Basavakalyana Election results: ಬಸವಕಲ್ಯಾಣದಲ್ಲಿ ಗೆಲುವು ದಾಖಲಿಸಿದ ಬಿಜೆಪಿಯ ಶರಣು ಸಲಗರ - Vistara News

Latest

Basavakalyana Election results: ಬಸವಕಲ್ಯಾಣದಲ್ಲಿ ಗೆಲುವು ದಾಖಲಿಸಿದ ಬಿಜೆಪಿಯ ಶರಣು ಸಲಗರ

ಬೀದರ್‌ನ ಬಸವಕಲ್ಯಾಣ ಕ್ಷೇತ್ರದಲ್ಲಿ ಕಳೆದ ಬಾರಿಯೂ ಭಾರತೀಯ ಜನತಾ ಪಾರ್ಟಿಯ ಶರಣು ಸಲಗರ್ ಅವರು ಗೆಲುವು ಸಾಧಿಸಿದ್ದರು.

VISTARANEWS.COM


on

basavakalyana assembly constituency winner bjp sharanu salagar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀದರ್: ಬೀದರ್‌ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ (Basavakalyana Election results) ಕ್ಷೇತ್ರದಲ್ಲಿ ಬಿಜೆಪಿಯ ಶರಣು ಸಲಗರ ಅವರು 92,920 ಮತ ಪಡೆದು ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ಕಳೆದ ಅವಧಿಯ ಶಾಸಕ ಸರಣು ಸಲಗರ, ಕಾಂಗ್ರೆಸ್‌ನಿಂದ ವಿಜಯ್‌ ಧರಂಸಿಂಗ್‌, ಜೆಡಿಎಸ್‌ನಿಂದ ಸಂಜೀವ್‌ ಕುಮಾರ್‌, ಆಪ್‌ನಿಂದ ದೀಪಕ ಮಲಗರ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ವಿಜಯ್‌ ಧರಂ ಸಿಂಗ್‌ ಅವರು ಎರಡನೇ ಸ್ಥಾನದಲ್ಲಿದ್ದು 78,505 ಮತಗಳನ್ನು ಪಡೆದಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ನಾರಾಯಣರಾವ್‌ 61,425 ಮತಗಳನ್ನು ಪಡೆದು ಇಲ್ಲಿ ಗೆದ್ದಿದ್ದರು. 2022ರಲ್ಲಿ ಮತ್ತೆ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಭಾರತೀಯ ಜನತಾ ಪಾರ್ಟಿಯ ಶರಣು ಸಲಗಾರ್ ಅವರು 71,012 ಮತ ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಮಾಲಾ ಬಿ. ನಾರಾಯಣ್ ರಾವ್ 21 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿರುವ ಒಟ್ಟು ಮತಗಳು 221,073. 1,16,826 ಪುರುಷರು ಹಾಗೂ 1,04,232 ಮಹಿಳೆಯರು.

ಇದನ್ನೂ ಓದಿ: Hirekerur Election Results: ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್‌ಗೆ ಸೋಲು‌, ಕಾಂಗ್ರೆಸ್‌ನ ಯು.ಬಿ ಬಣಕಾರ್‌ಗೆ ಜಯಮಾಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

Party symbols: ಭಾರತದಲ್ಲಿ ಚುನಾವಣೆ ಆರಂಭದಿಂದಲೂ ವಿವಿಧ ಪಕ್ಷಗಳಿಗೆ ಚುನಾವಣಾ ಚಿಹ್ನೆಯನ್ನು ನೀಡಲಾಗುತ್ತಿದೆ. ಆದರೆ ಈಗ ಇರುವ ಚುನಾವಣೆ ಚಿಹ್ನೆಗಳು ಮೊದಲು ಇರಲಿಲ್ಲ. ಪಕ್ಷ ಹುಟ್ಟಿಕೊಂಡ ಕೆಲವು ವರ್ಷಗಳ ಬಳಿಕ ಬಳಕೆಗೆ ಬಂದವು. ಕೆಲವು ಪಕ್ಷಗಳು ತನ್ನ ಚಿಹ್ನೆಯನ್ನು ಕಳೆದುಕೊಂಡು ಹೊಸ ಗುರುತನ್ನು ಪಡೆದಿದೆ. ಈ ಚಿಹ್ನೆಯ ಮಹತ್ವ ಎಷ್ಟು ಗೊತ್ತೇ? ಈ ಕುರಿತ ಸಂಗ್ರಹಯೋಗ್ಯ ಮಾಹಿತಿ ಇಲ್ಲಿದೆ.

VISTARANEWS.COM


on

By

Party symbols
Koo

ಚುನಾವಣೆ (election) ವೇಳೆ ಎಲ್ಲರ ಗಮನ ಸೆಳೆಯುವುದು ಚುನಾವಣಾ ಚಿಹ್ನೆಗಳು. ಈ ಬಾರಿಯೂ ಲೋಕಸಭಾ ಚುನಾವಣೆ- 2024ರಲ್ಲಿ (loksabha election-2024) ಕಣಕ್ಕೆ ಇಳಿದಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ನೀಡಿದ್ದ ಚುನಾವಣಾ ಚಿಹ್ನೆಗಳು ಎಲ್ಲರ ಗಮನ ಸೆಳೆದಿತ್ತು. ಚುನಾವಣಾ ಚಿಹ್ನೆಯ (Party symbols) ಬಳಕೆ ಹೊಸದೇನಲ್ಲ 1951ರ ಮೊದಲ ಚುನಾವಣೆಯಿಂದಲೇ ಅಭ್ಯರ್ಥಿಯನ್ನು (candidate) ಗುರುತಿಸಲು ಚುನಾವಣಾ ಚಿಹ್ನೆಗಳನ್ನು ಬಳಸಲಾಗುತ್ತಿದೆ.

ಚುನಾವಣಾ ಪ್ರಚಾರದ ವೇಳೆ ಜನರ ಗಮನಸೆಳೆಯುವ ಚುನಾವಣಾ ಚಿಹ್ನೆಗಳು ಒಂದೇ ಹೆಸರಿನ ಅಭ್ಯರ್ಥಿಗಳು ಕಣದಲ್ಲಿ ಇದ್ದರೆ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಚಿತ್ರಗಳು ಸಾಮಾನ್ಯವಾಗಿ ಎಲ್ಲರಿಗೂ ನೆನಪಿನಲ್ಲಿ ಉಳಿಯುತ್ತದೆ. ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಸಾಕ್ಷರರ ಪ್ರಮಾಣ ಕಡಿಮೆ ಇತ್ತು. ಹೀಗಾಗಿಯೇ ಚುನಾವಣಾ ಆಯೋಗ ಚಿಹ್ನೆಗಳನ್ನು ಬಳಸಲು ಪ್ರಾರಂಭಿಸಿತ್ತು.

