PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್‌ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ - Vistara News

ದೇಶ

PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್‌ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ

ನಾಳೆ (ಜುಲೈ 14) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದಾರೆ. ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ದಿನಾಚರಣೆ (Bastille Day) ಯಲ್ಲಿ ಭಾಗವಹಿಸುವಂತೆ ಅಲ್ಲಿನ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಅವರು ಮೋದಿಯವರಿಗೆ ಆಹ್ವಾನ ನೀಡಿದ್ದು, ಈ ಆಮಂತ್ರಣವನ್ನು ಮನ್ನಿಸಿ ಮೋದಿ ಅಲ್ಲಿಗೆ ತೆರಳುತ್ತಿದ್ದಾರೆ.

VISTARANEWS.COM


on

Uttarkashi Tunnel rescue success makes us emotional says PM Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಬದಲಾಗುತ್ತಿರುವ ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವವಾಗಿ, ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿರುವ ಭಾರತಕ್ಕೆ ಹೆಚ್ಚಿನ ಸ್ಥಾನಮಾನ, ಹೊಣೆಗಾರಿಕೆ ಸಿಗಬೇಕಾಗಿದೆ. ಜಾಗತಿಕ ದಕ್ಷಿಣ ಹಾಗೂ ಉತ್ತರದ ನಡುವೆ ಸೇತುವೆಯಾಗಿ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ನಾಳೆ (ಜುಲೈ 14) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದಾರೆ. ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ದಿನಾಚರಣೆ (Bastille Day) ಯಲ್ಲಿ ಭಾಗವಹಿಸುವಂತೆ ಅಲ್ಲಿನ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌ (Emmanuel Macron) ಅವರು ಮೋದಿಯವರಿಗೆ ಆಹ್ವಾನ ನೀಡಿದ್ದು, ಈ ಆಮಂತ್ರಣವನ್ನು ಮನ್ನಿಸಿ ಮೋದಿ ಅಲ್ಲಿಗೆ ತೆರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ʼಲೆಸ್‌ ಇಕೊʼ (Les Echos) ಪತ್ರಿಕೆಗೆ ನರೇಂದ್ರ ಮೋದಿ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಭಾರತ- ಫ್ರಾನ್ಸ್‌ಗಳ ದ್ವಿಪಕ್ಷೀಯ ಸಂಬಂಧ, ಇಂಡೋ- ಪೆಸಿಫಿಕ್‌ನ ವ್ಯೂಹಾತ್ಮಕ ಭಾಗೀದಾರಿಕೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನಮಾನ ನೀಡಬೇಕಾದ ಅಗತ್ಯ, ಚೀನಾದ ಆರ್ಥಿಕ ಆತಂಕ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದಿಂದ ಆಯ್ದ ಭಾಗಗಳು ಇಲ್ಲಿವೆ.

ಜಾಗತಿಕವಾಗಿ ಭಾರತದ ಸ್ಥಾನಮಾನ

ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಶ್ರೀಮಂತ ನಾಗರಿಕತೆ. ಇಂದು ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರ ಕೂಡ. ಭಾರತದ ಪ್ರಬಲ ಆಸ್ತಿ ಯುವಜನ. ಮುಂಬರುವ ದಶಕಗಳಲ್ಲಿ ಪ್ರಪಂಚದ ಅನೇಕ ದೇಶಗಳಿಗೆ ವಯಸ್ಸಾಗುವಾಗ ಮತ್ತು ಅವುಗಳ ಜನಸಂಖ್ಯೆ ಕುಗ್ಗುವಾಗ, ಭಾರತದ ಯುವ ಮತ್ತು ನುರಿತ ಉದ್ಯೋಗಿಗಳು ಪ್ರಪಂಚಕ್ಕೆ ಆಸ್ತಿಯಾಗಿರುತ್ತಾರೆ. ಭಾರತೀಯರ ವಿಶೇಷತೆಯೆಂದರೆ ಅವರ ಮುಕ್ತತೆ. ಇವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ಸುಕರು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿರುತ್ತಾರೆ. ಇಂದಿಗೂ ʼಭಾರತೀಯ ವೇದಿಕೆʼ ಎಲ್ಲೇ ಇದ್ದರೂ ಅಲ್ಲಿಗೆ ತಮ್ಮ ಕೊಡುಗೆ ನೀಡುತ್ತಾರೆ. ತಾವು ನೆಲೆಸಿದ ನಾಡಿನ ಜತೆಗೆ ತಾಯ್ನಾಡಿನ ಸಮೃದ್ಧಿಯತ್ತಲೂ ಚಿಂತಿಸುತ್ತಾರೆ. ಭಾರತದಲ್ಲಿ ಮನುಕುಲದ ಆರನೇ ಒಂದು ಭಾಗವಿದ್ದು, ಇದು ಜಗತ್ತಿಗೆ ಹೆಚ್ಚು ಸುಸ್ಥಿರ ಭವಿಷ್ಯವನ್ನು ನೀಡುತ್ತದೆ. ಭಾರತ ಸಾಟಿಯಿಲ್ಲದ ಸಾಮಾಜಿಕ ಮತ್ತು ಆರ್ಥಿಕತೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಈ ನಾಡು ವೈವಿಧ್ಯತೆಯ ನಡುವೆ ಸಾಮರಸ್ಯ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ತೋರಿಸಿದೆ. ಹಾಗೆಯೇ ಈ ಬೃಹತ್‌ ದೇಶ ಜಾಗತಿಕವಾಗಿ ತಕ್ಕ ಸ್ಥಾನಮಾನ ಪಡೆಯುವ ನಿರೀಕ್ಷೆಯಲ್ಲಿದೆ.

ಜನಸಂಖ್ಯೆ ನಮ್ಮ ಶಕ್ತಿ

ಅನಾದಿ ಕಾಲದಿಂದಲೂ ಜಾಗತಿಕ ಆರ್ಥಿಕ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ಮಾನವ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಇಂದು ಪ್ರಪಂಚದಾದ್ಯಂತ ಬಹಳಷ್ಟು ಸಮಸ್ಯೆ ಮತ್ತು ಸವಾಲುಗಳಿವೆ. ಆರ್ಥಿಕ ಹಿಂಜರಿತ, ಆಹಾರ ಭದ್ರತೆಯ ಕೊರತೆ, ಹಣದುಬ್ಬರ, ಸಾಮಾಜಿಕ ಉದ್ವಿಗ್ನತೆ ಇತ್ಯಾದಿ. ಇಂತಹ ಜಾಗತಿಕ ವಾತಾವರಣದ ಹಿನ್ನೆಲೆಯಲ್ಲಿಯೂ ನಾವು ಇಲ್ಲಿನ ಜನರಲ್ಲಿ ವಿಶ್ವಾಸ, ಭವಿಷ್ಯದ ಬಗ್ಗೆ ಆಶಾವಾದ ಮತ್ತು ಜಗತ್ತಿನಲ್ಲಿ ತನ್ನ ಸರಿಯಾದ ಸ್ಥಾನ ಪಡೆಯುವ ಉತ್ಸುಕತೆಯನ್ನು ಕಾಣಬಹುದು.

ನಮ್ಮ ಜನಸಂಖ್ಯಾ ಬಂಡವಾಳ, ಪ್ರಜಾಪ್ರಭುತ್ವದಲ್ಲಿ ನಮ್ಮ ಆಳವಾದ ಬೇರುಗಳು ಮತ್ತು ನಮ್ಮ ನಾಗರಿಕತೆಯು ನಮ್ಮ ಭವಿಷ್ಯದ ಕಡೆಗೆ ಸಾಗುವ ದಾರಿಯನ್ನು ತೋರಿಸಲಿದೆ. ಜಾಗತಿಕ ಸವಾಲುಗಳನ್ನು ಎದುರಿಸುವ, ಸುಸಂಘಟಿತ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡುವ, ದುರ್ಬಲರ ಆಕಾಂಕ್ಷೆಗಳಿಗೆ ಧ್ವನಿ ನೀಡುವ ನಮ್ಮ ಜವಾಬ್ದಾರಿಯನ್ನು ನಾವು ಗುರುತಿಸಿಕೊಂಡಿದ್ದೇವೆ. ಭಾರತ ಯಾವಾಗಲೂ ಶಾಂತಿಯ ಪರವಾಗಿ ನಿಂತಿದೆ. ಸಮಗ್ರ ಆರ್ಥಿಕ ವ್ಯವಸ್ಥೆ ಮತ್ತು ದುರ್ಬಲ ರಾಷ್ಟ್ರಗಳ ಪರವಾಗಿ ನಾವು ಯಾವಾಗಲೂ ಕಾಳಜಿ ಹೊಂದಿದ್ದು ದನಿ ಎತ್ತುತ್ತಿದ್ದೇವೆ.

