Motivation: ಬಿ ಟೆಕ್‌ ಪಾನಿಪುರಿವಾಲಿ: ದೆಹಲಿಯ ರಸ್ತೆಗಳಲ್ಲಿ 21ರ ಹುಡುಗಿಯ ಯಶಸ್ವಿ ಉದ್ಯಮ! - Vistara News

ಮಹಿಳೆ

Motivation: ಬಿ ಟೆಕ್‌ ಪಾನಿಪುರಿವಾಲಿ: ದೆಹಲಿಯ ರಸ್ತೆಗಳಲ್ಲಿ 21ರ ಹುಡುಗಿಯ ಯಶಸ್ವಿ ಉದ್ಯಮ!

ಓದಿದ್ದು ಬಿಟೆಕ್‌. ವಯಸ್ಸು ೨೧. ಮಾಡುತ್ತಿರುವ ಕೆಲಸ ರಸ್ತೆಬದಿಯಲ್ಲಿ ಪಾನಿಪುರಿ ಗಾಡಿ! ಅಯ್ಯೋ, ಇವಳಿಗೇನಾಯಿತು ಅಷ್ಟು ಓದಿ ಈಗ ಅನ್ಯಾಯವಾಗಿ ಪಾನಿಪುರಿ ಮಾರುತ್ತಾಳಲ್ಲ ಎಂದು ನಗೆಯಾಡುವ, ಕನಿಕರ ತೋರುವ ಕೆಲಸ ಮಾಡಬೇಕಿಲ್ಲ. ಯಾಕೆಂದರೆ ಇದು ಈಕೆಯ ಕನಸು.

VISTARANEWS.COM


on

btech paanipuruvaali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಓದಿದ ತಕ್ಷಣ ಏನಾದರೊಂದು ಕೆಲಸ ಸಿಕ್ಕಬೇಕು, ಅದಕ್ಕಾಗಿ ಇಂಥದ್ದೇ ಓದಬೇಕು ಎಂಬ ಮನಸ್ಥಿತಿಯನ್ನೆಲ್ಲ ಈಕೆ ನಿವಾಳಿಸಿ ಎಸೆದು, ಮನಸ್ಸು, ಮಾಡಬಲ್ಲೆ ಎಂಬ ಆತ್ಮಸ್ಥೈರ್ಯ, ಒಂದಿಷ್ಟು ಪರಿಶ್ರಮ, ಜೊತೆಗೆ ಹೊಸದೇನನ್ನು ಮಾಡಬಹುದು ಎಂಬ ಕ್ರಿಯಾತ್ಮಕ ಆಲೋಚನೆ ಇದ್ದರೆ ಸಾಕು ಇಂದಿನ ಜಗತ್ತಿನಲ್ಲಿ ಏನು ಬೇಕಾದರೂ ಮಾಡಿ ಗೆಲ್ಲಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಈಗ ಈಕೆ ದೆಹಲಿ ಪ್ರಮುಖ ಬೀದಿಗಳಲ್ಲಿ ʻಬಿಟೆಕ್‌ ಪಾನಿಪುರಿವಾಲಿʼ ಎಂದೇ ಪ್ರಸಿದ್ಧ.

ಈಕೆಯ ಹೆಸರು ತಾಪ್ಸಿ ಉಪಾಧ್ಯಾಯ. ಓದಿದ್ದು ಬಿಟೆಕ್‌. ವಯಸ್ಸು ೨೧. ಮಾಡುತ್ತಿರುವ ಕೆಲಸ ರಸ್ತೆಬದಿಯಲ್ಲಿ ಪಾನಿಪುರಿ ಗಾಡಿ! ಅಯ್ಯೋ, ಇವಳಿಗೇನಾಯಿತು ಅಷ್ಟು ಓದಿ ಈಗ ಅನ್ಯಾಯವಾಗಿ ಪಾನಿಪುರಿ ಮಾರುತ್ತಾಳಲ್ಲ ಎಂದು ನಗೆಯಾಡುವ, ಕನಿಕರ ತೋರುವ ಕೆಲಸ ಮಾಡಬೇಕಿಲ್ಲ. ಯಾಕೆಂದರೆ ಇದು ಈಕೆಯ ಕನಸು. ರಸ್ತೆ ಬದಿಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯಕರ ಪಾನಿಪುರಿ ಕಡಿಮೆ ದರದಲ್ಲಿ ಜನರಿಗೆ ಸಿಗುವಂತಾಗಬೇಕು ಹಾಗೂ ಅಂಥದ್ದೊಂದು ಸ್ಟಾರ್ಟಪ್‌ ಉದ್ಯಮ ತಾನು ಆರಂಭಿಸಬೇಕು ಎಂಬುದು.