ಅಕ್ಷರಗಳಿಗಿಂತ ಹೆಚ್ಚು ವೇಗವಾಗಿ ಮನ ಮುಟ್ಟುವ ಚುನಾವಣಾ ಚಿಹ್ನೆಗಳು ಮತ್ತು ಅವುಗಳ ಸೃಜನಾತ್ಮಕ ಬಳಕೆಯ ಕುರಿತು ಭಾರತದಲ್ಲಿ ಹಿನ್ನೆಲೆ ಹೇಗಿತ್ತು ಗೊತ್ತೇ ?

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

ಯಾವಾಗ ಆರಂಭ?

1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಸೇರಿ 53 ಪಕ್ಷಗಳ ಅಭ್ಯರ್ಥಿಗಳು ಸುಮಾರು 4,500 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳು ಸ್ಪರ್ಧಿಸಬಹುದಾದ ಪಕ್ಷಗಳಿಗೆ ಚಿಹ್ನೆಗಳನ್ನು ನಿಗದಿಪಡಿಸಿತ್ತು. ಈ ಪ್ರಕ್ರಿಯೆಯು ಚುನಾವಣಾ ಚಿಹ್ನೆಗಳ ಮೀಸಲಾತಿ ಮತ್ತು ಹಂಚಿಕೆ ಆದೇಶ 1968ರಲ್ಲಿ ಹೊರಬಂದು ಇದು ಹೆಚ್ಚು ಸುವ್ಯವಸ್ಥಿತವಾಯಿತು. ಇದರ ಪ್ರಕಾರ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಪಕ್ಷಗಳಿಗೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆಯನ್ನು ಮಾಡಲಾಗುತ್ತದೆ. ಇದು ಎರಡು ಅಥವಾ ಹೆಚ್ಚಿನ ಪಕ್ಷಗಳ ವಿಲೀನದ ಸಂದರ್ಭದಲ್ಲಿ ಅಥವಾ ಪಕ್ಷದಲ್ಲಿ ವಿಭಜನೆಯ ಸಂದರ್ಭದಲ್ಲಿ ಅನ್ವಯಿಸಬಹುದಾದ ನಿಯಮಗಳನ್ನೂ ಹೊಂದಿದೆ.

ವಿಲೀನ, ವಿಭಜನೆಯಾದ ಸಂದರ್ಭದಲ್ಲಿ ಕೆಲವು ಚಿಹ್ನೆಗಳು ಹೊಸದಾಗಿ ಬರುತ್ತದೆ, ಇನ್ನು ಕೆಲವು ಅಳಿಸಿ ಹೋಗುತ್ತದೆ. ಪ್ರಸ್ತುತ ಇರುವ ಚಿಹ್ನೆಗಳು ಹುಟ್ಟಿಕೊಳ್ಳುವುದರ ಹಿಂದೆ ಬಹು ದೊಡ್ಡ ಕಥೆಯೇ ಇದೆ.


ಕಾಂಗ್ರೆಸ್ ನ ಕೈ

ಕಾಂಗ್ರೆಸ್ ಪ್ರಾರಂಭದಲ್ಲಿ ಚುನಾವಣಾ ಚಿಹ್ನೆಯಾಗಿ ನೊಗ ಹಿಡಿದ ಎತ್ತುಗಳನ್ನು ಹೊಂದಿತ್ತು. ಜವಾಹರಲಾಲ್ ನೆಹರು, 1969ರಲ್ಲಿ ಇಂದಿರಾ ಗಾಂಧಿ ಅವರೂ ಜೋಡಿ ಎತ್ತಿನ ಚಿಹ್ನೆಯನ್ನು ಹೊಂದಿದ್ದರು. 1969ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ ಅವರು ಪಕ್ಷದಿಂದ ಹೊರಹೋದಾಗ ಕಾಂಗ್ರೆಸ್ ವಿಭಜನೆಯಾಯಿತು. ಈ ಸಂದರ್ಭದಲ್ಲಿ ಚುನಾವಣಾ ಚಿನ್ಹೆಯಾಗಿದ್ದ ಜೋಡಿ ಎತ್ತುಗಳ ಬಗ್ಗೆ ವಿವಾದ ಉಂಟಾಯಿತು. ಇಂದಿರಾ ಗಾಂಧಿಯವರ ಬಣಕ್ಕೆ ಹಸು, ಕರು ಚಿಹ್ನೆಯನ್ನು ನೀಡಲಾಯಿತು. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು.

ತುರ್ತುಪರಿಸ್ಥಿತಿಯ ಬಳಿಕ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಕೈಯಲ್ಲಿ ಸೋಲು ಅನುಭವಿಸಿದ ಇಂದಿರಾ ಗಾಂಧಿ ಅವರು ಮರಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ತಮ್ಮ ಅಧೀನದಲ್ಲಿರುವ ಪಕ್ಷ ನಿಜವಾದ ಕಾಂಗ್ರೆಸ್ ಎಂದು ಹೇಳಿ ಕಾಂಗ್ರೆಸ್ (ಇಂದಿರಾ) ರಚನೆಯನ್ನು ಘೋಷಿಸಿದರು. 1979ರವರೆಗೆ ಇದ್ದ ಹಸುಕರು ಚಿಹ್ನೆಯನ್ನು ಫ್ರೀಜ್ ಮಾಡಲಾಯಿತು. ಚುನಾವಣಾ ಆಯೋಗವು ಹಲವಾರು ಚಿಹ್ನೆಗಳ ನಡುವೆ ಆಯ್ಕೆಯನ್ನು ನೀಡಿತು. ಅದರಲ್ಲಿ ಕಲ್ಲೇಕುಳಂಗರದ ಕೈಪತಿ ದೇವಸ್ಥಾನ ಅಥವಾ ಕೈ ದೇವಸ್ಥಾನದ ಕಥೆಯು ಇಂದಿರಾ ಗಾಂಧಿಯವರಿಗೆ ‘ಕೈ’ ಚಿಹ್ನೆಯನ್ನು ಪಡೆಯಲು ಪ್ರೇರೇಪಿಸಿತು ಎನ್ನಲಾಗಿದೆ.

