New Arrival | Tata Nexon EV Max ಮಾರುಕಟ್ಟೆಗೆ Vistara News
Connect with us

ಆಟೋಮೊಬೈಲ್

New Arrival | Tata Nexon EV Max ಮಾರುಕಟ್ಟೆಗೆ

Tata nexon ev max ಎಂಬ ನೂತನ ವಿದ್ಯುತ್‌ ಚಾಲಿತ ಕಾರ್‌ ಟಾಟಾ ಸಂಸ್ಥೆಯಿಂದ ಮಾರುಕಟ್ಟೆಗೆ ಬಂದಿದೆ. ಈ ಗಾಡಿಯನ್ನು ಲಾಂಚ್‌ ಮಾಡುವ ಮೂಲಕ tata ಇ.ವಿ ವಿಭಾಗದಲ್ಲಿ ದೃಢ ಹೆಜ್ಜೆಯಿಟ್ಟಿದೆ.

VISTARANEWS.COM


on

Koo

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ಎಲೆಕ್ಟ್ರಿಕ್‌ ವಿಭಾಗದಲ್ಲಿ ʼಟಾಟಾ ನೆಕ್ಸಾನ್‌ ಇ.ವಿ. ಮ್ಯಾಕ್ಸ್‌ʼ ಹೆಸರಿನ ನೂತನ ಕಾರನ್ನು ಲಾಂಚ್‌ ಮಾಡಿದೆ. ಈ ಮೂಲಕ ಹೊಸ ಶೈಲಿಯ ಮತ್ತು ಅತ್ಯಾಧುನಿಕ ಕಾರು ಉತ್ಪಾದನೆಯಲ್ಲಿ ಟಾಟಾ ಮೋಟರ್ಸ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಈ ಹೊಸ ಕಾರು ಬುಧವಾರ ಮಾರುಕಟ್ಟೆಗೆ ಕಾಲಿಟ್ಟಿದೆ. ಎರಡು ಮಾದರಿಯ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ. ಬೇಸಿಕ್‌ ಮಾಡೆಲ್‌ ಕಾರಿನ ದರ ₹ 17.74 ಲಕ್ಷದಿಂದ ಆರಂಭಗೊಳ್ಳಲಿದೆ.

ದೇಸೀ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್‌ ಸಂಸ್ಥೆಯ ಈ ಎಲೆಕ್ಟ್ರಿಕ್‌ ಕಾರಿನ ಕುರಿತು ವಾಹನ ಪ್ರಿಯರಿಗೆ ಅಪಾರ ನಿರೀಕ್ಷೆ ಇದೆ. ಈ ಹಿಂದೆ ಅವಿನ್ಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಟಾಟಾ ಮೋಟಾರ್ಸ್ ಘೋಷಣೆ ಮಾಡಿತ್ತು. ಈಗಾಗಲೇ ಲಾಂಚ್‌ ಆಗಿರುವ ಟಾಟಾ ನೆಕ್ಸಾನ್‌ ಇ.ವಿ. ಕಾರಿನ ಮುಂದಿನ ಆವೃತ್ತಿ ನೆಕ್ಸಾನ್‌ ಇ.ವಿ‌ ಮ್ಯಾಕ್ಸ್ ಎಂದು ಹೇಳಲಾಗಿದೆ.

ನೆಕ್ಸಾನ್‌ ಇ.ವಿ. ಮ್ಯಾಕ್ಸ್ಚಾರ್ಜಿಂಗ್‌ ಆಪ್ಷನ್ಎಕ್ಸ್-ಶೋರೂಂ ದರ
XZ+3.3kWh₹17,74,000
XZ+7.2kWh
AC fast charger
₹18,24,000
XZ+ LUX3.3kWh₹18,74,000
XZ+ LUX7.2kWh
AC fast charger
₹19,24,000

ಏನು ಈ ವಾಹನದ ವಿಶೇಷತೆ?

Battery: ಈ ವಾಹನದ ಬ್ಯಾಟರಿ ಸಾಮರ್ಥ್ಯವನ್ನು ಈ ಹಿಂದೆ ಚಲಾವಣೆಯಲ್ಲಿದ್ದ ನೆಕ್ಸಾನ್‌ ಇ.ವಿ ಕಾರಿಗಿಂತ 30% ಅಧಿಕಗೊಳಿಸಲಾಗಿದೆ. ಆದರೆ, ಬ್ಯಾಟರಿಯ ಗಾತ್ರ ಹೆಚ್ಚಿರಬಹುದು. ಇದರಿಂದ ವಾಹನದ ಬೂಟ್‌ ಕೆಪ್ಯಾಸಿಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಇದ್ದ 350 ಲೀಟರ್‌ ಟ್ಯಾಂಕ್‌ ಈ ವಾಹನದಲ್ಲೂ ಇದೆ.
ಬ್ಯಾಟರಿ ಚಾರ್ಜ್‌ ಮಾಡಲು 3.3 kWhನ ಸ್ಟಾಂಡರ್ಡ್ ಚಾರ್ಜಿಂಗ್‌ ಯುನಿಟ್‌ ದೊರಕಲಿದೆ. ಇನ್ನೂ ಹೆಚ್ಚಿನ ಯುನಿಟ್‌ ಬೇಕಾದವರು ಅಧಿಕ ಮೊತ್ತ ನೀಡಿ 7.2 kWhನ ಯುನಿಟ್‌ ಖರೀದಿಸಬಹುದು. ಸುಮಾರು 6 ಗಂಟೆಗಳಲ್ಲಿ ಕಾರ್‌ನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್‌ ಮಾಡಬಹುದು.