ದಕ್ಷಿಣದಲ್ಲಿ ಭಾರತದ ನಾಯಕತ್ವ

ಸಮಗ್ರ ಪ್ರಯತ್ನದಲ್ಲಿ ಭಾರತದ ಆಳವಾದ ನಂಬಿಕೆಯಿದೆ. ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟ, ವಿಪತ್ತು ತಡೆ ಮೂಲಸೌಕರ್ಯಕ್ಕಾಗಿ ಒಕ್ಕೂಟ, ʼಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ʼ ಉಪಕ್ರಮ, ಇಂಡೋ- ಪೆಸಿಫಿಕ್ ಸಾಗರಗಳ ಉಪಕ್ರಮ ಇವೆಲ್ಲ ಭಾರತದ ಪ್ರಯತ್ನಗಳಿಗೆ ಉದಾಹರಣೆಗಳು. 100ಕ್ಕೂ ಹೆಚ್ಚು ದೇಶಗಳಿಗೆ ನಮ್ಮ ಕೋವಿಡ್ ಲಸಿಕೆ ಪೂರೈಕೆಯಾಗಿದೆ. ನಮ್ಮ ಓಪನ್ ಸೋರ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್ CoWin ಅನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದೇವೆ. ಪ್ರಪಂಚದಲ್ಲಿ ಪ್ರಕ್ಷುಬ್ಧತೆ ಮತ್ತು ವಿಘಟನೆಯ ಅಪಾಯಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಜಾಗತಿಕ ಏಕತೆ, ಒಗ್ಗಟ್ಟು, ಶಾಂತಿ ಮತ್ತು ಸಮೃದ್ಧಿಗೆ ಭಾರತದ ಒಳಿತಿನ ಶಕ್ತಿಯ ಕೊಡುಗೆ ಅನಿವಾರ್ಯ ಎಂಬ ಭಾವನೆ ಹೆಚ್ಚಿದೆ. ನಮ್ಮ ಸಂಘಟಿತ ಪ್ರಯತ್ನ ಮಾನವತೆಯ ಸಮಗ್ರ ಒಳಿತಿಗಾಗಿಯೇ ಹೊರತು ಇತರರಿಗೆ ಸವಾಲು ಎಸೆಯುವುದಕ್ಕಾಗಿ ಅಲ್ಲ.

ಭಾರತದ ಸಾಫ್ಟ್‌ ಪವರ್‌ನ ಆಧಾರಸ್ತಂಭಗಳು

ನಮ್ಮ ನಾಗರಿಕತೆಯ ನೀತಿ ಮತ್ತು ಪರಂಪರೆಯೇ ಭಾರತದ ಸಾಫ್ಟ್‌ ಪವರ್‌ನ ಆಧಾರಸ್ತಂಭಗಳು. ಇದನ್ನು ನಾವು ಹೇರಳವಾಗಿ ಹೊಂದಿದ್ದೇವೆ. ನಮ್ಮ ರಫ್ತು ಯಾವಾಗಲೂ ಯೋಗ, ಆಯುರ್ವೇದ, ಆಧ್ಯಾತ್ಮಿಕತೆ, ವಿಜ್ಞಾನ, ಗಣಿತ, ಜ್ಯೋತಿರ್ವಿಜ್ಞಾನ ಇಂಥವೇ ಹೊರತು ಯುದ್ಧ, ದೌರ್ಜನ್ಯಗಳಲ್ಲ.

ನಾವು ಪ್ರಗತಿ ಹೊಂದುತ್ತಿರುವಾಗಲೂ ನಮ್ಮ ಹಿಂದಿನ ಹೆಮ್ಮೆ ಮತ್ತು ಸ್ಫೂರ್ತಿಗಳನ್ನು ಮುಂದಕ್ಕೆ ಒಯ್ಯಬೇಕು ಎಂದು ನಂಬುತ್ತೇವೆ. ಇದರಿಂದ ಮಾತ್ರ ನಾವು ಪ್ರಗತಿ ಹೊಂದಬಹುದು. ಯೋಗ ಇಂದು ಮನೆಮಾತಾಗಿದೆ. ನಮ್ಮ ಸಾಂಪ್ರದಾಯಿಕ ಆಯುರ್ವೇದ ಔಷಧ ಪದ್ಧತಿ ಸ್ವೀಕೃತವಾಗುತ್ತಿದೆ. ಭಾರತೀಯ ಸಿನಿಮಾ, ತಿನಿಸು, ಸಂಗೀತ ಮತ್ತು ನೃತ್ಯ ಪ್ರಪಂಚದಾದ್ಯಂತ ಪ್ರೀತಿಸಲ್ಪಡುತ್ತಿದೆ. ಪ್ರಕೃತಿಯೊಂದಿಗೆ ನಮ್ಮ ಸಹಬಾಳ್ವೆಯ ಕ್ರಮ, ಸುಸ್ಥಿರ ಜೀವನಶೈಲಿಗೆ ಹೊಂದಿಕೊಂಡಿದೆ. ಪ್ರಜಾಪ್ರಭುತ್ವದ ಆದರ್ಶಗಳಲ್ಲಿ ನಮ್ಮ ಸಹಜ ನಂಬಿಕೆ ಮತ್ತು ಹೆಚ್ಚು ಜವಾಬ್ದಾರಿಯುತ, ಒಳಗೊಳ್ಳುವ ಕ್ರಮಗಳು ಹೆಚ್ಚಿನವರಿಗೆ ಸ್ಫೂರ್ತಿಯಾಗಿವೆ. ಶಾಂತಿ, ಮುಕ್ತತೆ, ಸಾಮರಸ್ಯ, ಸಹಬಾಳ್ವೆ, ಪ್ರಜಾಪ್ರಭುತ್ವ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮತ್ತು ತತ್ವಶಾಸ್ತ್ರ, ನ್ಯಾಯಪರತೆ, ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧತೆ ಮತ್ತು ಶಾಂತಿಗಳು ಭಾರತೀಯರ ಶಕ್ತಿಯ ಆಧಾರಸ್ತಂಭಗಳು.