ಭಾರತೀಯ ಜನತಾ ಪಕ್ಷ

1980ರಲ್ಲಿ ಬಿಜೆಪಿ ಜನಸಂಘದಿಂದ ಹುಟ್ಟಿಕೊಂಡಿತ್ತು. 1977ರಲ್ಲಿ ಜನ ಸಂಘವು ಜನತಾ ಪಕ್ಷದೊಂದಿಗೆ ವಿಲೀನಗೊಂಡು ಕೇಂದ್ರ ಸರ್ಕಾರವನ್ನು ರಚಿಸಿತ್ತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಭಾರತೀಯ ಜನಸಂಘದ ಚುನಾವಣಾ ಚಿಹ್ನೆ 1977ರ ತನಕ ಎಣ್ಣೆ ದೀಪವಾಗಿತ್ತು. ಬಳಿಕ ಅದು ನೊಗ ಹಿಡಿದ ರೈತನನ್ನು ತನ್ನ ಚಿಹ್ನೆಯಾಗಿ ಬಳಸಿತ್ತು. 1980ರಲ್ಲಿ ಜನತಾ ಪಕ್ಷ ದಿಂದ ಹೊರಬಂದ ಜನಸಂಘ ನಾಯಕರು ಭಾರತೀಯ ಜನತಾ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿ ಅದಕ್ಕೆ ಕಮಲದ ಹೂವು ಚುನಾವಣಾ ಚಿಹ್ನೆಯಾಗಿ ಪಡೆದರು.

ಇದಕ್ಕೆ ಸ್ಫೂರ್ತಿಯಾಗಿದ್ದು 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮುಂಬಯಿಯಲ್ಲಿ ರ್ಯಾಲಿ ನಡೆಸುತ್ತಿದ್ದಾಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತ “ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ ಖಿಲೇಗಾ” ಎಂದು ಹೇಳಿದ್ದರು. 1980ರ ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷದ ರಚನೆಯ ವೇಳೆ ವಾಜಪೇಯಿಯವರ ಕಮಲದ ಚಿಹ್ನೆಯ ಆಯ್ಕೆಯು ಹೊಸ ಪಕ್ಷದ ರಾಷ್ಟ್ರೀಯತಾವಾದಿ ಸಿದ್ಧಾಂತಗಳಿಗೆ ಹೊಂದಿಕೆಯಾಯಿತು. ಹೀಗಾಗಿ ಕಮಲ ಬಿಜೆಪಿಯ ಚಿಹ್ನೆಯಾಯಿತು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಪ್ರಾರಂಭದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಯು ಕತ್ತಿ (ಕುಡುಗೋಲು) ಸುತ್ತಿಗೆ ನಕ್ಷತ್ರಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಿಕೊಂಡಿತ್ತು. 1964ರ ಬಳಿಕ ಐದು-ಬಿಂದುಗಳ ನಕ್ಷತ್ರವನ್ನು ಸೇರಿಸಲಾಯಿತು. ಬಳಿಕ ವಿಭಜನೆಯಾಗಿ ಸಿಪಿಐ (ಎಂ), ಸಿಪಿಐ (ಎಡ) ಪಕ್ಷಗಳು ಹುಟ್ಟಿಕೊಂಡವು. ಆಂಧ್ರಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಲ್ಲಿ ಮಾತ್ರ ಸ್ಥಾನಗಳನ್ನು ಪಡೆದಿರುವ ಸಿಪಿಐ ಪಕ್ಷಕ್ಕೆ 1964ರಲ್ಲಿ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಯಿತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ (ಮಾರ್ಕ್ಸ್‌ವಾದಿ)ಯ ಚುನಾವಣಾ ಚಿಹ್ನೆ ಕತ್ತಿ ಮತ್ತು ಜೋಳದ ತೆನೆಯಾಗಿತ್ತು.


ಬಹುಜನ ಸಮಾಜ ಪಕ್ಷ

1984ರಲ್ಲಿ ಹುಟ್ಟಿಕೊಂಡ ಬಹುಜನ ಸಮಾಜ ಪಕ್ಷ (BSP) 1988ರ ಅಲಹಾಬಾದ್ ಉಪ ಚುನಾವಣೆಯಲ್ಲಿ ತನ್ನ ಛಾಪು ಮೂಡಿಸಿತ್ತು. ಬಿಎಸ್‌ಪಿಯ ಸಂಸ್ಥಾಪಕ ಕಾನ್ಶಿ ರಾಮ್ ಅವರು ಪ್ರಚಾರದ ವೇಳೆ ಆನೆಯ ಮೇಲೆ ನೀಲಿ ಧ್ವಜದ ಚಿಹ್ನೆಯನ್ನು ಬಳಸಿಕೊಂಡರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ‘ಆನೆ’ ಚಿಹ್ನೆಯು ಕಾನ್ಶಿರಾಮ್‌ಗೆ ಹೆಚ್ಚಿನ ಬಲ ತುಂಬಿತ್ತು. ಬಿಎಸ್ಪಿಯ ‘ಆನೆ’ ಭಾರತದಲ್ಲಿ ಕೆಲವು ಪ್ರಾಣಿ ಆಧಾರಿತ ಚುನಾವಣಾ ಚಿಹ್ನೆಗಳಲ್ಲಿ ಒಂದಾಗಿದೆ. ಯಾಕೆಂದರೆ ಚುನಾವಣಾ ಆಯೋಗವು ಈಗ ಹೊಸದಾಗಿ ಪ್ರಾಣಿಗಳ ಚಿಹ್ನೆಗಳನ್ನು ನೀಡುವುದನ್ನು ನಿಲ್ಲಿಸಿದೆ.

ಆಮ್ ಆದ್ಮಿ ಪಕ್ಷ

2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಸಂಘಟನೆ ಇದು. ಅರವಿಂದ್ ಕೇಜ್ರಿವಾಲ್ ಅವರು 2012ರಲ್ಲಿ ಆಮ್ ಆದ್ಮಿ ಪಕ್ಷವನ್ನು ರಚಿಸಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರು. ‘ಪೊರಕೆ’ಯ ಇದರ ಚುನಾವಣಾ ಚಿಹ್ನೆಯಾಗಿದೆ. ಚುನಾವಣಾ ಆಯೋಗಕ್ಕೆ ಪಕ್ಷವು ಸಲ್ಲಿಸಿದ ಮೂರು ಚಿಹ್ನೆಗಳಲ್ಲಿ ‘ಮೇಣದಬತ್ತಿ’ ಮತ್ತು ‘ಟ್ಯಾಪ್’ ಕೂಡ ಇತ್ತು.