ಈಕೆ ಹೇಳುವಂತೆ ಈಕೆಯ ಹೆತ್ತವರಿಗೆ ತನ್ನ ಮಗಳು ಓದಿ ಐಎಎಸ್‌ಗೆ ತಯಾರಿ ನಡೆಸಿ, ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದೇ ಅಂದುಕೊಂಡಿದ್ದರು. ಆದರೆ, ಈಕೆ ನಾಗರಿಕ ಸೇವಾ ಪರೀಕ್ಷೆಗೆ ತನ್ನ ಬಿಟೆಕ್‌ ಜೊತೆಜೊತೆಗೇ ತಯಾರಿ ನಡೆಸುತ್ತಿರುವಾಗ ಐದಾರು ತಿಂಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವು ವರ್ಷಗಳ ಕಾಲ ತಾನು ಒಂದೇ ಗುರಿಯಲ್ಲಿ, ಯಾವ ಬೇರೆ ಆಲೋಚನೆಗಳನ್ನೂ ಮಾಡದೆ ಓದಿ ತಯಾರಾಗಬೇಕಾಗುತ್ತದೆ. ಆದರೆ, ಅಷ್ಟರವರೆಗೆ ಆರ್ಥಿಕವಾಗಿ ಹೆತ್ತವರನ್ನೇ ಅವಲಂಬಿಸುವುದು ನನಗೆ ಸಾಧ್ಯವಿಲ್ಲವೆನಿಸಿತು. ಹೀಗಾಗಿ ಐಎಎಸ್‌ ಕನಸು ಕೈಬಿಟ್ಟೆ. ನನ್ನದೇ ಆದ ಉದ್ಯಮ ಆರಂಭಿಸಬೇಕೆಂಬ ಯೋಚನೆ ಇತ್ತು. ಅದಕ್ಕೆ ಓದುತ್ತಿರುವಾಗಲೇ ಸಂಜೆಯ ಹೊತ್ತು ಇದನ್ನು ಯಾಕೆ ಆರಂಭಿಸಬಾರದು ಎಂಬ ಯೋಚನೆ ಬಂತು ಹೀಗಾಗಿ ಆರಂಭಿಸಿದೆ ಎನ್ನುತ್ತಾರೆ ತಾಪ್ಸಿ.

