ್ರ ಆಮದುಗಳ ಮೇಲೆ ಏಳು ರಾಷ್ಟ್ರಗಳ ಗುಂಪಿನ ನಿಷೇಧ ಕೂಡ ಜನವರಿ 1ರಂದು ಜಾರಿಗೆ ಬರಲಿದೆ. ಅದೂ ಇನ್ನೊಂದು ಸಂಕಷ್ಟ.

ಇದನ್ನೂ ಓದಿ: Virat kohli : ವಿರಾಟ್​ ಕೊಹ್ಲಿಗೆ ಡೈಮಂಡ್​ ಬ್ಯಾಟ್ ಉಡುಗೊರೆ ಕೊಟ್ಟ ಸೂರತ್​ ಉದ್ಯಮಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

Sam Pitroda: ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಇದು ಕೂಡ ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು.

VISTARANEWS.COM


on

Sam Pitroda
Koo

ಹೊಸದಿಲ್ಲಿ: `ಪಿತ್ರಾರ್ಜಿತ ತೆರಿಗೆʼ (inheritance tax) ವಿಚಾರ ತೆಗೆದು ಪಕ್ಷಕ್ಕೆ ಮುಜುಗರ ಸೃಷ್ಟಿಸಿ ನಂತರ ನಾಲಿಗೆ ಕಚ್ಚಿಕೊಂಡಿದ್ದ ಕಾಂಗ್ರೆಸ್‌ ನಾಯಕ (congress leader) ಸ್ಯಾಮ್‌ ಪಿತ್ರೋಡಾ (Sam Pitroda), ಇನ್ನೊಂದು ಅಂಥದೇ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಅವರು ಭಾರತೀಯರನ್ನು ಅವರ ಹೊರನೋಟದಿಂದ ವಿಂಗಡಿಸಿ, ಜನತೆಯ ಸಿಟ್ಟಿಗೆ ಕಾರಣರಾಗಿದ್ದಾರೆ.

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಅವರು ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sharma) , “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.

ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) , ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿ (Rahul Gandhi) ಅವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ‌; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.

ಈ ಹೇಳಿಕೆ ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿರುವ “ಸಾಮಾಜಿಕ- ಆರ್ಥಿಕ ಸಮೀಕ್ಷೆ”ಯನ್ನು ಜೊತೆ ಸೇರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀಕೆಗೊಡ್ಡಿದ್ದರು. “ಕಾಂಗ್ರೆಸ್‌ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ” ಎಂದಿದ್ದರು. ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು. “ಪ್ರಧಾನಿ ನರೇಂದ್ರ ಮೋದಿಯವರು ದುರುದ್ದೇಶಪೂರ್ವಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ” ಎಂದು ಆರೋಪಿಸಿತ್ತು.

ಪಿತ್ರೋಡಾ ಅವರು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. “ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಮೆರಿಕದ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲಾಗಿದೆ. ತನ್ನ ಕಾಮೆಂಟ್‌ಗಳಿಗೂ ಪಕ್ಷದ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಒತ್ತಿ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು; ‘ಕೈ’ಗೆ ಇಕ್ಕಟ್ಟು, ಬಿಜೆಪಿಗೆ ಅಸ್ತ್ರ

Continue Reading

Latest

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

ಇಂದು ವಿಶ್ವದಾದ್ಯಂತ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವುದಾಗಿದೆ. ಈ ದಿನದ ವಿಶೇಷ ಏನು? ಈ ದಿನದ ಸಂದೇಶ ಏನು? ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

By

World Red Cross Day
Koo

ರೆಡ್ ಕ್ರೆಸೆಂಟ್ ಡೇ ಅಥವಾ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ (Henry Dunant) ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. 1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಪಡೆದ ಅವರು, ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ.

ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ. ವಿಶ್ವ ರೆಡ್ ಕ್ರಾಸ್ ದಿನದಂದು ಸ್ವಯಂ ಸೇವಕರು 192 ದೇಶಗಳಲ್ಲಿ ರಾಷ್ಟ್ರೀಯ ಅಧ್ಯಾಯಗಳನ್ನು ಹೊಂದಿರುವ 161 ವರ್ಷ ಹಳೆಯ ಅಂತಾರಾಷ್ಟ್ರೀಯ ನೆರವು ಸಂಸ್ಥೆಯ ಧ್ಯೇಯ ಮತ್ತು ತತ್ತ್ವಗಳನ್ನು ಪ್ರಚಾರ ಮಾಡುತ್ತಾರೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ ಏನು?