ಪೊರಕೆಯ ಚಿಹ್ನೆ ಕಾರ್ಮಿಕರ ಘನತೆಗಾಗಿ ಮಾತ್ರವಲ್ಲ, ನಮ್ಮ ಸರ್ಕಾರ ಮತ್ತು ನಮ್ಮ ಶಾಸಕಾಂಗವನ್ನು ವ್ಯಾಪಿಸಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಪಕ್ಷದ ಆಶಯವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಪಕ್ಷದ ಮುಖಂಡರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ

ಭಾರತದಲ್ಲಿನ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಅನ್ನು 2013ರಲ್ಲಿ ಸ್ಥಾಪಿಸಲಾಯಿತು. ಅದರ ಸಂಸ್ಥಾಪಕ ಮಾಜಿ ಮೇಘಾಲಯ ಮುಖ್ಯಮಂತ್ರಿ ಪಿ.ಎ. ಸಂಗ್ಮಾ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಪುಸ್ತಕವನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡ ಅವರು ಸಾಕ್ಷರತೆ ಮತ್ತು ಶಿಕ್ಷಣವು ದುರ್ಬಲ ವರ್ಗದವರನ್ನು ಸಬಲೀಕರಣಗೊಳಿಸುತ್ತದೆ ಎಂದು ನಂಬುವುದಾಗಿ ಹೇಳಿ ಶಿಕ್ಷಣಕ್ಕೆ ಒತ್ತು ನೀಡುವ ಭರವಸೆ ನೀಡಿದ್ದರು.

ವಿವಿಧ ಪಕ್ಷಗಳಿಗೆ ಒಂದೇ ಚಿಹ್ನೆಗಳು

ಇನ್ನು ರಾಜ್ಯ ಮಟ್ಟದಲ್ಲಿ ಒಂದೇ ಚುನಾವಣಾ ಚಿಹ್ನೆಯನ್ನು ಪಡೆದು ಬೇರೆಬೇರೆ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಇತಿಹಾಸವೂ ಇದೆ. ಒಂದೇ ಕ್ಷೇತ್ರದಿಂದ ಪರಸ್ಪರರ ವಿರುದ್ಧ ಸ್ಪರ್ಧಿಸುವುದಿಲ್ಲವೋ ಅಲ್ಲಿಯವರೆಗೆ ಅದು ಸಾಮಾನ್ಯವಾಗಿ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದರೆ ಪಕ್ಷಗಳು ತನ್ನ ಕಾಯ್ದಿರಿಸಿದ ಚಿಹ್ನೆಯಡಿ ಬೇರೆಯವರಿಗೆ ಸ್ಪರ್ಧಿಸಲು ಅನುಮತಿಸುವುದಿಲ್ಲ ಎಂಬ ಷರತ್ತು ವಿಧಿಸುತ್ತದೆ.

ಬೈಸಿಕಲ್ ಗಾಗಿ ಸ್ಪರ್ಧೆ

ಭಾರತೀಯ ರಾಜಕೀಯ ಇತಿಹಾಸದಲ್ಲಿ ಬೈಸಿಕಲ್ ತೀವ್ರ ಪೈಪೋಟಿಯ ಸಂಕೇತವಾಗಿದೆ. ಎನ್.ಟಿ. ರಾಮರಾವ್ ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ನಡುವೆ ಬೈಸಿಕಲ್ ಗಾಗಿ ಪೈಪೋಟಿ ಏರ್ಪಟ್ಟಿತ್ತು.

1982ರಲ್ಲಿ ಸ್ಥಾಪನೆಯಾದ ಟಿಡಿಪಿಯಿಂದ 1995ರಲ್ಲಿ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಾಗ ಟಿಡಿಪಿಯನ್ನು ಅದರ ‘ಬೈಸಿಕಲ್ ಚಿಹ್ನೆ’ಯೊಂದಿಗೆ ಪಡೆದರು.
ಸುಮಾರು ಒಂದು ದಶಕದ ಅನಂತರ ಸಮಾಜವಾದಿ ಪಕ್ಷದ ರಚನೆಯಾಗಿ ಮುಲಾಯಂ ಸಿಂಗ್ ಯಾದವ್ ಅವರ ಮಗ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಮುಲಾಯಂ ಅವರ ಸಹೋದರ ಶಿವಪಾಲ್ ಯಾದವ್ ನಡುವೆ ಕಲಹ ಉಂಟಾಗಿ ಪಕ್ಷ ಮತ್ತು ಅದರ ಚಿಹ್ನೆಯ ಮೇಲೆ ಅಧಿಕಾರವನ್ನು 2017ರಲ್ಲಿ ಅಖಿಲೇಶ್‌ಗೆ ನೀಡಲಾಯಿತು.


ಬಿಲ್ಲು ಮತ್ತು ಬಾಣ

ಪ್ರಸ್ತುತ ಸ್ಪರ್ಧೆಯಲ್ಲಿರುವ ಮತ್ತೊಂದು ಚಿಹ್ನೆ ಮಹಾರಾಷ್ಟ್ರದಲ್ಲಿ ‘ಬಿಲ್ಲು ಮತ್ತು ಬಾಣ’. ಏಕನಾಥ್ ಶಿಂಧೆ ನೇತೃತ್ವದ “ನೈಜ” ಶಿವಸೇನೆಗೆ ಹಂಚಲ್ಪಟ್ಟ ಈ ಚಿಹ್ನೆಯನ್ನು ಮೊದಲು 1989ರಲ್ಲಿ ಬಾಳ್ ಠಾಕ್ರೆ ಅವರು ಬಳಸಿದ್ದರು.

1972ರಲ್ಲಿ ರಚಿಸಲಾದ ಜಾರ್ಖಂಡ್ ಮುಕ್ತಿ ಮೋರ್ಚಾ ಜಾರ್ಖಂಡ್‌ನಲ್ಲಿ ಅದೇ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಬಳಸುತ್ತದೆ. ಬಿಹಾರದ ಜನತಾ ದಳ (ಯುನೈಟೆಡ್) ಪಕ್ಷದ ಚಿಹ್ನೆಯು ‘ಬಾಣ’ವಾಗಿದೆ. 2019 ರಲ್ಲಿ ಚುನಾವಣಾ ಆಯೋಗವು ಮಹಾರಾಷ್ಟ್ರ ಅಥವಾ ಜಾರ್ಖಂಡ್‌ನಲ್ಲಿ ಈ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. .

Continue Reading

Latest

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Char Dham Yatra 2024: ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ್ ಗೆ ನಡೆಸುವ ಯಾತ್ರೆಗೆ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದ ಬಳಿಕ ಈ ನಾಲ್ಕು ದೇವಾಲಯದ ಬಾಗಿಲುಗಳು ತೆರೆಯಲಿದ್ದು, ಆರು ತಿಂಗಳ ಕಾಲ ಭಕ್ತರ ಭೇಟಿಗೆ ಅವಕಾಶವಿದೆ. ಆದರೆ ಅಲ್ಲಿಗೆ ಹೋಗಲು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Char Dham Yatra 2024
Koo

ಚಾರ್ ಧಾಮ್ ಯಾತ್ರೆ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತಾರೆ. ಆದರೆ ಎಲ್ಲರಿಗೂ ಅಲ್ಲಿ ಹೋಗೋ ಅವಕಾಶ ಸಿಗುವುದಿಲ್ಲ. ಹಲವು ಬಾರಿ ಯೋಜನೆ ಮಾಡಿ ಯಾವುದೋ ಕಾರಣದಿಂದ ಅದನ್ನು ಮುಂದೂಡಿರುತ್ತಾರೆ. ಆದರೆ ಈ ಬಾರಿ ಬೇಸಿಗೆ ರಜೆಯಲ್ಲೇ (summer holidays) ಚಾರ್ ಧಾಮ್ ಯಾತ್ರೆ (Char Dham Yatra 2024) ಮಾಡಿ ಬರಬಹುದು.