ಯಾವ ವೇಗದಲ್ಲಿ ಕಾರು ಚಲಾಯಿಸಬಹುದು?

ಸಾಮಾನ್ಯವಾಗಿ ವಿದ್ಯುತ್‌ ಚಾಲಿತ ಕಾರುಗಳ ಪವರ್‌ ಇಂಧನವು ಸಾಮನ್ಯ ಕಾರುಗಳಿಗಿಂತ ಕಡಿಮೆಯಿರುತ್ತದೆ. ಈ ಕಾರಣದಿಂದ ಜನರ ಗಮನ ಸೆಳೆಯುವಲ್ಲಿ ಎಲೆಕ್ಟ್ರಿಕ್‌ ಗಾಡಿಗಳು ವಿಫಲವಾಗುತ್ತವೆ. ಈ ಕಾರಿನ ಪವರ್‌, ಟಾರ್ಕ್‌ ಹಾಗೂ ಟಾಪ್‌ ಸ್ಪೀಡ್‌ ಆಕರ್ಷಮಯವಾಗಿದೆ.
ಪವರ್:‌ 143hp
ಟಾರ್ಕ್:‌ 250nm
ಟಾಪ್‌ ಸ್ಪೀಡ್:‌ 140kmph

ಗಾಡಿಯನ್ನು ನಿಲ್ಲಿಸಲು ಈ ಪವರ್‌ಗೆ ತಕ್ಕಂತೆ‌ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಮ್‌ ಕೂಡ ಅಳವಡಿಸಲಾಗಿದೆ.

ಕಾರಿನ ರೇಂಜ್‌ ಏನು?

ಕಾರನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್‌ ಮಾಡಿದರೆ ಎಷ್ಟು ದೂರ ಸಾಗಬಹುದು ಎಂಬುದು ರೇಂಜ್.‌ ನೆಕ್ಸಾನ್‌ ಇ.ವಿ. ಮ್ಯಾಕ್ಸ್‌ ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ ಐಡಿಯಲ್‌ ವಾತಾವರಣದಲ್ಲಿ ಸುಮಾರು 400 ಕಿ.ಮೀ ಸಾಗಬಹುದು. ಹಾಗೂ ವಾಸ್ತವಿಕ ಸನ್ನಿವೇಶದಲ್ಲಿ ಸುಮಾರು 300 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.

ಉಳಿದ ಫೀಚರ್ ಏನೇನು?‌

ಸುಖವಾಗಿ ಕೂರಲು ಅನುಕೂಲವಾಗುವಂತಹ ವೆಂಟಿಲೇಟೆಡ್ ಲೆದರ್‌ ಸೀಟುಗಳು, ಏರ್‌ ಪ್ಯೂರಿಫೈಯರ್‌, ಹರ್ಮನ್‌ ಡಿಸ್ಪ್‌ಲೇ ಹಾಗೂ ಸೌಂಡ್‌ ಸಿಸ್ಟಮ್‌, ಫೋನ್‌ ಚಾರ್ಜ್‌ ಮಾಡಲು ವೈಯರ್‌ಲೆಸ್‌ ವ್ಯವಸ್ಥೆ ಇತರ ಕೆಲವು ಆಕರ್ಷಕ ಫೀಚರ್‌ಗಳು.‌

https://vistaranews.com/2022/04/14/india-obsessin-on-suvs/
ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಆಟೋಮೊಬೈಲ್

Mansoon 2023 : ಮಳೆಗಾಲದ ಸೇಫ್​ ಜರ್ನಿಗೆ ನಿಮ್ಮ ವಾಹನಗಳನ್ನು ಈ ರೀತಿ ಮೇಂಟೇನ್​ ಮಾಡಿ

ಮಳೆಗಾಲದಲ್ಲಿ ಕಾರನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದು ವಿಷಯವಾಗಿದೆ. ಅಸಮರ್ಪಕ ನಿರ್ವಹಣೆಯಿಂದ ವಾಹನದ ಹಾಗೂ ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಕಾರು ಸರಿಯಾಗಿ ಕೆಲಸ ಮಾಡಲು ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಲೇಬೇಕು.