ಈ ಉದ್ಯಮ ಆರಂಭಿಸುವಾಗ ಸಾಕಷ್ಟು ವಿರೋಧ ಬಂತು. ನಿಜ ಹೇಳಬೇಕೆಂದರೆ ನಾನು ನನ್ನ ಹೆತ್ತವರಿಗೆ ಪಾನಿಪುರಿ ಉದ್ಯಮ ಆರಂಭಿಸುತ್ತೇನೆಂದು ಹೇಳಲೇ ಇಲ್ಲ. ಇದನ್ನು ಆರಂಭಿಸುವ ಮೊದಲು ಸಾಕಷ್ಟು ಈ ಬಗ್ಗೆ ಓದಿಕೊಂಡೆ. ಸಾಕಷ್ಟು ತಯಾರಿ ಮಾಡಿಕೊಂಡೆ. ಅವರಿಗೆ ಮೊದಲೇ ಹೇಳಿದರೆ, ಖಂಡಿತ ನನ್ನ ಯೋಚನೆಯ ಬಗ್ಗೆ ತಕರಾರು ಮಾಡುತ್ತಾರೆಂದು ಗೊತ್ತಿತ್ತು. ಹೀಗಾಗಿ ಹೇಳಲಿಲ್ಲ. ಆರಂಭಿಸಿದೊಂದು ವಾರ ಬಿಟ್ಟು ಅವರಿಗೆ ಹೇಳಿದೆ. ಅವರು ಆರಂಭದಲ್ಲಿ ʻಐಎಎಸ್‌ ಮಾಡುತ್ತೇನೆ ಎಂದು ನೀನು ದೆಹಲಿಗೆ ಬಂದೆ, ಅಲ್ಲಿಗೆ ಹೋಗಿ ಪಾನಿಪುರಿ ಮಾರ್ತಾ ಇದ್ದೀಯಾʼ ಎಂದು ಬೇಸರ ಮಾಡಿಕೊಂಡರು. ನಾನೇನು ಮಾಡುತ್ತೇನೆ, ನನ್ನ ಕೆಲಸ ಹೇಗಿದೆ, ಹಾಗೂ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ನೋಡಿದ ಮೇಲೆ ನೀವು ಏನೇ ಹೇಳುವುದಿದ್ದರೂ ಹೇಳಿ ಎಂದೆ. ಆಮೇಲೆ ಅವರು ಕೆಲ ದಿನ ನನ್ನ ಜೊತೆಗಿದ್ದು ನನ್ನ ಕೆಲಸ ನೋಡಿದ ಮೇಲೆ ಸರಿಯಾದರು ಎನ್ನುತ್ತಾಳೆ ಈಕೆ.

ನನ್ನ ಪಾನಿಪುರಿಯನ್ನು ಗೋಧಿಯಿಂದಲೇ ಮಾಡಿದ್ದು ಹಾಗೂ ಎಣ್ಣೆಯಲ್ಲಿ ಹುರಿದದ್ದಲ್ಲ. ಪೂರಿಯನ್ನು ಏರ್‌ಫ್ರೈ ಮಾಡಿದ್ದಾಗಿದ್ದು, ಇದು ಎಣ್ಣೆರಹಿತ ಪೂರಿಯಾಗಿದೆ. ಇದರಲ್ಲಿ ಬಳಸುವ ಇಪ್ಪು ಕೂಡಾ ಹಿಮಾಲಯನ್‌ ಪಿಂಕ್‌ ಉಪ್ಪು. ಸಿಹಿ ಚಟ್ನಿಗೂ ಕೂಡಾ ಸಕ್ಕರೆ ಹಾಕದೆ, ಕೇವಲ ಆರ್ಗ್ಯಾನಿಕ್‌ ಬೆಲ್ಲ, ಖರ್ಜೂರ ಹಾಗೂ ಹುಣಸೆಹಣ್ಣನ್ನು ಹಾಕಿ ಮಾಡಿದ್ದಾಗಿದೆ. ಇದು ಆರೋಗ್ಯಕರ ಪಾನಿಪುರಿ ಎಂಬ ಭರವಸೆ ನಾನು ಕೊಡಬಲ್ಲೆ ಎನ್ನುತ್ತಾರೆ ಆಕೆ.

ಇದನ್ನೂ ಓದಿ: Namakwali: ʻನಮಕ್‌ವಾಲಿʼ ಮಹಿಳೆಯರ ವಿಶೇಷ ಸ್ವಾದದ ಉತ್ತರಾಖಂಡದ ಉಪ್ಪು ವಿದೇಶದಲ್ಲೂ ಜನಪ್ರಿಯ!

btech paanipuruvaali

ವಾರದ ಎಲ್ಲಾ ದಿನಗಳ ಒಂದೊಂದು ದಿನ ಒಂದೊಂದು ಮಾರುಕಟ್ಟೆಯ ಗಲ್ಲಿಯಲ್ಲಿ ಈಕೆ ತನ್ನ ಪಾನಿಪುರಿ ಗಾಡಿ ತರುತ್ತಿದ್ದು, ದೆಹಲಿಯ ಏಳು ಪ್ರಮುಖ ಮಾರುಕಟ್ಟೆಗಳಲ್ಲಿ ಈಕೆಯ ಕೈರುಚಿ ಸವಿಯಬಹುದು. ಐದು ಪೂರಿಗಳ್ನು ಒಂದು ಪ್ಲೇಟ್‌ನಲ್ಲಿ ಈಕೆ ಕೊಡುತ್ತಿದ್ದು ಇದಕ್ಕೆ ೩೦ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಈಕೆಯ ಪಾನಿಪುರಿಯನ್ನು ಬಹಳ ಮಂದಿ ಸವಿದಿದ್ದು, ಒಮ್ಮೆ ಸವಿದವರು ಮತ್ತೆ ಈಕೆಯಲ್ಲಿಗೆ ಬರದೇ ಇರುವುದಿಲ್ಲವಂತೆ.