ಭಾರತ- ಅಮೆರಿಕ ಸಂಬಂಧ

ಉಭಯ ದೇಶಗಳ ನಡುವಿನ ಸಂಬಂಧ ಇತ್ತೀಚೆಗೆ ಸಕಾರಾತ್ಮಕವಾಗಿ ಬೆಳೆಯುತ್ತಿದೆ ಎಂಬುದು ನಿಜ. ಕಳೆದ ಒಂಬತ್ತು ವರ್ಷಗಳಲ್ಲಿ ಇದು ವೇಗ ಪಡೆದಿದೆ. ಹೊಸ ಎತ್ತರ ತಲುಪಿದೆ. ಇಲ್ಲಿನ ಸರ್ಕಾರ, ಸಂಸತ್ತು, ಉದ್ಯಮ, ಅಕಾಡೆಮಿಗಳು ಮತ್ತು ಜನರು ಸೇರಿ ಎಲ್ಲರಿಂದಲೂ ನಮ್ಮ ಸಂಬಂಧಗಳನ್ನು ಗಾಢವಾಗಿಸಲು ವ್ಯಾಪಕ ಬೆಂಬಲವಿದೆ. ಅಮೆರಿಕ ಕಾಂಗ್ರೆಸ್ ಸತತವಾಗಿ ನಮ್ಮ ಸಂಬಂಧ ವೃದ್ಧಿಗೆ ಗಾಢ ಬೆಂಬಲ ನೀಡಿದೆ. ಅಮೆರಿಕದ ಆಡಳಿತ ವ್ಯತ್ಯಾಸ ಆಗಿದ್ದರೂ ನಾನು ವೈಯಕ್ತಿಕವಾಗಿ ಅಮೆರಿಕ ನಾಯಕತ್ವದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದೇನೆ. ಕಳೆದ ಅಮೆರಿಕ ಭೇಟಿಯ ಸಮಯದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ನಾನು ಅತ್ಯುತ್ತಮ ಸ್ನೇಹ ಹಂಚಿಕೊಂಡೆವು. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಜನ ನಮ್ಮ ಅಸಾಧಾರಣ ಬೆಂಬಲ. ನಮ್ಮ ಸ್ನೇಹದ ಆಸಕ್ತಿಗಳು, ದೃಷ್ಟಿ, ಬದ್ಧತೆಗಳು ಪೂರ್ಣ ಮುಕ್ತವಾಗಿವೆ. ಮತ್ತು ನಮ್ಮ ಕಾಲದ ಸವಾಲುಗಳನ್ನು ಎದುರಿಸಲು ಇದು ಮಹತ್ವದ ಮಾರ್ಗವಾಗಿದೆ.

Narendra Modi And Joe Biden

ಅಂತಾರಾಷ್ಟ್ರೀಯ ಸವಾಲುಗಳು ಬೆಳೆದಂತೆ, ನಮ್ಮ ಪಾಲುದಾರಿಕೆ ಹೆಚ್ಚಿನ ತುರ್ತಿನಿಂದ ಪ್ರತಿಕ್ರಿಯಿಸಿದೆ. ನಂಬಿಕೆ, ಪರಸ್ಪರ ವಿಶ್ವಾಸ ಮತ್ತು ಸಂಬಂಧದಲ್ಲಿನ ನಂಬಿಕೆಯು ಇಲ್ಲಿ ಪ್ರಮುಖ ಅಂಶಗಳು. ಸಮತೋಲಿತ ಇಂಡೋ- ಪೆಸಿಫಿಕ್ ಪ್ರದೇಶ ನಮ್ಮ ಸಮಾನ ಆಶಯ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಹಸಿರು ಶಕ್ತಿ, ಪ್ರಮುಖ ವಲಯಗಳಲ್ಲಿ ಉತ್ಪಾದನೆಯ ವೇಗವರ್ಧನೆ, ದೃಢವಾದ ರಕ್ಷಣಾ ಕೈಗಾರಿಕಾ ಪಾಲುದಾರಿಕೆ ಇತ್ಯಾದಿಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ.

ಭಾರತ ʼದಕ್ಷಿಣ ಜಗತ್ತಿʼನ ನಾಯಕನೇ?

ʼನಾಯಕʼ ಎಂಬ ಪದ ತುಂಬ ತೂಕದ್ದು. ಹಾಗೆ ಭಾರತ ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಅಥವಾ ತಾನಾಗಿಯೇ ಹಾಗೆ ತಿಳಿದುಕೊಳ್ಳುವುದಿಲ್ಲ. ನಾನು ಅಪೇಕ್ಷಿಸುವುದೇನೆಂದರೆ, ಜಾಗತಿಕ ಹಿತಕ್ಕಾಗಿ ದಕ್ಷಿಣ ಜಗತ್ತಿಗೆ ಒಂದು ಸಮಗ್ರ ನಾಯಕತ್ವ ಬೇಕಿದೆ. ಭಾರತ ಅದರ ಧ್ವನಿ ಆಗಬಹುದು. ಆದರೆ ತಾನು ನಾಯಕ ಎಂದು ಭಾವಿಸಬೇಕಿಲ್ಲ.

ಜಾಗತಿಕ ದಕ್ಷಿಣ ಭಾಗದ ಹಕ್ಕುಗಳನ್ನು ದೀರ್ಘಕಾಲದಿಂದ ನಿರಾಕರಿಸಲಾಗಿದೆ ಎಂಬುದಂತೂ ನಿಜ. ಪರಿಣಾಮವಾಗಿ, ಗ್ಲೋಬಲ್ ಸೌತ್‌ನಲ್ಲಿ ಅಸಮಾಧಾನದ ಭಾವನೆ ಇದೆ. ಕ್ರಿಯೆಗಳಲ್ಲಿ ಜಾಗತಿಕ ದಕ್ಷಿಣವನ್ನು ಒಳಗೊಳ್ಳಿಸಲಾಗಿದೆ; ಆದರೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಧ್ವನಿಯನ್ನು ಕೇಳಿಸಿಕೊಂಡಿಲ್ಲ. ಈ ಕುರಿತು ಪ್ರಜಾಪ್ರಭುತ್ವದ ನಿಜವಾದ ಚೈತನ್ಯವನ್ನು ಗೌರವಿಸಲಾಗಿಲ್ಲ. ಪ್ರಜಾಪ್ರಭುತ್ವದ ನೈಜ ಉತ್ಸಾಹದಲ್ಲಿ ಕೆಲಸ ಮಾಡಿ, ಅದೇ ಗೌರವ, ಅದೇ ಹಕ್ಕುಗಳನ್ನು ನೀಡಿದರೆ ಜಾಗತಿಕ ದಕ್ಷಿಣ ಜಗತ್ತಿಗೆ ಇನ್ನಷ್ಟು ಬಲವಾದ ಕೊಡುಗೆ ನೀಡುವ ಸಮುದಾಯವಾಗಲಿದೆ. ನಾವು ನಮ್ಮ ಜಾಗತಿಕ ಸಂಸ್ಥೆಗಳನ್ನು ಚೇತರಿಸಿಕೊಳ್ಳುವಂತೆ ಮಾಡುತ್ತೇವೆ. ಭಾರತ ಆ ಭಾರವನ್ನು ಹೊರುವ ಬಲಿಷ್ಠ ಹೆಗಲಾಗಬಲ್ಲದು. ಜಾಗತಿಕ ಉತ್ತರದೊಂದಿಗೆ ಸಂಬಂಧ ಬೆಸೆಯುವ ಸೇತುವೆಯೂ ಭಾರತ ಆಗಬಲ್ಲದು.

ಜಾಗತಿಕ ದಕ್ಷಿಣವನ್ನು ಬಲಿಷ್ಠಗೊಳಿಸಲು ಭಾರತದ ಯತ್ನ

ಜನವರಿ 2023ರಲ್ಲಿ, ನಮ್ಮ G20 ಅಧ್ಯಕ್ಷತೆಯ ಪ್ರಾರಂಭದಲ್ಲಿ, ನಾವು ಶೃಂಗಸಭೆಯನ್ನು ಸಂಘಟಿಸಿದೆವು. ಜಾಗತಿಕ ದಕ್ಷಿಣದ 125 ದೇಶಗಳು ಭಾಗವಹಿಸಿದ್ದವು. ಭಾರತ ಇನ್ನಷ್ಟು ಬಲಿಷ್ಠವಾದ ಮುನ್ನೆಲೆ ತೆಗೆದುಕೊಳ್ಳಬೇಕು ಎಂದು ಏಕಾಭಿಪ್ರಾಯ ವ್ಯಕ್ತವಾಯಿತು. ನಮ್ಮ G20 ಅಧ್ಯಕ್ಷತೆಯ ಅವಧಿಯಲ್ಲಿ, ʼಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼಕ್ಕಾಗಿ ದಕ್ಷಿಣದ ಧ್ವನಿಯಾಗಲು ಭಾರತ ಮುಂದೆ ಬಂದಿದೆ. ಜಾಗತಿಕ ದಕ್ಷಿಣದ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಕೇಂದ್ರಕ್ಕೆ ತರಲು ನಾವು ಪ್ರಯತ್ನಿಸಿದ್ದೇವೆ. G20 ಚರ್ಚೆಗಳಲ್ಲಿ ನಾನು ಆಫ್ರಿಕ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡಲು ಆಗ್ರಹಿಸಿದೆ. ಇದು ʼಜಾಗತಿಕ ಉತ್ತರʼಕ್ಕೆ ವಿರುದ್ಧಾರ್ಥಕವಲ್ಲ. ಒಂದೇ ಜಗತ್ತು ಆಗಬೇಕು ಎಂಬ ಆಶಯ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಸದಸ್ಯತ್ವ