VISTARANEWS.COM


on

Car Service Before Mansoon
Koo

ಬೆಂಗಳೂರು: ಮಾನ್ಸೂನ್ ಶೀಘ್ರದಲ್ಲೇ ಭಾರತದಾದ್ಯಂತ ಆವರಿಸಲಿದೆ. ಬಳಿಕ ಎಲ್ಲಿ ನೋಡಿದರೂ ಮುಂಗಾರು ಮಳೆಯ ಹನಿಯ ಲೀಲೆ ಕಾಣಲಿದೆ. ನೀವೇನಾದರೂ ಕಾರು ಅಥವಾ ಇನ್ಯಾವುದಾದರೂ ವಾಹನದ ಮಾಲೀಕ ಅಥವಾ ಚಾಲಕರಾಗಿದ್ದರೆ ಮಳೆಗಾಲದಲ್ಲಿ ಕಾರಿನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗಿರುತ್ತದೆ. ದೂರದ ಪ್ರಯಾಣವೇ ಆಗಲಿ ಸಿಟಿಯೊಳಗಿನ ಜರ್ನಿಯೇ ಆಗಿರಲಿ ಮಳೆಗಾಲದಲ್ಲಿ ವಾಹನ ಓಡಿಸುವಾಗ ಅಪಾಯ ಹೆಚ್ಚು. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಕೆಲವೊಂದು ಕನಿಷ್ಠ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದ್ದು ಮಳೆಗಾಲಕ್ಕೆ ಮೊದಲು ವಾಹನವನ್ನು ಪೂರ್ತಿಯಾಗಿ ಸರ್ವಿಸ್​ ಮಾಡಿಸುವುದು. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಸಂಗತಿಗಳು ಈ ಕೆಳಗಿನಂತಿವೆ.

ಟೈರ್​ಗಳನ್ನು ಪರೀಕ್ಷಿಸಿ

ಟೈರ್​ಗಳ ಬಗ್ಗೆ ಕಾರಿನ ಮಾಲೀಕರು ನಿರ್ಲಕ್ಷ್ಯ ತಾಳುತ್ತಾರೆ. ಆದರೂ ಅವು ಬಹಳ ಮುಖ್ಯ ಮತ್ತು ಕಾರು ಚಾಲನೆ ಮಾಡುವ ವಿಧಾನದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಮಳೆಗಾಲದಲ್ಲಿ ಸವಾರಿ ಮಾಡುವಾಗ ಸೂಕ್ತ ಪ್ರಮಾಣದಲ್ಲಿ ಥ್ರೆಡ್​ ಹೊಂದಿರುವ ಟೈರ್​​ಗಳು ಇರಲೇಬೇಕು. ಒಣಗಿರುವ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ಜಾರುವಿಕೆ ಜಾಸ್ತಿ. ಸರಿಯಾದ ಥ್ರೆಡ್​ ಇಲ್ಲದಿದ್ದರೆ ಬ್ರೇಕ್​ ಹಿಡಿಯವ ವೇಳೆ ಜೋರಾಗಿ ತಿರುಗಿಸಿದಾಗ ಕಾರು ಜಾರಿಕೊಂಡು ಹೋಗಿ ಅಪಘಾತಕ್ಕೆ ಒಳಗಾಗಬಹುದು. ಉತ್ತಮ ಥ್ರೆಡ್​ ಇದ್ದರೆ ರಸ್ತೆಯ ಮೇಲೆ ನಿಮ್ಮ ಕಾರಿನ ಹಿಡಿತ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್​​ಗಳಲ್ಲಿ ಥ್ರೆಡ್​​ವೇರ್ ಇಂಡಿಕೇಟರ್ ಇರುತ್ತದೆ. ಥ್ರೆಡ್​ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್ ಇಟ್ಟಿರುತ್ತಾರೆ . ಟೈರ್ ರಬ್ಬರ್ ಸವೆದು ಹೋದ ಬಳಿಕ ಇಂಡಿಕೇಟರ್ ಕೂಡ ತೆಳುವಾಗುತ್ತದೆ. ಇದು ಟೈರ್​ಗಳನ್ನು ಬದಲಾಯಿಸುವ ಸಮಯ. ಹೀಗಾಗಿ ಮಳೆಗಾಲಕ್ಕೆ ಮೊದಲು ಸವೆದ ಟೈರ್​ಗಳನ್ನು ಬದಲಾಯಿಸಲೇಬೇಕು.

ಬ್ಯಾಟರಿ ಚಾರ್ಜ್​ ಸರಿಯಾಗಿದೆಯಾ ಚೆಕ್​ ಮಾಡಿ

ಸರಿಯಾಗಿ ಕೆಲಸ ಮಾಡುವ ಬ್ಯಾಟರಿಯನ್ನು ಹೊಂದಿರುವುದು ವರ್ಷದುದ್ದಕ್ಕೂ ಅಗತ್ಯವೇ ಆಗಿರುತ್ತದೆ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆ ಪಡೆಯುತ್ತದೆ. ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಚಾಲಕನ ಗೋಚರತೆ ಕಡಿಮೆಯಾಗುತ್ತದೆ. ಹೀಗಾಗಿ ಇತರ ಸಮಯಕ್ಕಿಂಗ ಹೆಚ್ಚಾಗಿ ವೈಪರ್​ ಹಾಗೂ ಹೆಡ್​ಲೈಟ್​ ಸೇರಿದಂತೆ ಇತರ ಲೈಟ್​​ಗಳನ್ನು ಬಳಬೇಕಾಗುತ್ತದೆ. ಇದು ಬ್ಯಾಟರಿಯ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ಯಾಟರಿ ಚಾರ್ಜಿಂಗ್​ ಸಾಮರ್ಥ್ಯ ಹಾಗೂ ಬಾಳಿಕೆಯನ್ನು ಪರೀಕ್ಷೆ ಮಾಡಿಕೊಳ್ಳಲೇಬೇಕು. ಸರಿಯಾಗಿರದಿದ್ದರೆ ಕಡ್ಡಾಯವಾಗಿ ಬದಲಾಯಿಸಬೇಕು.