ಇಟಲಿಯಲ್ಲಿನ ಸೋಲ್ಫೆರಿನೊ ಕದನದ ವೇಳೆ ಗಾಯಗೊಂಡ ಸೈನಿಕರು ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾದ ಪರಿಣಾಮ ತೀವ್ರವಾಗಿ ಮನನೊಂದ ಸ್ವಿಸ್ ಉದ್ಯಮಿ ಹೆನ್ರಿ ಡ್ಯೂನಾಂಟ್ ಅವರು ಕೆಲವು ವರ್ಷಗಳ ಅನಂತರ 1863 ರಲ್ಲಿ ಡ್ಯುನಾಂಟ್ ಸ್ವಯಂಸೇವಕ-ಬೆಂಬಲಿತ ಪರಿಹಾರ ಸಂಘಗಳನ್ನು ಸಂಘಟಿಸಿದರು. ಅದು ಯುದ್ಧಕಾಲ ಅಥವಾ ಸಂಘರ್ಷದ ಸಮಯದಲ್ಲಿ ಗಾಯಗೊಂಡವರಿಗೆ ಪಕ್ಷಾತೀತ ಸಹಾಯವನ್ನು ಒದಗಿಸಲು ಬದ್ಧವಾಗಿದೆ.

ಅದೇ ವರ್ಷ ಡ್ಯೂನಾಂಟ್ ಮತ್ತು ಐದು ಸಹೋದ್ಯೋಗಿಗಳು ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು. ಇದು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯಾಗಿ ವಿಕಸನಗೊಂಡಿತು.

ಸ್ವಿಸ್ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಲಾಂಛನ ಪಡೆದ ಸಂಸ್ಥೆಯು ಶೀಘ್ರದಲ್ಲೇ ರೆಡ್ ಕ್ರಾಸ್ ಎಂದು ಜನಪ್ರಿಯವಾಯಿತು. ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ನಾಗರಿಕರು ಮತ್ತು ಯುದ್ಧ ಕೈದಿಗಳಿಗೆ ಸಹಾಯ ಮಾಡುವಲ್ಲಿ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸಿತು. ಇಂದು ಇದು ಪ್ರಪಂಚದಾದ್ಯಂತ ಅನೇಕ ಸ್ಥಳೀಯ ಮತ್ತು ರಾಷ್ಟ್ರೀಯ ಸಂಘಟನೆಗಳನ್ನು ಒಳಗೊಂಡಿದೆ.


ಪ್ರಾಮುಖ್ಯತೆ

ಮಾನವ ಹಕ್ಕುಗಳ ಸಂರಕ್ಷಣೆಗೆ ರೆಡ್‌ಕ್ರಾಸ್‌ನ ಪ್ರಾಮುಖ್ಯತೆ ಅಗಾಧವಾಗಿದೆ. ಲಾಭರಹಿತ ಸಂಸ್ಥೆಯ ಮುಖ್ಯ ಧ್ಯೇಯ “ಪರ್ ಹ್ಯುಮಾನಿಟೇಟಮ್ ಆಡ್ ಪೇಸೆಮ್” ಅಂದರೆ “ಮಾನವೀಯತೆಯೊಂದಿಗೆ, ಶಾಂತಿಯ ಕಡೆಗೆ” ಎಂಬುದಾಗಿದೆ. ಇದು ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಪಾದಿಸುತ್ತದೆ. ಸಂಘಟನೆಯು ಸಂಘರ್ಷ ವಲಯಗಳು ಅಥವಾ ನೈಸರ್ಗಿಕ ವಿಕೋಪಗಳ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ.

196 ದೇಶಗಳಲ್ಲಿ ಸಕ್ರಿಯ

ಯುದ್ಧದ ಸಮಯದಲ್ಲಿ ಸೈನಿಕರು ಮತ್ತು ನಾಗರಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ನಾಲ್ಕು ಅಂಶಗಳ ಒಪ್ಪಂದವಾದ ಜಿನೀವಾ ಒಪ್ಪಂದಗಳನ್ನು ಕ್ರೋಡೀಕರಿಸಿದ ಕೀರ್ತಿ ವಿಶ್ವ ಸಂಸ್ಥೆಗೆ ಸಲ್ಲುತ್ತದೆ. ಪ್ರಪಂಚದ ಎಲ್ಲಾ 196 ದೇಶಗಳು ನಾಲ್ಕು ಜಿನೀವಾ ಒಪ್ಪಂದಗಳನ್ನು ಅಂಗೀಕರಿಸಿವೆ.