ಇದು ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯಲ್ಲ. ಎರಡನೇ ವಿಶ್ವಯುದ್ಧದ ಬಳಿಕ ನಾವು ತಂದುಕೊಂಡ ಬಹು ರಾಷ್ಟ್ರೀಯ ಆಡಳಿತದ ಬಗೆಗೆ ನಾವು ಯೋಚಿಸಬೇಕಿದೆ. ಇಂದು ಸಮಯ ಬದಲಾಗಿದೆ. ರಾಷ್ಟ್ರಗಳ ಸಂಖ್ಯೆ ನಾಲ್ಕು ಪಟ್ಟು ಆಗಿದೆ. ನೂತನ ತಂತ್ರಜ್ಞಾನದ ಯುಗದಲ್ಲಿ ಬಾಳುತ್ತಿದ್ದೇವೆ. ಹೊಸ ಶಕ್ತಿಗಳು ಜಾಗತಿಕ ಅಧಿಕಾರದ ತಕ್ಕಡಿಯಲ್ಲಿ ಏರುಪೇರು ಉಂಟುಮಾಡಿವೆ. ಹೊಸ ಸವಾಲುಗಳು ಬಂದಿವೆ. ಹವಾಮಾನ ವೈಪರೀತ್ಯ, ಸೈಬರ್‌ ಭದ್ರತೆ,, ಭಯೋತ್ಪಾದನೆ, ಬಾಹ್ಯಾಕಾಶ ಭದ್ರತೆ, ಸಾಂಕ್ರಾಮಿಕಗಳು ಇವೆಲ್ಲವೂ ಬಂದಿವೆ. ಈ ಎಲ್ಲ ಅಂಶಗಳನ್ನೂ ಇಂದಿನ ವಿಶ್ವ ಆಡಳಿತದಲ್ಲಿ ಮುನ್ನೆಲೆಗೆ ತರುವ, ಎಲ್ಲರಿಗೂ ಪ್ರಾತಿನಿಧ್ಯವನ್ನು ನೀಡುವ ಕೆಲಸ ಆಗಿಲ್ಲ. ಇಂದಿನ ಭದ್ರತಾ ಮಂಡಳಿಯೂ ಈ ಬಗ್ಗೆ ಅಪಶ್ರುತಿಯನ್ನು ಕೇಳಿಸಿಕೊಳ್ಳಬೇಕಿದೆ. ಇಡೀ ಲ್ಯಾಟಿನ್‌ ಅಮೆರಿಕ ಅಥವಾ ಆಫ್ರಿಕವನ್ನು ಕಡೆಗಣಿಸಿ ಒಂದು ಜಾಗತಿಕ ಸಂಘಟನೆ ಹೇಗಿರಲು ಸಾಧ್ಯ? ಅತಿ ಹೆಚ್ಚು ಜನಸಂಖ್ಯೆಯ, ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಆಚೆಗಿಟ್ಟರೆ ಅದು ಜಾಗತಿಕ ದನಿಯಾಗಿರಲು ಸಾಧ್ಯವೇ? ಭಾರತದ ಸ್ಥಾನಮಾನಕ್ಕೆ ಸಂಬಂಧಿಸಿ ಹೆಚ್ಚಿನ ದೇಶಗಳು ಸ್ಪಷ್ಟವಾಗಿವೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಫ್ರಾನ್ಸ್‌ನ ಬೆಂಬಲವನ್ನು ಸ್ಮರಿಸುತ್ತೇನೆ.

PM Modi

2047ರ ಜಗತ್ತಿಗೆ ಮೋದಿ ಗುರಿ

2047, ಭಾರತದ ಸ್ವಾತಂತ್ರ್ಯದ 100ನೇ ವರ್ಷ. ಭಾರತ ಆಗ ಅಭಿವೃದ್ಧಿ ಹೊಂದಿದ ದೇಶವಾಗಿರಲಿದೆ ಎಂಬುದು ನಮ್ಮ ಆಶಯ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಅವಕಾಶಗಳು ಎಲ್ಲವೂ ಸೇರಿದ ಒಂದು ಬಲಿಷ್ಠ ಆರ್ಥಿಕತೆಯಾಗಿರಲಿದೆ. ಎಲ್ಲ ಪ್ರಜೆಗಳೂ ತಮ್ಮ ಹಕ್ಕುಗಳ ಅರಿವು ಹೊಂದಿರುವ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ. ಸುಸ್ಥಿರ ಜೀವನಶೈಲಿ, ಸ್ವಚ್ಛ ನದಿಗಳು, ಜೀವವೈವಿಧ್ಯ ಹೊಂದಿದ ಅರಣ್ಯ, ಕೌಶಲಗಳು ಮತ್ತು ಪ್ರತಿಭೆ ಹೊಂದಿದೆ ಭಾರತ ದೇಶ.

ದೇಶದ ಆರ್ಥಿಕ ಸುಧಾರಣೆಗಳು

ಜನತೆಯನ್ನು ಕೇಂದ್ರವಾಗಿ ಹೊಂದಿದ ಅಭೂತಪೂರ್ವ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ನಾವು ಸಾಧಿಸಿದ್ದೇವೆ. ಪ್ರತಿ ಪ್ರಜೆಯನ್ನೂ, ಪ್ರತಿ ಮನೆಯನ್ನೂ ತಲುಪುವ ಯತ್ನ ಸಫಲವಾಗಿದೆ. ಇಲ್ಲಿಯವರೆಗೆ, ನಾವು 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದೇವೆ. ನೈರ್ಮಲ್ಯಕ್ಕಾಗಿ 11 ಕೋಟಿ ಶೌಚಾಲಯಗಳು, 50 ಕೋಟಿ ಮಂದಿಗೆ ಬ್ಯಾಂಕ್‌ ಖಾತೆಗಳು, 40 ಕೋಟಿ ಕಿರು ಸಾಲಗಳು, 9 ಕೋಟಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ, 50 ಕೋಟಿ ಜನರಿಗೆ ಉಚಿತ ಆರೋಗ್ಯ ವಿಮಾ ರಕ್ಷಣೆ ಒದಗಿಸಿದ್ದೇವೆ. ಡಿಜಿಟಲ್ ತಂತ್ರಜ್ಞಾನದ ಬಳಕೆ ಮತ್ತು ಮೂಲಸೌಕರ್ಯದಲ್ಲಿ ಭಾರತದಲ್ಲಿ ಕ್ರಾಂತಿಯಾಗಿದೆ. 80 ಕೋಟಿ ಮಂದಿಗೆ ಕೋವಿಡ್‌ ಸಮಯದಲ್ಲಿ ನೇರ ಆಹಾರ ಒದಗಿಸಿದೆ. ಇಂದು ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ 46% ಭಾರತದಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬ ಭಾರತೀಯನಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದ್ದೇವೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್‌ ಆಗಿದೆ.