ವೈರಿಂಗ್​ಗಳ ಪರೀಕ್ಷೆ ಮಾಡಿಸಿಕೊಳ್ಳಿ

ಮಳೆಗಾದಲ್ಲಿ ನಿಮ್ಮ ವಾಹದ ವೈರಿಂಗ್​​ಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅಸಮರ್ಪಕ ವೈರಿಂಗ್ ಅಥವಾ ಇನ್ಸುಲೇಷನ್ ಟೇಪ್​ ಜಾರಿ ಹೋಗಿರುವ ಸಾಧ್ಯತೆಗಳು ಇದ್ದರೆ ತಕ್ಷಣ ರಿಪೇರಿ ಮಾಡಿಸಬೇಕು. ವೈರ್​ಗಳ ತೆರೆದ ಭಾಗವು ನೀರಿನ ಸಂಪರ್ಕಕ್ಕೆ ಬಂದಾಗ ಶಾರ್ಟ್​ ಸರ್ಕೀಟ್​, ಶಾಕ್​ ಸೇರಿದಂತೆ ನಾನಾ ರೀತಿಯ ಅಪಾಯಗಳು ಉಂಟಾಗಬಹುದು. ಆದ್ದರಿಂದ ಎದ್ದು ಕಾಣುತ್ತಿರುವ ಕೇಬಲ್​ಗಳನ್ನು ರಿಪೇರಿ ಮಾಡಿಸಬೇಕು. ಆಫ್ಟರ್​ ಮಾರ್ಕೆಟ್​ ಫಿಟ್​ಮೆಂಟ್​​ಗಳಿದ್ದರೆ ವೈರ್​​ಗಳು ಹೊರಗೆ ಕಾಣಿಸದಂತೆ ಸರಿಪಡಿಸಿಕೊಳ್ಳಬೇಕು.

ಲೈಟ್​ಗಳ ರಿಪೇರಿ ಕಡ್ಡಾಯ ಮಾಡಿಸಿ

ಹೆಡ್ ಲೈಟ್ ಗಳು, ಟೈಲ್​ಲೈಟ್​​ಗಳು ಫಾಗ್ ಲೈಟ್​​​ಗಳು ಮತ್ತು ಟರ್ನ್ ಇಂಡಿಕೇಟರ್​​ಗಳು ಸೇರಿದಂತೆ ನಿಮ್ಮ ವಾಹನದ ಎಲ್ಲ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಹವಾಮನಕ್ಕೆ ಸಂಬಂಧಿಸದ ವಿಚಾರವಾಗಿದ್ದರೂ ಮಳೆಗಾಲದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣವು ಗೋಚರತೆಗೆ ತೊಂದರೆ ಮಾಡಿದರೆ, ಇತರ ವಾಹನಗಳ ಸವಾರರಿಗೆ ನಿಮ್ಮ ಇರುವಿಕ ಕಾಣಿಸಲು ದೀಪಗಳು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಓದಿ : Coastal Karnataka travel: ಮಳೆ ಬಂದಾಗ ಈ ಕರಾವಳಿ ತೀರದ ತಾಣಗಳಿಗೆ ನೀವು ಒಂದು ಟ್ರಿಪ್‌ ಹೋಗ್ಲೇಬೇಕು!

ಮಳೆಗಾಲಕ್ಕೆ ಮೊದಲು ಎಲ್ಲ ಲೈಟ್​ಗಳನ್ನು ಒಟ್ಟಿಗೆ ಆನ್​ ಮಾಡಿ. ಹೆಡ್​ಲೈಟ್​ ಸೇರಿದಂತೆ ಯಾವುದಾದರೂ ಲೈಟ್​​ಗಳು ಮಸುಕಾಗಿದೆ ಎಂದು ಅನಿಸಿದರೆ ಬಲ್ಟ್​ ಅಥವಾ ಲೈಟ್​ ಅನ್ನೇ ಬದಲಿಸಿ. ಲೈಟ್​​ಗಳನ್ನು ಏಕಕಾಲಕ್ಕೆ ಚಾಲನೆ ಮಾಡುವ ಮೂಲಕ ಬ್ಯಾಟರಿ ಲೈಫ್​ ಅನ್ನೂ ಪರೀಕ್ಷಿಸಬಹುದು. ಕೆಲವೊಂದು ಬಾರಿ ಲೈಟ್​​ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಳವಡಿಕೆ ವೇಳೆ ಬಿರುಕ ಉಂಟಾಗಿದ್ದರೆ ಅಥವಾ ಕ್ಯಾಪ್​ ಸರಿಯಾಗಿ ಕೂತಿರದಿದ್ದರೆ ಇಂಥ ಸಮಸ್ಯೆ ಇರುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಇವೆಲ್ಲವೂ ರಿಪೇರಿ ಆಗಲೇಬೇಕು.