ಎಲ್ಲ ಬಗೆಯ ಜನರೂ ಗ್ರಾಹಕರಾಗಿ ಬರುತ್ತಾರೆ. ಆದರೆ, ನನಗೆ ಬಹಳಷ್ಟು ಮಂದಿ ಪ್ರೋತ್ಸಾಹದ ಮಾತನ್ನಾಡಿದ್ದಾರೆ. ನನ್ನ ಪಾನಿಪುರಿ ತಿಂದು ರುಚಿಯನ್ನು ಹೊಗಳಿದ್ದಾರೆ. ಒಳ್ಳೆಯದಾಗಲಿ ಎಂದಿದ್ದಾರೆ. ಹಾಗಾಗಿ ನಾನು, ನನ್ನನ್ನು ಕಾಲೆಳೆಯುವ ಮಂದಿಯ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಈ ಉದ್ಯಮವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಚನೆಯೂ ಇದೆ ಎಂದು ಕನಸಿನ ಬಗ್ಗೆ ಭರವಸೆಯ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ ತಾಪ್ಸಿ.

ಇದನ್ನೂ ಓದಿ: Women achievers | ನೈಕಾ, ಝಿವಾಮೆ ಆನ್‌ಲೈನ್‌ ಉದ್ದಿಮೆಯ ಹಿಂದಿನ ಇಬ್ಬರು ಮಹಿಳೆಯರ ಸ್ಫೂರ್ತಿ ಕತೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಫೂರ್ತಿ ಕತೆ

Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು

Raja Marga Column : ನಮ್ಮ ಬದುಕಿನಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿ ನಮ್ಮ ಜೀವನವನ್ನು ಸಹನೀಯವಾಗಿಸುವ ಮಹಿಳಾ ಲೋಕಕ್ಕೆ ಶುಭಾಶಯಗಳನ್ನು ಸಲ್ಲಿಸುವುದನ್ನು ಮರೆಯದಿರೋಣ. ಇಲ್ಲಿವೆ ನಾವು ನೆನಪಿಸಿಕೊಳ್ಳಲೇಬೇಕಾದ ಕೆಲವು ಚಿತ್ರಗಳು.

VISTARANEWS.COM


on

Raja Marga column faces of Woman
Koo
RAJA MARGA COLUMN Rajendra Bhat

Raja Marga Column : ಮಾರ್ಚ್ 8ರ ವಿಶ್ವ ಮಹಿಳಾ ದಿನ (International Womens day) ನೇಪಥ್ಯಕ್ಕೆ ಸರಿದೇ ಹೋಯಿತು. ಅದು ಆಕೆಯ ದಿನ ಆಗಿತ್ತು. ಆಕೆಗೋಸ್ಕರ ಮುಡಿಪಾದ ದಿನ. ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ ಅದು. ಅದಿಲ್ಲದೆ ಆಚರಣೆ ಪೂರ್ತಿ ಆಗೋದಿಲ್ಲ. ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ನಾದಿನಿಯಾಗಿ, ಓರಗಿತ್ತಿಯಾಗಿ, ಆಪ್ತತೆಯ ಗೆಳತಿಯಾಗಿ, ಹೆಂಡತಿಯಾಗಿ, ಪ್ರೇರಣೆ ನೀಡುವ ಪ್ರೇಯಸಿ ಆಗಿ, ಶಿಕ್ಷಕಿಯಾಗಿ….. ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣರಾದ, ತನ್ನ ಬದುಕಿನ ಇಂಚಿಂಚು ಹ್ಯಾಪಿನೆಸನ್ನು ತುಂಬಾ ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯೀ ಮಹಿಳೆಗೂ ಅವಳದ್ದೇ ಮಹಿಳಾ ದಿನದ ಶುಭಾಶಯಗಳನ್ನು (Wishes to all women) ಸಲ್ಲಿಸಲು ಬಾಕಿ ಇದ್ದವರು ಇಂದಾದರೂ ಸಲ್ಲಿಸಿ.