ಚೀನಾದ ಆರ್ಥಿಕ ಬೆದರಿಕೆ

ಇಂಡೋ- ಪೆಸಿಫಿಕ್‌ ಪ್ರಾಂತ್ಯದಲ್ಲಿ ನಮ್ಮ ಹಿತಾಸಕ್ತಿ ತುಂಬ ಆಳವಾದುದು. ʼಸಾಗರʼ ಅಂದರೆ ಈ ಪ್ರಾಂತ್ಯದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ ನಮ್ಮ ಗುರಿ. ಉತ್ತಮ ಭವಿಷ್ಯಕ್ಕಾಗಿ ಇಲ್ಲಿ ಶಾಂತಿ ಅತ್ಯಗತ್ಯ. ಮಾತುಕತೆ ಹಾಗೂ ರಾಜನೀತಿಯ ಮೂಲಕ ಶಾಂತಿಯುತ ಪರಿಹಾರಗಳತ್ತ ನಮ್ಮ ಚಿತ್ತ ಇದೆ. ಎಲ್ಲ ದೇಶಗಳು ಪರಸ್ಪರರ ಸಾರ್ವಭೌಮತೆ, ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸಿ ನಡೆದುಕೊಳ್ಳಬೇಕಿದೆ.

ಇದನ್ನೂ ಓದಿ: Vistara Top 10 News: ಮೋದಿ ಫ್ರಾನ್ಸ್ ಪ್ರವಾಸದಿಂದ, ಟೊಮ್ಯಾಟೊಗೆ Z+ ಸೆಕ್ಯುರಿಟಿವರೆಗಿನ ಪ್ರಮುಖ ಸುದ್ದಿಗಳಿವು

ಚೀನಾದ ಬೆದರಿಕೆ ಹಿನ್ನೆಲೆಯಲ್ಲಿ ಫ್ರಾನ್ಸ್‌ ಬೆಂಬಲ

ಭಾರತ ಹಾಗೂ ಫ್ರಾನ್ಸ್‌ ಅತಿ ಉತ್ತಮವಾದ, ವಿಶಾಲ ಹಾಗೂ ಗಾಢವಾದ ವ್ಯೂಹಾತ್ಮಕ ಸಂಬಂಧ ಹೊಂದಿವೆ. ವಾಣೀಜ್ಯ, ಮಾನವೀಯ, ಸುಸ್ಥಿರ ಬೆಳವಣಿಗೆಯ ವಿಷಯಗಳಲ್ಲೂ ನಿಕಟ ಸಂಪರ್ಕ ಹೊಂದಿವೆ. ಇಂಡೋ- ಪೆಸಿಫಿಕ್‌ ಪ್ರಾಂತ್ಯದಲ್ಲಿ ನಮ್ಮ ಸ್ನೇಹವು ಗಾಢವಾಗಿದೆ; ಇದು ಯಾವ ದೇಶದ ವಿರುದ್ಧವೂ ಅಲ್ಲ. ನಮ್ಮ ವಾಣಿಜ್ಯ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಉದ್ದೇಶ.

ಫ್ರಾನ್ಸ್‌ ಜತೆಗೆ ಸ್ನೇಹ ಸಂಬಂಧ

ಮೊದಲನೆಯದಾಗಿ 140 ಕೋಟಿ ಭಾರತೀಯರ ಪರವಾಗಿ ಫ್ರಾನ್ಸ್‌ಗೆ ನನ್ನ ಹೃತ್ಪೂರ್ವಕ ಕೃತಜ್ಞತೆ. ಜುಲೈ 14ರ ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆಗೆ ಗೌರವ ಅತಿಥಿಯಾಗಿ ಭಾರತವನ್ನು ಆಹ್ವಾನಿಸಿರುವುದು ವಿಶಿಷ್ಟ ಗೌರವವಾಗಿದೆ. ಈ ಸಂದರ್ಭದಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಲು ಸಂತಸವೆನಿಸಿದೆ. ನಮ್ಮ ವ್ಯೂಹಾತ್ಮಕ ಸಂಬಂಧ 25ನೇ ವರ್ಷಕ್ಕೆ ಕಾಲಿಡುತ್ತಿರುವುದು ವಿಶೇಷ. ಇದೀಗ ಬದಲಾವಣೆಯ ಸಮಯವೂ ಹೌದು. ನಾವು ಸಾಂಕ್ರಾಮಿಕ ನಂತರದ ಜಾಗತಿಕ ಕ್ರಮವನ್ನು ಎದುರುಗೊಳ್ಳುತ್ತಿದ್ದೇವೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಸಕಾರಾತ್ಮಕವಾಗಿದೆ. ನಮ್ಮ ಸ್ನೇಹ ಸಂಬಂಧ, ರಾಜನೈತಿಕ ಮೈತ್ರಿ, ವ್ಯೂಹಾತ್ಮಕ ಪಾಲುದಾರಿಕೆಗಳು ಬಲವಾಗಿ, ವಿಶ್ವಾಸಾರ್ಹವಾಗಿ, ಸ್ಥಿರವಾಗಿವೆ.

2014ರ ಬಳಿಕ ನಮ್ಮ ವ್ಯಾಪಾರ ಸಂಬಂಧ ದುಪ್ಪಟ್ಟಾಗಿದೆ. ಈ ವರ್ಷ ಭಾರತದ ಎರಡು ಏರ್‌ ಕ್ಯಾರಿಯರ್‌ಗಳು ಫ್ರಾನ್ಸ್‌ನಿಂದ 750 ಏರ್‌ಬಸ್‌ಗಳಿಗೆ ಬೇಡಿಕೆ ಇಟ್ಟಿವೆ. ಡಿಜಿಟಲ್‌ ಮೂಲಸೌಕರ್ಯದಲ್ಲಿ, ಸ್ವಚ್ಛ ಇಂಧನದಲ್ಲಿ ನಾವು ತುಂಬಾ ಹಂಚಿಕೊಳ್ಳುವುದಿದೆ. ಔದ್ಯಮಿಕ ಭಾಗೀದಾರಿಕೆ ವೃದ್ಧಿಸಲಿದೆ. ರಕ್ಷಣಾ ಪಾಲುದಾರಿಕೆಯಲ್ಲಿ ಒಂದಾಗಲಿದ್ದೇವೆ. ನಾವು ಒಟ್ಟಾಗಿ ಸೋಲಾರ್‌ ಒಕ್ಕೂಟ ಮಾಡಿದ್ದೇವೆ. ವಿಶ್ವಸಂಸ್ಥೆಯಲ್ಲಿ ನಮ್ಮ ಜತೆಗಾರಿಕೆ ಗಟ್ಟಿಯಾಗಿದೆ.

ಇದನ್ನೂ ಓದಿ: PM Modi France Visit: ಸಿಂಗಾಪುರ ಬಳಿಕ ಫ್ರಾನ್ಸ್‌ಗೂ ಭಾರತದ ಯುಪಿಐ ವಿಸ್ತರಣೆ; ಮೋದಿ ಭೇಟಿ ವೇಳೆ ಚಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Viral News: ಇದೊಂದು ವಿಚಿತ್ರ, ವಿರಳ ಪ್ರಕರಣ. ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿದ ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಇದು. ಅಕ್ರಮ ಸಂಬಂಧ ಹೊಂದಿದ್ದ ಆಕೆ ಇಬ್ಬರು ಬೇರೆ ಬೇರೆ ಪುರುಷರಿಂದ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ಮಗುವನ್ನು ಪೋಷಕರು ತನಗೆ ತಿಳಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

VISTARANEWS.COM


on

Viral News
Koo

ಮುಂಬೈ: 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ(Viral News). ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆ (Juvenile Justice Act)ಯಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ

2021ರಲ್ಲಿ 23 ವರ್ಷದ ಅನ್ಯ ಕೋಮಿನ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿ ಮೊದಲ ಬಾರಿ ಗರ್ಭಿಣಿಯಾಗಿದ್ದಳು. ಆಕೆ ಗರ್ಭ ಧರಿಸಿರುವ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಬಳಿಕ ಪೋಷಕರು ಶಾಲೆಯ ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಗೆ ವಿಚಾರ ತಿಳಿಸಿ ಅವರ ಸಹಾಯ ಕೋರಿದರು.