ಬ್ರೇಕ್​​​ ಪ್ಯಾಡ್​ಗಳು ಬದಲಿಸಿ

ಒದ್ದೆಯಾದ ರಸ್ತೆಗಳು ಕಾರಿನ ಬ್ರೇಕಿಂಗ್ ಅಂತರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಬ್ರೇಕ್​ಗಳು ಎಲ್ಲ ಋತುವಿನಲ್ಲಿಯೂ ಚೆನ್ನಾಗಿರಬೇಕು ಎಂಬುದು ನಿಯಮ. ಆದರೆ, ಮಳೆಗಾದಲ್ಲಿ ಇದರ ಅಗತ್ಯ ಇನ್ನಷ್ಟು ಹೆಚ್ಚು. ಬ್ರೇಕ್​ ಪ್ಯಾಡ್​​ಗಳು ಅಥವಾ ಶೂಗಳು ಸವೆದು ಹೋಗಿದ್ದರೆ ನಿರೀಕ್ಷಿತ ಅಂತರದಲ್ಲಿ ವಾಹನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದೇ ರೀತಿ ಚಲನೆ ಏರುಪೇರಾಗಿ ಸ್ಕಿಡ್​ ಆಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ರೇಕ್​ ಚೆನ್ನಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಖಾಲಿ ರಸ್ತೆಯಲ್ಲಿ ಒಂದು ಬಾರಿ ವೇಗವಾಗಿ ಕಾರು ಚಲಾಯಿಸಿ ಜೋರಾಗಿ ಬ್ರೇಕ್​ ಒತ್ತಿ ನೋಡಿ. ಬ್ರೇಕ್​ ಪೆಡಲ್​ ಒಳಕ್ಕೆ ಹೋಗುತ್ತಿದೆ ಎಂದಾದರೆ ಸಮಸ್ಯೆ ಇದೆ ಎಂದರ್ಥ. ನಿಮ್ಮ ವಾಹನದ ಬ್ರೇಕಿಂಗ್ ಸಿಸ್ಟಮ್ ಅನ್ನು ವೃತ್ತಿಪರರ ಬಳಿ ಮಳೆಗಾಲಕ್ಕೆ ಮೊದಲು ಪರಿಶೀಲಿಸಿ. ಬೇಗ ಹಾಳಾದ ಭಾಗಗಳನ್ನು ಬದಲಿಸಿ.

ವೈಪರ್​ಗಳು, ವಾಷರ್​​ಗಳು ಸರಿಯಾಗಿರಲಿ

ಮಾನ್ಸೂನ್​ ಬರುವ ಮೊದಲ ವಾಹನದ ವೈಪರ್​​ಗಳು ಮತ್ತು ವಾಷರ್ ವ್ಯವಸ್ಥೆಯನ್ನು ಪರೀಕ್ಷಿಸಬೇಕು. ಇವೆರಡನ್ನೂ ಮಳೆಗಾಲದಲ್ಲಿ ಆಗಾಗ ಬದಲಿಸಬೇಕಾಗುತ್ತದೆ. ಕನ್ನಡಿಗೆ ಸ್ವಲ್ಪ ನೀರು ಹಾಕಿ ವೈಪರ್​ ಚಾಲನೆ ಮಾಡಿ ನೋಡಿ. ವಿಂಡ್ ಸ್ಕ್ರೀನ್ ಮೇಲೆ ಯಾವುದೇ ಕೆಸರು ಅಥವಾ ನೀರಿನ ಸಾಲುಗಳನ್ನು ಒರೆಸುತ್ತಿಲ್ಲ ಎಂದಾದರೆ ವೈಪರ್​ ಬ್ಲೇಡ್​ ಕೆಟ್ಟು ಹೋಗಿದೆ ಎಂದರ್ಥ. ತಕ್ಷಣವೇ ಬದಲಿಸಿ. ಬೇಸಿಗೆಯ ಬಿಸಿಗೆ ವೈಪರ್​ ಬ್ಲೇಡ್​ನ ರಬ್ಬರ್​​ನಲ್ಲಿ ಬಿರುಕು ಬಿಟ್ಟಿರುತ್ತದೆ. ಇಂಥ ಬ್ಲೇಡ್​ಗಳು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.

ವಾಷರ್​ಗಳು ವಿಂಡ್​ಶೀಲ್ಡ್​ ಗೆ ನೀರನ್ನು ಸರಿಯಾಗಿ ಸಿಂಪಡಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಈ ವಾಷರ್​ಗಳ ತೂತಿನಲ್ಲಿ ಕೊಳೆ ನಿಂತು ಕಟ್ಟಿಕೊಂಡಿರುವ ಸಾಧ್ಯತೆಗಳಿರುತ್ತದೆ. ಹಾಗಿದ್ದರೆ ನೀರು ಸರಿಯಾಗಿ ಪಂಪ್ ಆಗುವುದಿಲ್ಲ. ಮಳೆಗಾಲಕ್ಕೆ ಮೊದಲು ಇದನ್ನೂ ಬದಲಿಸಬೇಕು ಹಾಗೂ ವಾಷರ್​ನ ನೀರಿನ ಮಟ್ಟವೂ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಿ..