Raja marga Column : ಆ ನೆಪದಲ್ಲಿ ಒಂದು ದಿನ ತಡವಾಗಿ ಆದರೂ ಒಂದು ಸುತ್ತು ಪಟ್ಟಿ ಮಾಡೋಣ!

ಮಹಿಳಾ ದಿನದ ನೆಪದಲ್ಲಿ ಹೀಗೊಂದು ಅರ್ಥಪೂರ್ಣ ಮಹಿಳಾ ಸಾಧಕರನ್ನು ಪಟ್ಟಿ ಮಾಡುತ್ತ ಹೋಗೋಣ. ಹಾಗೂ ಅವರನ್ನು ಅಭಿನಂದನೆ ಕೂಡ ಮಾಡೋಣ.

1. ನೂರಾರು ಆಲದ ಮರ ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನಿಗೆ..

Raja Marga column faces of Woman salu marada thimmakka

2. ಸಾವಿರಾರು ಜಾನಪದ ಹಾಡುಗಳನ್ನು ನೆನಪಿಟ್ಟು ಅವುಗಳನ್ನು ಹಾಡುತ್ತ ಜನಜಾಗೃತಿ ಮೂಡಿಸುತ್ತಿರುವ ಸುಕ್ರಜ್ಜಿಗೆ…

3. ಚಾರ್ಲಿ ಚಾಪ್ಲಿನ್ ಎಂಬ ಅದ್ಭುತ ಪ್ರತಿಭೆಗೆ ಜನ್ಮ ಕೊಟ್ಟ ಮತ್ತು ಅವನ ಪ್ರತಿಭೆಗೆ ಕೊನೆಯ ಉಸಿರಿನತನಕ ಪ್ರೇರಣೆಯಾಗಿ ನಿಂತ, ತನಗೆ ಮರೆವಿನ ಕಾಯಿಲೆ ಇದ್ದರೂ ಮಗನಿಗಾಗಿ ಜೀವ ಹಿಡಿದುಕೊಂಡ ಅವನ ತಾಯಿ ಹಾನ್ನಾ ಚಾಪ್ಲಿನ್ ಅವರಿಗೆ.

4. ಎಡಿಸನ್ ಎಂಬ ಸಮಸ್ಯಾತ್ಮಕ ಮಗುವಿಗೆ ಜನ್ಮ ಕೊಟ್ಟು ನೂರಾರು ಸವಾಲುಗಳ ನಡುವೆ ಕೂಡ ಆತನ ಅಷ್ಟೂ ಸಂಶೋಧನಾ ಪ್ರವೃತ್ತಿಗಳಿಗೆ ಬೆಂಬಲವಾಗಿ ನಿಂತ ಆತನ ತಾಯಿ ಗ್ಲಾಡಿಸ್‌ರಿಗೆ

5. ಡಾಕ್ಟರ್ ರಾಜಕುಮಾರ್ ಎಂಬ ಲೆಜೆಂಡ್ ನಟನ ಮುಗ್ಧತೆಗೆ ಬೇಲಿಯಾಗಿ ನಿಂತ ಮಡದಿ ಪಾರ್ವತಮ್ಮ ರಾಜಕುಮಾರ್ ಅವರಿಗೆ.

Raja Marga Column parvathamma Rajkumar

6. ಕಾಳಿದಾಸನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ದೇವತೆಯಾಗಿ ನಿಂತ ವಿದ್ಯಾಧರೆ ಎಂಬ ಸುಂದರ ರಾಜಕುಮಾರಿಗೆ.