ಚಾರ್ ಧಾಮ್ ಯಾತ್ರೆ ಎಂದೇ ಕರೆಯಲ್ಪಡುವ ಉತ್ತರಾಖಂಡದ (uttarakhand) ನಾಲ್ಕು ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ (Gangotri), ಯಮುನೋತ್ರಿ (Yamunotri), ಕೇದಾರನಾಥ ( Kedarnath) ಮತ್ತು ಬದರಿನಾಥರ (Badrinath) ವಾರ್ಷಿಕ ತೀರ್ಥಯಾತ್ರೆಯ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದೆ.
ಯಾತ್ರೆಗೆ ಬರಲು ಇಚ್ಛಿಸುವವರು ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ಪ್ರಾರಂಭ

ವಾರ್ಷಿಕ ಚಾರ್ ಧಾಮ್ ಯಾತ್ರೆಯು ಮೇ 10ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಈ ಮೂರು ದೇಗುಲಗಳಲ್ಲಿ ಬಾಗಿಲನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ. ಬದರಿನಾಥ ದೇವಾಲಯದ ಬಾಗಿಲು ಮೇ 12 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಆರು ತಿಂಗಳು ಬಂದ್

ಪ್ರತಿ ವರ್ಷ ಲಕ್ಷಾಂತರ ಭಕ್ತರು ಎತ್ತರದಲ್ಲಿರುವ ಈ ಪವಿತ್ರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಚಳಿಗಾಲದ ತಿಂಗಳ ಆರಂಭದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಲಾಗುತ್ತದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಿನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ.

ಪ್ರದಕ್ಷಿಣಾಕಾರ ಪೂಜೆ

ಹಿಂದೂ ಧರ್ಮದಲ್ಲಿ ಈ ಪವಿತ್ರ ದೇವಾಲಯಗಳು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಇಲ್ಲಿ ಪ್ರದಕ್ಷಿಣಾಕಾರವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದೇ ನಂಬಲಾಗಿದೆ. ಹೀಗಾಗಿ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿ ಕಡೆಗೆ ಸಾಗುತ್ತದೆ, ಕೇದಾರನಾಥದ ಭೇಟಿ ಬಳಿಕ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

ನೋಂದಣಿ ಹೇಗೆ?

ಚಾರ್ ಧಾಮ್ ಯಾತ್ರೆಗೆ ಹೋಗಲು ಇಚ್ಛಿಸುವವರು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಚಾರ್ ಧಾಮ್ ಯಾತ್ರೆಗಾಗಿ ಗೊತ್ತುಪಡಿಸಿದ ಅಧಿಕೃತ ವೆಬ್‌ಸೈಟ್‌ನಲ್ಲಿ andtouristcare.uk.gov.in ಅಥವಾ registrationandtouristcare.uk.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮೊದಲು ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಅಥವಾ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹೆಸರು, ಸಂಪರ್ಕ ಸಂಖ್ಯೆ, ಇಮೇಲ್ ಐಡಿ, ಇತ್ಯಾದಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಿ.

ಬಳಿಕ ಹೊಸ ಡ್ಯಾಶ್‌ಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ವ್ಯಕ್ತಿಯು ಪ್ರಯಾಣದ ದಿನಾಂಕಗಳು, ಪ್ರವಾಸಿಗರ ಸಂಖ್ಯೆ, ಭೇಟಿ ನೀಡಲು ದೇವಾಲಯಗಳು ಸೇರಿದಂತೆ ಹೆಚ್ಚಿನ ಪ್ರವಾಸದ ವಿವರಗಳನ್ನು ನೋಡಬಹುದು.
ನೋಂದಣಿ ಪೂರ್ಣಗೊಂಡ ಅನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ ಮತ್ತು ಮುಂದೆ ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ನೋಂದಣಿಗೆ ಬೇರೆ ಅವಕಾಶವೂ ಇದೆ

ವೆಬ್‌ಸೈಟ್‌ನ ಹೊರತಾಗಿ ಪ್ರವಾಸಿಗರು ಟೂರಿಸ್ಟ್‌ಕೇರರ್ ತಾರಾಖಂಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಲು ಇನ್ನೊಂದು ಮಾರ್ಗವೆಂದರೆ WhatsApp ನಲ್ಲಿ 8394833833 ಗೆ ಸಂದೇಶ ಕಳುಹಿಸುವುದು. ಪ್ರವಾಸೋದ್ಯಮ ಇಲಾಖೆಯು ಟೋಲ್ ಫ್ರೀ ಸಂಖ್ಯೆ 0135-1364 ಅನ್ನು ಡಯಲ್ ಮಾಡುವ ಮೂಲಕ ನೋಂದಣಿ ಸೇವೆಯನ್ನು ಪೂರ್ಣಗೊಳಿಸಬಹುದು.

ಇದಲ್ಲದೇ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ರಿಷಿಕೇಶ ಮತ್ತು ಹರಿದ್ವಾರದಲ್ಲಿ ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಿದೆ. ಅಲ್ಲಿ ಯಾತ್ರಾರ್ಥಿಗಳು ಆಫ್‌ಲೈನ್ ನೋಂದಣಿ ನಡೆಸಬಹುದು. ಯಾತ್ರಿಕರು ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಇಲ್ಲಿ ತೋರಿಸಬೇಕಾಗುತ್ತದೆ.