ವಾಹನದಲ್ಲಿ ಸೋರಿಕೆ ಇದೆಯಾ ಪರೀಕ್ಷಿಸಿ

ಸನ್​​​ರೂಫ್ ಗಳು, ಕಿಟಕಿಗಳು ಅಥವಾ ವಿಂಡ್​​ಶೀಲ್ಡ್​​ನಂತಹ ಗಾಜಿನ ಭಾಗಗಳನ್ನು ವಾಹನಗಳಿಗೆ ಅಳವಡಿಸಲು ಸುತ್ತಲೂ ರಬ್ಬರ್​​ಗಳನ್ನು ಹಾಕಿರುತ್ತಾರೆ. ಬೇಸಿಗೆಯ ಬಿಸಿಗೆ ಇದು ಒಡೆದು ಹೋಗಿ ಮಳೆಗಾಲದಲ್ಲಿ ಸೋರಿಕೆಯಾಗಲು ಪ್ರಾರಂಭಿಸುವುದು ಅಸಾಮಾನ್ಯವೇನಲ್ಲ. ಹೀಗಾಗಿ ಮಳೆಗಾಲಕ್ಕೆ ಮೊದಲು ಸರ್ವಿಸ್​ ಮಾಡುವಾಗ ಈ ಭಾಗಗಳ ಬಗ್ಗೆ ಗಮನ ಇಡಿ.

ವಾಹನದ ಸುತ್ತಲೂ ಇರುವ ಡ್ರೈನೇಜ್​ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಜಾಗದಲ್ಲಿ ನೀರು ಸಂಗ್ರಹವಾದರೆ ತುಕ್ಕು ಹಿಡಿಯಲು ಕಾರಣವಾಗಬಹುದು. ಸರ್ವಿಸ್ ಮಾಡಿಸುವ ಸಮಯದಲ್ಲಿ ಸೋರಿಕೆಯ ಮೂಲವನ್ನು ಆದಷ್ಟು ಬೇಗ ಗುರುತಿಸಿ ಅವುಗಳನ್ನು ಸರಿಪಡಿಸುವುದು ಒಳ್ಳೆಯದು.

ಕಿತ್ತು ಹೋಗಿದ್ದರೆ ಪೇಂಟಿಂಗ್ ಮಾಡಿ

ವಾಹನದ ಮೇಲೆ ನಿರಂತರವಾಗಿ ತೇವಾಂಶ ನಿಂತಿದ್ದರೆ ತುಕ್ಕು ಹಿಡಿಯಲು ಕಾರಣವಾಗುತ್ತದೆ. ಕಾರಿನ ಸುತ್ತಲಿನ ರಬ್ಬರ್ ಸೀಲ್​​ಗಲ್ಲಿ ಉಂಟಾಗುವ ಸೋರಿಕೆ ತುಕ್ಕು ಹಿಡಿಯುವ ಮೂಲ. ಪೇಂಟ್ ಕೋಟ್ ಹಾನಿಗೊಳಗಾದ ಸ್ಥಳಗಳಲ್ಲೂ ತುಕ್ಕು ಹಿಡಿಯಬಹುದು. ಇಂಥ ಜಾಗಗಳು ಇದ್ದರೆ ಮಳೆಗಾಲಕ್ಕೆ ಮೊದಲು ಬೇಗ ದುರಸ್ತಿ ಮಾಡುವುದು ಉತ್ತಮ. ನಿಮ್ಮ ಕಾರಿನ ಕೆಳಭಾಗವನ್ನು ಸ್ವಚ್ಛವಾಗಿ ಮತ್ತು ರಸ್ತೆಯ ಧೂಳು ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಏಕೆಂದರೆ ಇವು ಚಾಸಿಸ್ ಸವೆತಕ್ಕೆ ಕಾರಣವಾಗಬಹುದು. ಕಾರು ತೊಳೆದ ನಂತ ಪಾಲಿಶ್ ಹಾಕಬೇಕು. ಇದು ನಿಮ್ಮ ಕಾರನ್ನು ಹೊಳೆಯುವ ಮತ್ತು ಹೊಸದಾಗಿ ಕಾಣುವಂತೆ ಮಾಡುತ್ತದೆ ಹಾಗೂ ತುಕ್ಕು ಹಿಡಿಯಂತೆ ನೋಡಿಕೊಳ್ಳುತ್ತದೆ.

ನಿಯಮಿತ ಕಡ್ಡಾಯ ಸರ್ವಿಸ್ ಮಾಡಿಸಿ

ನಿಮ್ಮ ಕಾರನ್ನು ಮಳೆಗಾಲಕ್ಕೆ ಮೊದಲು ಕಡ್ಡಾಯ ಸರ್ವಿಸ್ ಮಾಡಿಸಿ. ಮೇಲೆ ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಸರ್ವಿಸ್​ ಸ್ಟೇಷನ್​ನಲ್ಲಿ ಪತ್ತೆ ಮಾಡಬಹುದು. ನಿಮ್ಮ ಕಣ್ಣಿಗೆ ಬೀಳದ ಅಥವಾ ಗುರುತಿಸಲ ಸಾಧ್ಯವಾಗದ ಸಮಸ್ಯೆಗಳು ಇಲ್ಲಿ ಗೋಚರವಾಗುತ್ತವೆ. ವೃತ್ತಿಪರವಾಗಿ ಕಾರನ್ನು ಮಳೆಗಾಲಕ್ಕೆ ಸಿದ್ಧಪಡಿಸಿಕೊಳ್ಳಬಹುದು. ಅಂತಿಮವಾಗಿ ಉತ್ತಮ ಗುಣಮಟ್ಟದ ಪಾಲಿಶ್​ ಹಾಗೂ ಅಂಡರ್​ಕೋಟ್​​ಗಳೂ ಸಿಗಬಹುದು.