7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ʼʼಇದಕ್ಕೂ ಮೊದಲು ಪೋಷಕರು ತನ್ನನ್ನು ಮುಂಬೈಯ ಯಾವುದೋ ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಕೀಲರ ಸಮ್ಮುಖದಲ್ಲಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ್ದರುʼʼ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಲಾಯಿತು. ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಹೆರಿಗೆಯ ಆರು ತಿಂಗಳ ನಂತರ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದಳು. ಈ ವೇಳೆ ಆತ ಆಕೆಯನ್ನು ವರಿಸಲು ಸಿದ್ಧನಾಗಿರುವುದಾಗಿ ಹೇಳಿದ್ದ. ಆದರೆ ಪೋಷಕರು ಇದಕ್ಕೆ ಸಮ್ಮತಿ ನೀಡಲಿಲ್ಲ. ʼʼತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. ಪಡೆದರೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆʼʼ ಎಂದು ಅಪ್ರಾಪ್ತೆ ದೂರಿದ್ದಾಳೆ. ಈ ಬಗ್ಗೆ ಅವಳು ಪೋಷಕರನ್ನು ಪ್ರಶ್ನಿಸಿದಾಗ ಅಜ್ಜಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅವಳ ಕುಟುಂಬವು 23 ವರ್ಷದ ವ್ಯಕ್ತಿಯೊಂದಿಗೆ ಮದುವೆಯನ್ನು ನಿಶ್ಚಯಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಅಪ್ರಾಪ್ತೆ ಮತ್ತೆ ತನ್ನ ವಿವಾಹ ನಿಶ್ಚಿತವಾದ ಯುವಕನೊಂದಿಗೆ ದೇಹ ಸಂಪರ್ಕ ಬೆಳೆಸಿದಳು. ಬಳಿಕ ಮತ್ತೊಮ್ಮೆ ಗರ್ಭ ಧರಿಸಿದಳು. ಈ ವೇಳೆ ಆತನಿಗೆ ಅಪ್ರಾಪ್ತೆಯ ಮೊದಲ ಮಗುವಿನ ಬಗ್ಗೆ ತಿಳಿದು ಬಂದಿತ್ತು. ಹೀಗಾಗಿ ವಿವಾಹವಾಗಲು ನಿರಾಕರಿಸಿದ. ನಂತರ ಬಾಲಕಿ ಅಜ್ಜಿ ಮನೆಯಿಂದ ತನ್ನ ಮನೆಗೆ ಮರಳಿದಳು. ಪರಿಚಯಸ್ಥರ ನೆರವಿನಿಂದ ಆಕೆ 2024ರ ಮಾರ್ಚ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡನೇ ಮಗುವನ್ನೂ ಮಾರಾಟ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿರುವುದರಿಂದ ಆಕೆ ಇದೀಗ ಪೊಲೀಸ್‌ ಠಾಣೆಯ ಮೊರೆ ಹೋಗಿದ್ದಾಳೆ. ಮಾರಾಟವಾದ ಹೆಣ್ಣು ಮಗು ಎಲ್ಲಿದೆ ಎಂಬುದನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Continue Reading

ದೇಶ

Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

Narendra Modi:ಗುಜರಾತ್‌ನ ಆನಂದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

VISTARANEWS.COM


on

Narendra Modi
Koo

ಗುಜರಾತ್‌: ಸದಾ ಕಾಂಗ್ರೆಸ್‌ ವಿರುದ್ಧ ಒಂದಿಲ್ಲೊಂದು ರೀತಿಯಲ್ಲಿ ಮಾತಿನಲ್ಲೇ ಅಟ್ಯಾಕ್‌ ಮಾಡುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಗುಜರಾತ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿ(Election Rally)ಯಲ್ಲಿ ಕಾಂಗ್ರೆಸನ್ನು ಪಾಕಿಸ್ತಾನ(Pakistan)ದ ಬೆಂಬಲಿಗ ಪಕ್ಷ ಎಂದು ಕರೆದಿದ್ದಾರೆ. ಗುಜರಾತ್‌ನ ಆನಂದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

ರಾಹುಲ್‌ ಗಾಂಧಿ ಭಾಷಣವನ್ನು ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಹುಸೇನ್‌ (Ch Fawad Hussain) ಮೆಚ್ಚಿಕೊಂಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಮಧ್ಯೆ ಎಷ್ಟೊಂದು ಸ್ನೇಹ ಸಂಬಂಧ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿರುಗೇಟು ಕೊಟ್ಟರು. ಕಾಂಗ್ರೆಸ್‌ ಇಲ್ಲಿ ದುರ್ಬಲಗೊಳ್ಳುತ್ತಿದ್ದರೆ ಅಲ್ಲಿ ಪಾಕಿಸ್ತಾನ ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಪ್ರಾರ್ಥಿಸುತ್ತಿದೆ. ಹೇಗಾದರೂ ಸರಿ ಯುವರಾಜನೇ(ರಾಹುಲ್‌ ಗಾಂಧಿ) ಭಾರತದ ಪ್ರಧಾನಿ ಆದರೆ ಸಾಕೆಂದು ಪಾಕಿಸ್ತಾನ ಬಯಸುತ್ತಿದೆ. ಕಾಂಗ್ರೆಸ್‌ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸಂಬಂಧ ಈಗಾಗಲೇ ಬಯಲಾಗಿದೆ.

ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು. ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಫಾಲೋವರ್‌ನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್‌ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

ವೋಟ್‌ ಜಿಹಾದ್‌ ವಿರುದ್ಧ ಕಿಡಿ

ಇದೇ ವೇಳೆ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವೋಟ್‌ ಜಿಹಾದ್‌ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ನಾವು ಲವ್‌ ಜಿಹಾದ್‌ ಮತ್ತು ಭೂ ಜಿಹಾದ್‌ ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವೋಟ್‌ ಜಿಹಾದ್‌ ಬಗ್ಗೆ ಕೇಳುತ್ತಿದ್ದೇವೆ. ಮುಸ್ಲಿಂರೆಲ್ಲಾ ಒಗ್ಗಟ್ಟಾಗಿ ವೋಟ್‌ ಜಿಹಾದ್‌ ಮಾಡುವಂತೆ ಕರೆ ಕೊಡಲಾಗುತ್ತಿದೆ. ಇದು ಪ್ರತಿಪಕ್ಷಗಳ ನಿಜವಾದ ಮುಖ. ತಮ್ಮ ಮೈತ್ರಿ ಸರ್ಕಾರಗಳು ಅಧಿಕಾರದದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ವಾಮಮಾರ್ಗದಲ್ಲಿ ಮೀಸಲಾತಿ ಘೋಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಗುರಿ. ಹಾಗೆ ಇಲ್ಲದಿದ್ದರೆ ಕಾಂಗ್ರೆಸ್‌ ಲಿಖಿತ ರೂಪದಲ್ಲಿ ಬರೆದುಕೊಡಲಿ ಎಂದು ಸವಾಲೆಸದರು.

Continue Reading

ಕ್ರೈಂ

Prajwal Revanna Case: ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

Prajwal Revanna Case: ಲುಕ್‌ಔಟ್ ನೋಟಿಸ್‌ಗಳನ್ನು ಲುಕ್‌ಔಟ್ ಸರ್ಕ್ಯುಲರ್‌ಗಳು (LOC) ಎಂದೂ ಕರೆಯಲಾಗುತ್ತದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಇವುಗಳನ್ನು ಇಶ್ಯೂ ಮಾಡಲಾಗುತ್ತದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ಸದ್ಯ ಪ್ರಜ್ವಲ್‌ ರೇವಣ್ಣ ತಲೆ ಮೇಲೆ ಈ ಲುಕೌಟ್‌ ನೋಟೀಸ್‌ ತೂಗುಗತ್ತಿ ತೂಗುತ್ತಿದೆ.