ದೇಗುಲಗಳ ವಿಶೇಷತೆ


ಯಮುನೋತ್ರಿ ಧಾಮ್ ದೇವಾಲಯವು ಯಮುನಾ ನದಿಯ ಮೂಲಕ್ಕೆ ಸಮೀಪದಲ್ಲಿ 3,293 ಮೀಟರ್ ಎತ್ತರದಲ್ಲಿ ಕಿರಿದಾದ ಕಂದರದಲ್ಲಿದೆ. ದೇವಾಲಯವು ಅಕ್ಷಯ ತೃತೀಯದಂದು ತೆರೆಯುತ್ತದೆ. ಚಳಿಗಾಲಕ್ಕಾಗಿ ಮುಂಚಿತವಾಗಿ ಯಮ ದ್ವಿತೀಯ ಅಂದರೆ ದೀಪಾವಳಿಯ ಅನಂತರ ಎರಡನೇ ದಿನ ಮುಚ್ಚುತ್ತದೆ. ಯಮುನೆಯ ನಿಜವಾದ ಮೂಲವು ಸುಮಾರು 4,421 ಮೀಟರ್ ಎತ್ತರದಲ್ಲಿ ದೇವಸ್ಥಾನಕ್ಕಿಂತ ಸ್ವಲ್ಪ ಮುಂದಿದೆ.


ಗಂಗೋತ್ರಿ ಗಂಗಾ ನದಿಯ ಅಥವಾ ಗೌಮುಖ ನದಿಯ ಮೂಲವೆಂದು ಪರಿಗಣಿಸಲಾಗಿದೆ. ಗಂಗೋತ್ರಿ ಧಾಮವು ಭಾಗೀರಥಿಯ ಬಲದಂಡೆಯಲ್ಲಿ ಸಮುದ್ರ ಮಟ್ಟದಿಂದ 3,140 ಮೀಟರ್ ಎತ್ತರದಲ್ಲಿದೆ.


ಕೇದಾರನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ರುದ್ರಪ್ರಯಾಗ ಜಿಲ್ಲೆಯ ಮಂದಾಕಿನಿ ನದಿಯ ಸಮೀಪದಲ್ಲಿದೆ.


ಭಗವಾನ್ ವಿಷ್ಣುವಿನ ಪವಿತ್ರ ಚಾರ್ ಧಾಮಗಳಲ್ಲಿ ಒಂದಾಗಿರುವ ಬದರಿನಾಥವನ್ನು ಭೂಮಿಯ ಮೇಲಿನ ವೈಕುಂಠ ಅಂದರೆ ಭಗವಾನ್ ವಿಷ್ಣುವಿನ ನಿವಾಸ ಎಂದು ಪರಿಗಣಿಸಲಾಗಿದೆ. ಸುಮಾರು 3,100 ಮೀ. ಎತ್ತರದಲ್ಲಿ ಗರ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಡದಲ್ಲಿ ಈ ಪವಿತ್ರ ಪಟ್ಟಣವು ನಾರ್ ಮತ್ತು ನಾರಾಯಣ ಪರ್ವತ ಶ್ರೇಣಿಗಳ ನಡುವೆ ಇದೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಋಷಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾಗಿದೆ.

Continue Reading

ವಿದೇಶ

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Workers protest: ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಗೂಗಲ್ ಕಂಪೆನಿಯ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದ್ದು, ಇದೀಗ 28 ಮಂದಿಯನ್ನು ವಜಾಗೊಳಿಸಲಾಗಿದೆ.

VISTARANEWS.COM


on

By

Workers protest
Koo

ನ್ಯೂಯಾರ್ಕ್: ಇಸ್ರೇಲ್ ನೊಂದಿಗಿನ (Israel) ಕಂಪೆನಿ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಉದ್ಯೋಗಿಗಳನ್ನು (Workers protest) ಟೆಕ್ ದೈತ್ಯ ಗೂಗಲ್ (google) ವಜಾಗೊಳಿಸಿದೆ. ಇಸ್ರೇಲ್ ಸರ್ಕಾರ ಮತ್ತು ಸೇನೆಗೆ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸಲು ಗೂಗಲ್ ಅಮೆಜಾನ್ ನೊಂದಿಗೆ (Amazon) ಸೇರಿ 1.2 ಬಿಲಿಯನ್ ಡಾಲರ್ ನ ಒಪ್ಪಂದ ಮಾಡಿಕೊಂಡಿತ್ತು.

ಇಸ್ರೇಲ್ ಸರ್ಕಾರದೊಂದಿಗೆ ಗೂಗಲ್ ಮಾಡಿರುವ 1.2 ಬಿಲಿಯನ್ ಡಾಲರ್ ಜಂಟಿ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ (Project Nimbus) ಅನ್ನು ವಿರೋಧಿಸಿ ಸಿಯಾಟಲ್, ನ್ಯೂಯಾರ್ಕ್ (New York) ಮತ್ತು ಕ್ಯಾಲಿಫೋರ್ನಿಯಾದ (California) ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ಕಾರ್ಮಿಕರು ಏಪ್ರಿಲ್ 16 ರಂದು ಪ್ರತಿಭಟನೆ ನಡೆಸಿದ್ದರು.

ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪನಿಯ ಕಚೇರಿಗಳಲ್ಲಿ ಮಂಗಳವಾರ ರಾತ್ರಿ ಧರಣಿ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಇದೀಗ 28 ಮಂದಿಯನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ಒಂಬತ್ತು ಮಂದಿ ಬಂಧನ

ಪ್ರಾಜೆಕ್ಟ್ ನಿಂಬಸ್ ವಿರುದ್ಧ ನೋ ಟೆಕ್ ಫಾರ್ ಅಪಾರ್ತೀಡ್ ಸಂಘಟನೆಯ ನೇತೃತ್ವದಲ್ಲಿ ಗೂಗಲ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ನ್ಯೂಯಾರ್ಕ್ ಕಚೇರಿ ಹಾಗೂ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ನಡೆದ ಪ್ರತಿಭಟನೆ ವೇಳೆ ಒಂಬತ್ತು ಗೂಗಲ್ ಉದ್ಯೋಗಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಇಸ್ರೇಲ್ ಜೊತೆಗಿನ ಒಪ್ಪಂದ ಏನು ?

ಇಸ್ರೇಲ್ ಸರ್ಕಾರ ಮತ್ತು ಮಿಲಿಟರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ನೀಡಲು ಗೂಗಲ್ ಮತ್ತು ಅಮೆಜಾನ್ ಜಂಟಿಯಾಗಿ 1.2 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು, ಡೇಟಾ ಕೇಂದ್ರಗಳು ಮತ್ತು ಇತರ ಕ್ಲೌಡ್ ಮೂಲಸೌಕರ್ಯಗಳು ಸೇರಿವೆ.