ಈ ಎಲ್ಲ ಸ್ಪೇರ್​ಗಳನ್ನು ಜತೆಗಿಟ್ಟುಕೊಳ್ಳಿ

ಮಾನ್ಸೂನ್​ ಸಂದರ್ಭದಲ್ಲಿ ಜೋರು ಮಳೆ ಏಕಾಏಕಿ ಬಿಸಿಲು ಇಂಥ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮಳೆಗಾಲದ ಪ್ರಯಾಣದ ವೇಳೆ ಕೆಲವೊಂದು ಸ್ಪೇರ್​ ಪಾರ್ಟ್​​ಗಳನ್ನು ಜತೆಗಿಟ್ಟುಕೊಳ್ಳುವುದು ಉತ್ತಮ. ವೈಪರ್ ಬ್ಲೇಡ್​ಗಳು ಮತ್ತು ಫ್ಯೂಸ್​ನಂಥ ಭಾಗಗಳು ಇಟ್ಟುಕೊಳ್ಳಿ. ರಸ್ತೆ ಬದಿ ನಿಲ್ಲಿಸುವಾಗ ರಿಫ್ಲೆಕ್ಟರ್​ಗಳನ್ನು ಇಡಲು ಅದನ್ನೂ ತೆಗೆದುಕೊಂಡು ಹೋಗಿ. ವಾಹನಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್ ಕೋಟ್ ಮತ್ತು ಟವೆಲ್​ಗಳನ್ನು ಜತೆಗಿಟ್ಟುಕೊಳ್ಳಿ.

Continue Reading

ಆಟೋಮೊಬೈಲ್

Maruti Suzuki : ಮಾರುತಿಯ 5 ಡೋರ್​ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್​ಗೆ ಪೈಪೋಟಿ ಖಚಿತ

ಎಂಟ್ರಿ ಲೆವೆಲ್​ ಜಿಮ್ನಿ (Jimny) ಝೀಟಾ ವೇರಿಯೆಂಟ್​ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ಎಂಡ್​ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ .

VISTARANEWS.COM


on

Maruti Suzuki Jimny 5 door
Koo

ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್​​ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್​ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ಎಂಡ್​ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.

ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್​ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.

ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್

ಜಿಮ್ನಿ ಎಸ್​ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್​​ಪಿ ಪವರ್, ಹಾಗೂ 134 ಎನ್​ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. 5 ಸ್ಪೀಡ್​ನ ಮ್ಯಾನುಯಲ್​ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್​ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್​ ಕೊಟ್ಟರೆ, ಆಟೋಮ್ಯಾಟಿಕ್​ ಗೇರ್​ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.

ಜಿಮ್ನಿಯ ಆಫ್​ರೋಡ್​ಗೆ ಸಂಬಂಧಿಸಿ ಹೇಳುವುದಾದರೆ ಆಲ್​​ಗ್ರಿಪ್​ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್​ಬಾಕ್ಸ್​ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್​ನೊಂದಿಗೆ ನೀಡಲಾಗಿದೆ. ಲ್ಯಾಡರ್​​ ಫ್ರೇಮ್​ ಚಾಸಿಸ್​ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್​ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು

ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್​​ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್​ಮೆಂಟ್​ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್​ ಕಂಟ್ರೋಲ್​, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್​ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್​​ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್​ಗಳನ್ನು ಎಲ್ಲ ವೇರಿಯೆಂಟ್​​ಗಳಲ್ಲಿ ನೀಡಲಾಗಿದೆ.

ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.

ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್​ಬೋರ್ಡ್​ ಮೌಂಟೆಡ್​​ ಗ್ರಾಬ್ ಹ್ಯಾಂಡಲ್​​ಗಳಿವೆ. ಮಾರುತಿ ಸ್ವಿಫ್ಟ್​​ನಲ್ಲಿರುವ ಕೆಲವೊಂದು ಫೀಚರ್​​ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.

ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ

ಮಾರುತಿ ಜಿಮ್ನಿ 5 ಓಡರ್​​ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್​ಬೇಸ್​ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್​​ಗಳು , ಕ್ಲೀನ್​ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್​​ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್​​ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್​​ಗಳನ್ನು ಬಳಸಲಾಗಿದೆ.

ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ

ಜಿಮ್ನಿ ಭಾರತದಲ್ಲಿ ಆಫ್-ರೋಡರ್​ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.

Continue Reading

ಆಟೋಮೊಬೈಲ್

Hero MotoCorp 2023ರ ಹೀರೋ ಎಚ್​​ಎಫ್ ಡಿಲಕ್ಸ್ ಬೈಕ್​ ಬಿಡುಗಡೆ, ರೇಟ್​ ಕೊಂಚ ಏರಿಕೆ!