VISTARANEWS.COM


on

prajwal revanna case lookout notice
Koo

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna case) ಅವರಿಗೆ ಲುಕ್ಔಟ್‌ ನೋಟಿಸ್ (Lookout notice) ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಲುಕೌಟ್‌ ನೋಟೀಸ್‌ ಎಂದರೇನು, ಅದರ ಪರಿಣಾಮವೇನು, ಅದಕ್ಕೂ ತಡೆ ತರಬಹುದೇ, ಇತ್ಯಾದಿ ವಿವರಗಳು ಇಲ್ಲಿವೆ.

ಲುಕ್‌ಔಟ್ ನೋಟಿಸ್‌ಗಳನ್ನು ಲುಕ್‌ಔಟ್ ಸರ್ಕ್ಯುಲರ್‌ಗಳು (LOC) ಎಂದೂ ಕರೆಯಲಾಗುತ್ತದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಇವುಗಳನ್ನು ಇಶ್ಯೂ ಮಾಡಲಾಗುತ್ತದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ವಿಮಾನ ನಿಲ್ದಾಣ (Airport) ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಕಾನೂನು ಜಾರಿ ಅಧಿಕಾರಿಗಳಿಗೆ ಅಗತ್ಯವಿರುವ ವ್ಯಕ್ತಿಗಳ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿಗಾ ಇಡಲು, ಪರಿಣಾಮಕಾರಿಯಾಗಿ ತಡೆಗಟ್ಟಲು ಇದನ್ನು ಹೊರಡಿಸಲಾಗುತ್ತದೆ.

ಒಂದು ದೇಶದ ವಲಸೆ ಅಧಿಕಾರಿಗಳು ಯಾವುದೇ ತಲೆಮರೆಸಿಕೊಂಡಿರುವ ಅಪರಾಧಿಯ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದರೆ, ಆ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಬಹುದು. ಅಪರಾಧಿಗಳು ಇದರಿಂದಾಗಿ ವಿಮಾನ ನಿಲ್ದಾಣ ಅಥವಾ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಮಾರ್ಗಸೂಚಿಗಳು

ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಈ ಸರ್ಕ್ಯುಲರ್‌ಗಳ ಮೂಲ ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಹೊರಡಿಸಿದೆ. ಈ ಮಾರ್ಗಸೂಚಿಗಳು ಹೀಗಿವೆ:

1) LOC ನೀಡುವ ವಿನಂತಿಯನ್ನು ಭಾರತ ಸರ್ಕಾರದ ಉಪ ಕಾರ್ಯದರ್ಶಿ, ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರೇಣಿಯ ಅಧಿಕಾರಿಗಳು ಮಾತ್ರ ಮಾಡಬಹುದು.

2) ಯಾವುದೇ ಭಾರತೀಯ ವ್ಯಕ್ತಿಯ ವಿರುದ್ಧ ಎಲ್ಲಾ ವಲಸೆ ಚೆಕ್‌ಪೋಸ್ಟ್‌ಗಳಿಗೆ ಲುಕ್‌ಔಟ್ ನೋಟೀಸ್ ಅನ್ನು ಗೃಹ ಸಚಿವಾಲಯ ಸಿದ್ಧಪಡಿಸಿದ ಸ್ವರೂಪದಲ್ಲಿ ಮಾತ್ರ ನೀಡಬಹುದು.

3) ನೋಟಿಸ್ ನೀಡುವ ಏಜೆನ್ಸಿಯು ಆರೋಪಿಯ ಸಂಪೂರ್ಣ ಗುರುತಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಬೇಕು. ಆರೋಪಿಯ ಹೆಸರನ್ನು ಹೊರತುಪಡಿಸಿ ಮೂರಕ್ಕಿಂತ ಕಡಿಮೆ ಗುರುತಿನ ಮಾನದಂಡಗಳಿದ್ದಲ್ಲಿ LOC ನೀಡಲಾಗುವುದಿಲ್ಲ.

4) ಸಾಮಾನ್ಯವಾಗಿ ಲುಕ್‌ಔಟ್ ನೋಟೀಸ್ ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಏಜೆನ್ಸಿಯು ಈ ಸೂಚನೆಯ ಅವಧಿಯನ್ನು ಹೆಚ್ಚಿಸಲು ಬಯಸಿದರೆ, ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮಾಡಬಹುದು. ಒಂದು ವರ್ಷದ ನಿಗದಿತ ಅವಧಿಯೊಳಗೆ LOCಯನ್ನು ವಿಸ್ತರಿಸಲು ಯಾವುದೇ ವಿನಂತಿ ಮಾಡದಿದ್ದರೆ, LOC ಅನ್ನು ಅಮಾನತುಗೊಳಿಸಲು ಸಂಬಂಧಿಸಿದ ವಲಸೆ ಅಧಿಕಾರಿಗೆ ಅಧಿಕಾರವಿದೆ.

ಕೋರ್ಟ್ ಮತ್ತು ಇಂಟರ್‌ಪೋಲ್‌ನಿಂದ ಲುಕ್‌ಔಟ್ ನೋಟಿಸ್‌ಗಳನ್ನು ನೀಡಿದರೆ, ಲುಕ್‌ಔಟ್ ನೋಟೀಸ್‌ಗಳು ಒಂದು ವರ್ಷದೊಳಗೆ ಮುಕ್ತಾಯಗೊಳ್ಳುವುದಿಲ್ಲ.

ಲುಕ್‌ಔಟ್ ನೋಟಿಸ್‌ನ ದುರ್ಬಳಕೆ

ಹಲವು ಪ್ರಕರಣಗಳಲ್ಲಿ ಲುಕ್‌ಔಟ್‌ ನೋಟಿಸ್‌ ದುರ್ಬಳಕೆಯಾಗಿದೆ. ಯಾರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆಯೋ ಅವರಿಗೂ ಲುಕ್‌ಔಟ್ ನೋಟಿಸ್ ಬಗ್ಗೆ ಕೆಲವೊಮ್ಮ ತಿಳಿದಿರುವುದಿಲ್ಲ. ವ್ಯಕ್ತಿ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದನ್ನು ನಿರೀಕ್ಷಿಸದೇ ಇರಬಹುದು. ವಿಮಾನ ನಿಲ್ದಾಣ/ಗಡಿ ಇತ್ಯಾದಿಗಳಲ್ಲಿ ವಲಸೆ ಅಧಿಕಾರಿಗಳು ತಡೆದಾಗ ಅಥವಾ ಬಂಧಿಸಿದಾಗ ಮಾತ್ರ ಆರೋಪಿಗೆ ತಿಳಿಯುತ್ತದೆ.

ಆದರೆ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲಿ ಹೀಗಾಗದು. ಕೆಲವೊಮ್ಮೆ ಲುಕ್‌ಔಟ್ ನೋಟಿಸ್‌ಗಳನ್ನು ಎಲ್ಲಾ ನಿಯಮಗಳ ಪಾಲನೆಯಾಗದೆ ನೀಡಲಾಗುತ್ತದೆ. ಈ ಪ್ರಕರಣಗಳು ಶಂಕಿತ ವ್ಯಕ್ತಿಗಳು, ದೇಶ ವಿರೋಧಿ ಅಂಶಗಳು ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಇಂತಹ ಪ್ರಕರಣಗಳಿಂದ ಬಾಧಿತರಾದ ಯಾವುದೇ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪರಿಹಾರ ಪಡೆಯಲು ಮಾನವ ಹಕ್ಕುಗಳ ಆಯೋಗ ಅಥವಾ ಹೈಕೋರ್ಟ್‌ಗಳನ್ನು ಸಂಪರ್ಕಿಸಬಹುದು. ಆದರೆ ಈ ಪ್ರಕ್ರಿಯೆ ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು ಮತ್ತು ತುಂಬಾ ದುಬಾರಿಯಾಗಬಹುದು.