ಇದನ್ನೂ ಓದಿ: Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

ಜಿನೀವಾ ಒಪ್ಪಂದದ ಪ್ರಕಾರ ಎಲ್ಲಾ ನಾಗರಿಕರು ಮತ್ತು ಆಕ್ರಮಿತ ಪ್ರದೇಶದಲ್ಲಿರುವವರನ್ನು ರಕ್ಷಿಸಬೇಕು. ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು, ಸಂಘರ್ಷದ ಸಮಯದಲ್ಲಿ ಅನಾರೋಗ್ಯ, ಗಾಯಗೊಂಡ, ವೈದ್ಯಕೀಯ ಮತ್ತು ಧಾರ್ಮಿಕ ಸಿಬ್ಬಂದಿ ಮೇಲೆ ದಾಳಿ ಮಾಡಬಾರದು, ಸಮುದ್ರದಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡವರು, ರೋಗಿಗಳು ಮತ್ತು ಹಡಗು ನಾಶವಾದವರು ರಕ್ಷಿಸಬೇಕು.

ವಿಶ್ವ ರೆಡ್ ಕ್ರಾಸ್ ದಿನದ ಥೀಮ್ ಏನು?

2024ರ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ “ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಬಹುಮಾನವಾಗಿದೆ”. ಇದು ದಾನ ಮತ್ತು ಸೇವೆಯ ಸಂತೋಷವನ್ನು ಪ್ರೋತ್ಸಾಹಿಸುತ್ತದೆ.

Continue Reading

ದೇಶ

Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

Flights cancelled: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ ಹಾಕಿರುವ ಹಿನ್ನೆಲೆ ಸುಮಾರು 86 ಎಕ್ಸ್‌ಪ್ರೆಸ್‌ ವಿಮಾನಗಳು ರದ್ದಾಗಿವೆ. ಸುಮಾರು 300ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಕ್ಯಾನ್ಸಲ್‌ ಆಗಿದೆ. ಇನ್ನು ಸಾಮೂಹಿಕ ರಜೆ ಮೇಲೆ ಹೋಗಿರುವ ಸಿಬ್ಬಂದಿ ತಮ್ಮ ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Flights cancelled
Koo

ನವದೆಹಲಿ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ(Sick Leave) ಹಾಕಿರುವ ಹಿನ್ನೆಲೆ ಸುಮಾರು 86 ಎಕ್ಸ್‌ಪ್ರೆಸ್‌ ವಿಮಾನಗಳು ರದ್ದಾಗಿವೆ. ಸುಮಾರು 300ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಕ್ಯಾನ್ಸಲ್‌(Flights cancelled) ಆಗಿದೆ. ಇನ್ನು ಸಾಮೂಹಿಕ ರಜೆ ಮೇಲೆ ಹೋಗಿರುವ ಸಿಬ್ಬಂದಿ ತಮ್ಮ ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಮಾನ ರದ್ದತಿಗೆ ಪ್ರತಿಕ್ರಿಯೆಯಾಗಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರು ಈ ವಿಷಯವನ್ನು ಪ್ರಸ್ತಾಪಿಸಿ, “ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ವರದಿ ಮಾಡಿದೆ, ಇದು ಕಳೆದ ರಾತ್ರಿಯಿಂದ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ವಿಮಾನ ವಿಳಂಬ ಮತ್ತು ರದ್ದತಿ ಸಂಭವಿಸಿದೆ” ಎಂದು ಹೇಳಿದರು. ಹಠಾತ್ ಗೈರುಹಾಜರಿಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಮಾನಯಾನವು ಆ ಸಿಬ್ಬಂದಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಕ್ತಾರರು ಭರವಸೆ ನೀಡಿದರು

ನಾವು ನಮ್ಮ ಪ್ರಯಾಣಿಕರಲ್ಲಿ ಅಡಚಣೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ. ಸೇವೆ ಮೇಲ ಇದು ಪರಿಣಾಮ ಬೀರದಂತೆ ತಡೆಯಲು ನಾವು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ವಿಮಾನ ಕ್ಯಾನ್ಸಲ್‌ ಆಗಿರುವುದರಿಂದ ಟಿಕೆಟ್‌ ದರವನ್ನು ಪ್ರಯಾಣಿಕರಗೆ ಹಿಂದಿರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಸೂಚನೆ, ಮಾಹಿತಿ ನೀಡದೇಯೇ ಏರ್‌ ಇಂಡಿಯಾ ವಿಮಾನಗಳ ಹಾರಾಟ ಕ್ಯಾನ್ಸಲ್‌ ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಭಟನೆಗೆ ಕಾರಣವೇನು?