ತನಿಖೆ ಮುಂದುವರಿಯಲಿದೆ

ಗೂಗಲ್ ಉದ್ಯೋಗಿಗಳ ಪ್ರತಿಭಟನೆ ಬಳಿಕ ಸಂದೇಶ ಕಳುಹಿಸಿರುವ ಗ್ಲೋಬಲ್ ಸೆಕ್ಯುರಿಟಿಯ ಗೂಗಲ್‌ನ ಉಪಾಧ್ಯಕ್ಷ ಕ್ರಿಸ್ ರಾಕೋವ್, ಪ್ರಕರಣದ ತನಿಖೆಯ ಬಳಿಕ ಇದೀಗ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯವಿರುವಂತೆ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಬಂಧಿತರಾಗಿರುವ ಕೆಲವರನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಮುಂದೆ ಅವರು ಕೆಲಸಕ್ಕೆ ಮರಳಲು ಹೆಚ್ ಆರ್ ಮೂಲಕ ಸಂಪರ್ಕಿಸುವವರೆಗೆ ಕಾಯಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ನೋ ಟೆಕ್ ಫಾರ್ ವರ್ಣಭೇದ ನೀತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗೂಗಲ್ 28 ಮಂದಿ ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದೆ. 10 ಗಂಟೆಗಳ ಧರಣಿಯಲ್ಲಿ ನೇರವಾಗಿ ಭಾಗವಹಿಸದೇ ಇರುವವರೂ ಇದರಲ್ಲಿ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಾಜೆಕ್ಟ್ ನಿಂಬಸ್ ವಿರುದ್ಧ ಗುಂಪು ಸಂಘಟಿಸಲಾಗುತ್ತಿದೆ. ಅವರ ಕಾಳಜಿಗಳ ಬಗ್ಗೆ ಎಕ್ಸಿಕ್ಯೂಟಿವ್‌ನಿಂದ ಇದುವರೆಗೂ ಏನೂ ಕೇಳಿಲ್ಲ ಎಂದು ಅದು ಹೇಳಿದೆ.

ಗೂಗಲ್ ಏನು ಹೇಳಿದೆ?

ಕಚೇರಿಗಳಲ್ಲಿ ನಡೆದ ಪ್ರತಿಭಟನೆಗಳ ವರದಿಗಳ ಬಗ್ಗೆ ನೋಡಿದ್ದೀರಿ, ಕೇಳಿದ್ದೀರಿ. ದುರದೃಷ್ಟವಶಾತ್ ಹಲವಾರು ಉದ್ಯೋಗಿಗಳು ನ್ಯೂಯಾರ್ಕ್ ಮತ್ತು ಸನ್ನಿವೇಲ್‌ನಲ್ಲಿರುವ ಕಟ್ಟಡಗಳಿಗೆ ಸೇರಿದ ಆಸ್ತಿಗೆ ಹಾನಿಗೊಳಿಸಿದ್ದಾರೆ. ಇತರ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಅವರ ನಡವಳಿಕೆಯು ಸ್ವೀಕಾರಾರ್ಹವಲ್ಲ. ಇದು ಇತರ ಸಹೋದ್ಯೋಗಿಗಳಲ್ಲಿ ಬೆದರಿಕೆಯನ್ನುಂಟು ಮಾಡಿತು. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಉದ್ಯೋಗಿಗಳನ್ನು ತನಿಖೆಯ ಅಡಿಯಲ್ಲಿ ಇರಿಸಿದ್ದೇವೆ. ನಮ್ಮ ಸಿಸ್ಟಮ್‌ಗಳಿಗೆ ಅವರ ಪ್ರವೇಶವನ್ನು ಕಡಿತಗೊಳಿಸಿದ್ದೇವೆ. ತನಿಖೆಯ ಬಳಿಕ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇನ್ನೂ ತನಿಖೆ ಮುಂದುವರಿಯಲಿದೆ. ಅಗತ್ಯವಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ.

ಈ ರೀತಿಯ ವರ್ತನೆಗೆ ನಮ್ಮ ಕೆಲಸದ ಸ್ಥಳದಲ್ಲಿ ಸ್ಥಾನವಿಲ್ಲ ಮತ್ತು ನಾವು ಅದನ್ನು ಸಹಿಸುವುದಿಲ್ಲ. ನಮ್ಮ ನೀತಿ ಸಂಹಿತೆ ಮತ್ತು ಕಿರುಕುಳ, ತಾರತಮ್ಯ, ಪ್ರತೀಕಾರ, ನಡವಳಿಕೆಯ ಮಾನದಂಡಗಳು ಮತ್ತು ಕಾರ್ಯಸ್ಥಳದ ಕಾಳಜಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳು ಅನುಸರಿಸಬೇಕಾದ ಬಹು ನೀತಿಗಳನ್ನು ಇದು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ನೀತಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಂಪೆನಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.

Continue Reading

ಮಳೆ

Weather Report: ಬೆಂಗಳೂರಿನ ಜನ ಮಳೆಗಾಗಿ ಮೇವರೆಗೆ ಕಾಯಬೇಕು!

Weather Alert: ಒಂದೆಡೆ ಕುಡಿಯಿವ ನೀರಿಲ್ಲ, ಮತ್ತೊಂದೆಡೆ ಬಿಸಿಲಿನ ತೀವ್ರತೆ ಜನರನ್ನು ಕಂಗೆಡುವಂತೆ ಮಾಡಿದೆ. ಬಿಸಿಲಿನ ತೀವ್ರತೆ ನೋಡಿ ಬೇಗ ಮಳೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ. ರಾಜ್ಯದಲ್ಲಿ ಶೀಘ್ರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VISTARANEWS.COM


on

By

Rain in Karnataka
Koo

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟ ಕರ್ನಾಟಕದ (karnataka) ಜನತೆ ಇಂದು ಮಳೆಯಾಗಬಹುದೋ (rain), ನಾಳೆ ಮಳೆ ಸುರಿಯಬಹುದೋ (Rain in karnataka) ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದರೆ ರಾಜ್ಯದ ಅಲ್ಲಿ ಇಲ್ಲಿ ಸಣ್ಣ ಮಳೆ ಸುರಿದು ಕೊಂಚ ನಿರೀಕ್ಷೆ ಮೂಡಿಸಿದರೂ ಬಳಿಕ ತೀವ್ರ ಬಿಸಿಲು ಮತ್ತಷ್ಟು ಧಗೆಯನ್ನು ಹೆಚ್ಚು ಮಾಡಿದೆ.

ಭಾರತದ (india) ಸಿಲಿಕಾನ್ ಸಿಟಿ (Silicon City) ಬೆಂಗಳೂರಿನಲ್ಲಿ (bengaluru) ಕಳೆದ ಮೂರು ತಿಂಗಳಿನಿಂದ ತೀವ್ರ ಬಿಸಿಲು ಜನರನ್ನು ಕಂಗೆಡಿಸಿದೆ. ಏಪ್ರಿಲ್ ನಲ್ಲಿ (april) ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆಯು (IMD) ಏಪ್ರಿಲ್‌ನಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಏಪ್ರಿಲ್ ತಿಂಗಳಲ್ಲಿ ಯಾವುದೇ ಮಳೆಯಾಗುವುದಿಲ್ಲ (Weather Report ಎಂದು ಹೇಳಿದೆ.