ಲುಕ್‌ಔಟ್ ನೋಟಿಸ್‌ಗಳು ಅಪರಾಧಿಗಳಲ್ಲಿ ಭಯವನ್ನು ಉಂಟುಮಾಡುತ್ತವೆಯೇ? ಅನೇಕ ಪ್ರಕರಣಗಳಲ್ಲಿ ಅನೇಕ ಅಪರಾಧಿಗಳು ಮತ್ತು ಆರೋಪಿಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಭಾರತದಲ್ಲಿ ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಆದರೆ ಇದರಿಂದ ಅವರು ವಿಚಲಿತರಾದಂತಿಲ್ಲ. ಇಲ್ಲಿಯವರೆಗೆ ಎಷ್ಟು ಲುಕ್‌ಔಟ್ ನೋಟಿಸ್‌ಗಳನ್ನು ನೀಡಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ: Hassan Pen Drive Case: ಮೋದಿಯ ʼರಾಜಕೀಯ ಕುಟುಂಬʼದ ಅಪರಾಧಿಗಳಿಗೆ ರಕ್ಷಣೆ ಖಾತ್ರಿಯಾ? ರಾಹುಲ್‌ ಗಾಂಧಿ ಕಿಡಿ

Continue Reading

Lok Sabha Election 2024

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

School Jobs Scam: ಟಿಎಂಸಿಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ಕುನಾಲ್ ಘೋಷ್ ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಶಾಲಾ ನೇಮಕಾತಿ ಹಗರಣದ ಬಗ್ಗೆ ತೃಣಮೂಲ ಕಾಂಗ್ರೆಸ್‌ಗೆ ತಿಳಿದಿತ್ತು ಎಂದು ದೂರಿದ್ದಾರೆ. ಇತ್ತೀಚೆಗೆ (ಏಪ್ರಿಲ್ 22) ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016ರ (State Level Selection Test-2016) ನೇಮಕಾತಿ ಪ್ರಕ್ರಿಯೆ ಅನೂರ್ಜಿತ ಎಂದು ಕೋಲ್ಕತ್ತಾ ಹೈಕೋರ್ಟ್ ಘೋಷಿಸಿತ್ತು.

VISTARANEWS.COM


on

School Jobs Scam
Koo

ಕೋಲ್ಕತ್ತಾ: ಟಿಎಂಸಿ (TMC)ಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ಕುನಾಲ್ ಘೋಷ್ (Kunal Ghosh) ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಶಾಲಾ ನೇಮಕಾತಿ ಹಗರಣ (School Jobs Scam)ದ ಬಗ್ಗೆ ತೃಣಮೂಲ ಕಾಂಗ್ರೆಸ್‌ಗೆ ತಿಳಿದಿತ್ತು ಎಂದು ದೂರಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟ ಕುನಾಲ್ ಘೋಷ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಮಾತ್ರವಲ್ಲ ಲೋಕಸಭಾ ಚುನಾವಣೆಯ ಮಧ್ಯೆ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ (ಏಪ್ರಿಲ್ 22) ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016ರ (State Level Selection Test-2016) ನೇಮಕಾತಿ ಪ್ರಕ್ರಿಯೆ ಅನೂರ್ಜಿತ ಎಂದು ಕೋಲ್ಕತ್ತಾ ಹೈಕೋರ್ಟ್ ಘೋಷಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು.

ಬುಧವಾರ ಬಿಜೆಪಿ ಲೋಕಸಭಾ ಅಭ್ಯರ್ಥಿಯೊಂದಿಗೆ ವೇದಿಕೆ ಹಂಚಿಕೊಂಡ ಕುನಾಲ್ ಘೋಷ್ ಅವರನ್ನು ಟಿಎಂಸಿ ಹುದ್ದೆಯಿಂದ ವಜಾ ಮಾಡಿತ್ತು. ʼʼಶಾಲಾ ಶಿಕ್ಷಣ ಇಲಾಖೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸುಲಿಗೆ ನಡೆಯುತ್ತಿದೆ ಎಂಬ ಅಂಶ ಪಕ್ಷಕ್ಕೆ ಚೆನ್ನಾಗಿ ತಿಳಿದಿತ್ತು. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಪಕ್ಷಕ್ಕೆ ಈ ಬಗ್ಗೆ ಅರಿವಿತ್ತು” ಎಂದು ಅವರು ಹೇಳಿದ್ದಾರೆ. “ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಹೊಂದಿದ್ದ ಕಾರಣಕ್ಕೆ 2021ರಲ್ಲಿ ಪಕ್ಷವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ ಪಾರ್ಥ ಚಟರ್ಜಿ ಅವರನ್ನು ಶಿಕ್ಷಣ ಸಚಿವಾಲಯದಿಂದ ಕೈಗಾರಿಕಾ ಇಲಾಖೆಗೆ ವರ್ಗಾಯಿಸಿತು” ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಜ್ಯ ಸರ್ಕಾರ 2016ರಲ್ಲಿ ಮಾಡಿದ್ದ 25,753 ಶಿಕ್ಷಕರ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿದ್ದಲ್ಲದೆ ರದ್ದಾದವರು, 2016ರಿಂದ ತಾವು ಪಡೆದ ಸಂಬಳವನ್ನೂ ಬಡ್ಡಿ ಸಹಿತ ವಾಪಸ್‌ ನೀಡಬೇಕು ಎಂಬ ಆದೇಶ ಹೊರಡಿಸಿತ್ತು. ಅಂದು 24,640 ಖಾಲಿ ಹುದ್ದೆಗಳಿಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016ಗೆ ಹಾಜರಾದ 25,753 ಮಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ಇದು 9, 10, 11 ಮತ್ತು 12ನೇ ತರಗತಿಗಳ ಶಿಕ್ಷಕರು ಮತ್ತು ಗುಂಪು-ಸಿ ಮತ್ತು ಡಿ ಸಿಬ್ಬಂದಿ ಹುದ್ದೆಗಳನ್ನು ಒಳಗೊಂಡಿತ್ತು.

ಎಸ್ಎಲ್ಎಸ್‌ಟಿ-2016ರಲ್ಲಿ ಹಾಜರಾಗಿ ಉದ್ಯೋಗ ಸಿಗದ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಅಕ್ರಮಗಳನ್ನು ಕಂಡುಕೊಂಡ ನಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಹಲವಾರು ಉದ್ಯೋಗಗಳನ್ನು ವಜಾಗೊಳಿಸಲು ಹೈಕೋರ್ಟ್ ತೀರ್ಪು ನೀಡಿತ್ತು.

Continue Reading
Advertisement
Viral News
ವೈರಲ್ ನ್ಯೂಸ್9 mins ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Uber Cup 2024 Quarterfinal
ಕ್ರೀಡೆ18 mins ago

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Ambedkar statue
ಕಲಬುರಗಿ24 mins ago

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣ ಸಿಐಡಿಗೆ ಹಸ್ತಾಂತರ! ಡಾ. ಜಿ. ಪರಮೇಶ್ವರ್‌

Prajwal Revanna Case These are the questions SIT will ask Prajwal
ಕ್ರೈಂ31 mins ago

Prajwal Revanna Case: ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

Narendra Modi
ದೇಶ44 mins ago

Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

gold rate today
ಚಿನ್ನದ ದರ47 mins ago

Gold Rate Today: ನಿನ್ನೆ ಇಳಿದ ಚಿನ್ನದ ಬೆಲೆ ಇಂದು ತೀವ್ರ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ದರಗಳು ಹೀಗಿವೆ

Self Harming
ಕಲಬುರಗಿ50 mins ago

Self Harming : ಕಲಬುರಗಿಯಲ್ಲಿ ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Bhoomi Shetty African braids Look style
ಸಿನಿಮಾ1 hour ago

Bhoomi Shetty: ಆಫ್ರಿಕನ್‌ ಲುಕ್‌ನಲ್ಲಿ ನಮ್ಮ ʻಕಿನ್ನರಿʼ ನಟಿ! ಈ ಚೇಂಜ್‌ ಹೇಗನಿಸುತ್ತೆ ನಿಮಗೆ?

prajwal revanna case lookout notice
ಕ್ರೈಂ1 hour ago

Prajwal Revanna Case: ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

School Jobs Scam
Lok Sabha Election 20241 hour ago

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