ಟಾಟಾ ಗ್ರೂಪ್‌ ಜೊತೆಗೆ ಏರ್‌ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದುಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ:Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಶುರುವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲಾ ಕಾರಣಗಳಿಂದ ಇದೀಗ ಏರ್‌ ಇಂಡಿಯಾ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Continue Reading

ಕರ್ನಾಟಕ

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Sindhuri Vs Roopa:ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

VISTARANEWS.COM


on

Sindhuri Vs Roopa
Koo

ನವದೆಹಲಿ: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌(Supreme Court), ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌(Karnataka High court) ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ, ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ” ಎಂದು ಹೇಳಿದೆ.

ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ಡಿಸೆಂಬರ್‌ 15ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್‌ ಮಾಧ್ಯಮಗಳಲ್ಲಿ ಮಾತನಾಡದಂತೆ ಇಬ್ಬರು ಅಧಿಕಾರಿಗಳಿಗೆ ಆದೇಶಿಸಿತ್ತು. ಅಲ್ಲದೇ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆಯೂ ಸಲಹೆ ನೀಡಿತ್ತು.

ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ
ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸರ್ಕಾರವು ಇಲಾಖಾ ತನಿಖೆ ನಡೆಸುತ್ತಿದ್ದರೆ, ಈ ವಿಚಾರದಲ್ಲಿ ಮುಂದುವರಿಯದಂತೆ ಸರ್ಕಾರಕ್ಕೂ ಸೂಚಿಸಲಾಗುವುದು ಎಂದು ಹೇಳಿತು. ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಸಿಂಧೂರಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿಲ್ಲ. ಪರಿಹಾರ ಸಾಧ್ಯತೆಯ ಬಗ್ಗೆ ಸಿಂಧೂರಿ ಜೊತೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಡಿ ರೂಪಾ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದರು.

ಏನಿದು ಪ್ರಕರಣ?

ಐಪಿಎಸ್‌ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್‌ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಇದೀಗ ವಾದ-ವಿವಾದಗಳ ಹಂತ ಮುಗಿದು ಇನ್ನು ರೂಪಾ ಮೌದ್ಗಿಲ್‌ ವಿಚಾರಣೆ ಎದುರಿಸಬೇಕಾಗುವ ಹಂತ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ರೂಪಾ ಅವರ ಮನವಿಯನ್ನು ತಿರಸ್ಕರಿಸಿತ್ತು.

Continue Reading
Advertisement
Sam Pitroda
ದೇಶ12 mins ago

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

World Red Cross Day
Latest17 mins ago

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

Palthady Rama krishna achar
ಕರ್ನಾಟಕ34 mins ago

Palthady Ramakrishna Achar: ತುಳು ಸಾಹಿತಿ, ವಿದ್ವಾಂಸ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Actor Darshan devil starring making video release on may 10
ಸಿನಿಮಾ50 mins ago

Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

Prajwal Revanna Case SIT not issuing notice to Karthik HDK decides to approach Governor and Court
ರಾಜಕೀಯ1 hour ago

Prajwal Revanna Case: ಕಾರ್ತಿಕ್‌ಗೆ ನೋಟಿಸ್‌ ನೀಡದ SIT; ರಾಜ್ಯಪಾಲ, ಕೋರ್ಟ್‌ ಮೊರೆ ಹೋಗಲು ಎಚ್‌ಡಿಕೆ ನಿರ್ಧಾರ

Self Harming
ಕ್ರೈಂ1 hour ago

Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

Flights cancelled
ದೇಶ1 hour ago

Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

prajwal revanna case puttaraj shreyas patel karthik
ಪ್ರಮುಖ ಸುದ್ದಿ2 hours ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Actor Sathyaraj throwback picture of with veteran actor
ಮಾಲಿವುಡ್2 hours ago

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Alia Bhatt Deep Fake Wamiqa Gabbi face replaced
ಬಾಲಿವುಡ್2 hours ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ16 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ19 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ21 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