ಬೆಂಗಳೂರಿನಲ್ಲಿ ಶುಷ್ಕ ಸ್ಪೆಲ್‌ಗಳು ಸುಮಾರು 100- 120 ದಿನಗಳವರೆಗೆ ಇರುತ್ತದೆ. ಆದರೆ ಇದು ಸಾಮಾನ್ಯಕ್ಕಿಂತ ಹೆಚ್ಚು ದೀರ್ಘವಾಗಿದೆ. ಆರಂಭದಲ್ಲಿ ಭಾರತೀಯ ಹವಾಮಾನ ಇಲಾಖೆಯು ವಾರದೊಳಗೆ ಬೆಂಗಳೂರಿಗೆ ಮಳೆಯಾಗುವ ಮುನ್ಸೂಚನೆ ನೀಡಿತು. ಆದರೆ ಇತ್ತೀಚಿನ ವರದಿ ವರದಿ ಪ್ರಕಾರ ತೀವ್ರವಾದ ಶಾಖದ ಕಾರಣದಿಂದ ಶೀಘ್ರದಲ್ಲಿ ಮಳೆಯಾಗುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Dubai Rain: ಭಾರತೀಯ ಕುಸ್ತಿಪಟುಗಳ ಪ್ಯಾರಿಸ್​ ಒಲಿಂಪಿಕ್ಸ್​ ಕನಸಿಗೆ ತಣ್ಣೀರೆರಚಿದ ದುಬೈ ಮಳೆ

ಮುಂದಿನ 10 ದಿನ ಮಳೆಯಿಲ್ಲ

ಘಟ್ಟ ಪ್ರದೇಶಗಳನ್ನು ಹೊರತುಪಡಿಸಿ ಮುಂದಿನ 10 ದಿನ ಬೆಂಗಳೂರು ಸೇರಿ ಕರ್ನಾಟಕದ ಯಾವುದೇ ಪ್ರದೇಶಗಳಲ್ಲಿ ಮಳೆಯಾಗುವುದಿಲ್ಲ ಎಂದು ECMWF ಮತ್ತು GFS ಸೂಚಿಸುತ್ತದೆ.

ಏಪ್ರಿಲ್‌ನಲ್ಲಿ ನಿರೀಕ್ಷಿತ ತುಂತುರು ಮಳೆಯಾಗುವ ಸಂಭವ ಇದೆ. ಕೆಲವು ಪ್ರದೇಶಗಳಲ್ಲಿ ಮಳೆ ಕಾಣಿಸಿಕೊಳ್ಳಬಹುದು, ಇನ್ನು ಕೆಲವು ಪ್ರದೇಶಗಳಲ್ಲಿ ಇಲ್ಲದೇ ಇರಬಹುದು.


ಮೇಯಲ್ಲಿ ಮಳೆ ಸಾಧ್ಯತೆ

ಮೇ ತಿಂಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದು ಬಿಸಿಲಿನ ತೀವ್ರತೆಯಿಂದ ಉರಿಯುತ್ತಿರುವ ಧರೆಯನ್ನು ಕೊಂಚ ತಂಪಾಗಿಸುತ್ತದೆ.

ಚಂಡಮಾರುತ ಎಚ್ಚರಿಕೆ

ಮೇ ತಿಂಗಳಲ್ಲಿ ಚಂಡಮಾರುತ ಕಾಣಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮುಂದಿನ ವಾರದಲ್ಲಿ ಭಾಗಶಃ ಮೋಡ ಮತ್ತು ಬಹುತೇಕ ಸ್ಪಷ್ಟವಾದ ಆಕಾಶ ಕಾಣಿಸಲಿದೆ. ಏಪ್ರಿಲ್‌ನಲ್ಲಿ 21ರಿಂದ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.

ಟೈಮಂಡ್‌ಡೇಟ್ ಮುನ್ಸೂಚನೆ ಪ್ರಕಾರ ಏಪ್ರಿಲ್ 30ರಂದು ಶೇ. 55ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, 6.5 ಮಿಮೀಗಿಂತ ಹೆಚ್ಚಿನ ಮಳೆ ಬೀಳುವ ನಿರೀಕ್ಷೆಯಿದೆ.


ದುಬೈಯಲ್ಲಿ ಭಾರೀ ಮಳೆ

ಸಾಮಾನ್ಯವಾಗಿ ಒಣ ಹವಾಮಾನ ಮತ್ತು ಸುಡುವ ತಾಪಮಾನವನ್ನು ಹೊಂದಿರುವ ಒಮಾನ್‌ , ದುಬೈ ಬಹ್ರೇನ್‌ ರಾಷ್ಟ್ರಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಠಾತ್‌ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಅನಿರೀಕ್ಷಿತವಾದ ಜಲಧಾರೆ ಮರುಭೂಮಿ ನಗರವನ್ನು ಸ್ತಬ್ಧಗೊಳಿಸಿದೆ. ಮಾತ್ರವಲ್ಲದೆ, ಹವಾಮಾನ ವೈಪರೀತ್ಯದ ಹೆಚ್ಚು ಸ್ಪಷ್ಟವಾದ ಪ್ರಭಾವವನ್ನು ತೋರಿಸಿ ಕಳವಳವನ್ನು ಹುಟ್ಟುಹಾಕಿದೆ.

ಆಕಸ್ಮಿಕ ಚಂಡಮಾರುತದ ಪ್ರಭಾವ ದುಬೈನ ಆಚೆಗೂ ವಿಸ್ತರಿಸಿದೆ. ಸಂಪೂರ್ಣ ಯುಎಇ ಮತ್ತು ನೆರೆಯ ಬಹ್ರೇನ್ ಪ್ರವಾಹ ಮತ್ತು ಅವ್ಯವಸ್ಥೆಯನ್ನು ಅನುಭವಿಸುತ್ತಿದೆ. ಎಮಿರೇಟ್ಸ್‌ನಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಆಲಿಕಲ್ಲು ಮಳೆ ಸುರಿದಿದೆ. ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಮಾಡಲು ಕೇಳಿಕೊಳ್ಳಲಾಗಿದೆ. ಚಂಡಮಾರುತದಿಂದಾಗಿ ಬಹ್ರೇನ್ ಕೂಡ ಪ್ರವಾಹವನ್ನು ಅನುಭವಿಸಿದೆ.

Continue Reading
Advertisement
ಕರ್ನಾಟಕ2 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ2 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ2 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ2 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ3 hours ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 20243 hours ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ3 hours ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ3 hours ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ3 hours ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ10 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ21 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