2023ರ ಹೀರೋ ಎಚ್​​ಎಫ್ ಡಿಲಕ್ಸ್ ಬೈಕ್ ಸೆಲ್ಫ್ ಸ್ಟಾರ್ಟ್ ಮತ್ತು ಐ3ಎಸ್ ವೇರಿಯೆಂಟ್​ ಹಾಗೂ ಟ್ಯೂಬ್ ಲೆಸ್ ಟೈರ್​ನೊಂದಿಗೆ ರಸ್ತೆಗಿಳಿದಿದೆ.

VISTARANEWS.COM


on

2023 Hero HF Deluxe
Koo

ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್​ ಎಚ್​ಎಫ್ ಡೀಲಕ್ಸ್​​ನ 2023ನೇ ಮಾಡೆಲ್​ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್​ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್​ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್​ನ ಎಕ್ಸ್​ ಶೋರೂಮ್​ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.

2023ರ ಎಚ್ಎ​​​ಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್​​ಲೆಸ್ ಟೈರ್​ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್​​​ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್​​​ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್​ ಸಿಗಲಿದೆ.

ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್​ ರೇಸ್​ ನೋಡುವ ಆಸೆಯೇ? ಟಿಕೆಟ್​ ರೇಟ್​ ಕೇಳಿದ್ರೆ ಗಾಬರಿ ಗ್ಯಾರಂಟಿ!

ಹೀರೋ ಎಚ್​​​ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್​​ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್​​ಗೆ ಸಿದ್ಧಗೊಂಡಿದೆ. 4 ಸ್ಪೀಡ್​ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.

ವೇರಿಯೆಂಟ್​ಗಳು ಯಾವುವು?

ಹೀರೋ ಎಚ್​ಎಫ್​​ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್​​ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.

Continue Reading

ಆಟೋಮೊಬೈಲ್

EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ

EV Battery Plant: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಅಗರತಾಸ್, ಗುಜರಾತ್‌ನಲ್ಲಿ 13000 ಕೋಟಿ ರೂ. ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಜತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

VISTARANEWS.COM


on

Edited by

Tata Group EV battery
Koo

ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.

2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್‌ಗಿಂತ ಇಂಗ್ಲೆಂಡ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್‌ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್

ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.

ಆಟೋಮೊಬೈಲ್‌ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Apsara Murder In Hyderabad
ಕ್ರೈಂ22 seconds ago

Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್;‌ ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್

Siddaramaiah as a conductor imaginary photo
ಕರ್ನಾಟಕ9 mins ago

Congress Guarantee: ಪಾರ್ಟ್‌ ಟೈಂ ಬಸ್ ಕಂಡಕ್ಟರ್‌ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!

Actress Nayanthara
South Cinema20 mins ago

Actress Nayanthara: ಅವಳಿ ಮಕ್ಕಳ ಜತೆ ಕ್ಯೂಟ್‌ ಆಗಿ ಫೋಟೊಶೂಟ್‌ ಮಾಡಿಸಿಕೊಂಡ ನಯನತಾರಾ!

rajeev sen and Charu Asopa divorce
ಕಿರುತೆರೆ22 mins ago

Celebrity Divorce: ಸಂಸಾರದಲ್ಲಿ ಬಿರುಕು, ಪತಿಯಿಂದ ದೂರವಾದ ಕಿರುತೆರೆ ನಟಿ

World Cup schedule
ಕ್ರಿಕೆಟ್27 mins ago

ICC World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ

bhola shankar movie set
South Cinema29 mins ago

Chiranjeevi: ಅದ್ಧೂರಿಯಾಗಿದೆ ಭೋಲಾ ಶಂಕರ್‌ ಸೆಟ್‌; ಮತ್ತೊಮ್ಮೆ ಕ್ಯಾಬ್‌ ಡ್ರೈವರ್ ಪಾತ್ರದಲ್ಲಿ ಚಿರು

Darbar Movie Review
South Cinema33 mins ago

Darbar Movie Review: ಇದು ರಾಜಕಾರಣದ ʻದರ್ಬಾರ್‌ʼ, ಮತದಾರರ ಕಾರುಬಾರು!

western ghats in rain
ಪ್ರಮುಖ ಸುದ್ದಿ45 mins ago

Monsoon Travel: ಮಲೆನಾಡಿನ ಮಳೆಹಾಡಿನ ಹೊಸತನ! ರಾಜ್ಯದ ಈ ಟಾಪ್‌ 5 ತಾಣಗಳಿಗೆ ಮಳೆಯಲ್ಲೊಮ್ಮೆ ಭೇಟಿ ಕೊಡಿ

Monsoon Fashion 2023
ಫ್ಯಾಷನ್1 hour ago

Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

Chamarajanagar oxygen tragedy and Dinesh Gundu Rao
ಆರೋಗ್ಯ2 hours ago

Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ13 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Cancellation of tenders for 108 ambulances and Dinesh Gundu rao
ಆರೋಗ್ಯ5 hours ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ5 hours ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ6 hours ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ7 hours ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ22 hours ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ23 hours ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ1 day ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ2 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ2 days ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ3 days ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

ಟ್ರೆಂಡಿಂಗ್‌

error: Content is protected !!