7. ಶಿವಾಜಿ ಎಂಬ ಶಕ್ತಿಶಾಲಿ ಮಗನ ಮೂಲಕ ತಾನು ಕನಸು ಕಂಡ ಹಿಂದವೀ ಸಾಮ್ರಾಜ್ಯವನ್ನು ಕಡೆದು ನಿಲ್ಲಿಸಿದ ಮಹಾಮಾತೆ ಜೀಜಾಬಾಯಿಗೆ.

8. ನರೇಂದ್ರ(ಸ್ವಾಮಿ ವಿವೇಕಾನಂದ) ಎಂಬ ಆಧ್ಯಾತ್ಮ ಶಿಖರಕ್ಕೆ ಒತ್ತಾಸೆಯಾಗಿ ನಿಂತ ಆತನ ತಾಯಿಯಾದ ಭುವನೇಶ್ವರಿ ದೇವಿಗೆ.

9. ಅಂಕೋಲಾದ ಕಾಡುಗಳಲ್ಲಿ ವೃಕ್ಷ ರಾಶಿಯನ್ನು ಬೆಳೆಸಿ ಅದರ ಸಂರಕ್ಷಣೆ ಮಾಡಿ ನೇಪಥ್ಯದಲ್ಲಿ ನಿಂತ ತುಳಸೀ ಗೌಡ ಅವರಿಗೆ.

Raja Marga column  Tulsi Gowda

10. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಸಿರಾಗಿ ಬೆಳೆಸಿದ, ಸಂಗೀತದ ಕಂಪನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿರುವ ಭಾರತ ರತ್ನ ಡಾ. ಎಂ ಎಸ್ ಸುಬ್ಬುಲಕ್ಷ್ಮಿ ಅವರಿಗೆ.

11. ಮಹಿಳಾ ಕ್ರಿಕೆಟನ್ನು ಭಾರತದಲ್ಲಿ ಜನಪ್ರಿಯತೆಯ ಶಿಖರದ ತುದಿಗೆ ಮುಟ್ಟಿಸಿದ ಬಲಿಷ್ಠ ಕ್ರಿಕೆಟರ್ ಮಿತಾಲಿ ರಾಜ್ ಅವರಿಗೆ..

12. ಭಾರತದ ಮೊದಲ ಮಹಿಳಾ ವೈದ್ಯೆಯಾಗಿ ಕೀರ್ತಿ ಪಡೆದು, ಪ್ರಾಕ್ಟೀಸ್ ಆರಂಭ ಮಾಡುವ ಮೊದಲೇ ನಿಧನರಾದ ಡಾಕ್ಟರ್ ಆನಂದಿಬಾಯಿ ಜೋಶಿ ಅವರಿಗೆ.

Raja Marga column : ರಾಜ್ಯಸಭೆಗೆ ಆಯ್ಕೆಯಾದ ಸಮಾಜಸೇವಕಿ ಸುಧಾಮೂರ್ತಿ

13. ಸರಳತೆ, ಸಮಾಜಸೇವೆ ಇವುಗಳಿಗೆ ಅನನ್ಯ ಮಾದರಿ ಆದ ಮತ್ತು ತನ್ನ ಪತಿಯ ಪ್ರತೀ ಉದ್ಯಮದ ಕನಸಿಗೂ ಒತ್ತಾಸೆಯಾಗಿ ನಿಂತ ಡಾಕ್ಟರ್ ಸುಧಾಮೂರ್ತಿ ಅವರಿಗೆ.

Raja marga Column Dr Sudha Murthy

14. ಎರಡೆರಡು ನೊಬೆಲ್ ಬಹುಮಾನಗಳನ್ನು ಪಡೆದು, ತನ್ನ ಸಂಶೋಧನೆಗಳ ಮೂಲಕ ಮಾನವ ಕುಲದ ಕಲ್ಯಾಣವನ್ನು ಹಾರೈಸಿದ ಮೇಡಂ ಕ್ಯೂರಿ ಅವರಿಗೆ.

15. ಮದುವೆಯಾಗಲು ತನ್ನನ್ನು ಒತ್ತಾಯಿಸಿದ ಹಿಂದೀ ಸಿನೆಮಾದ ಶೋಮ್ಯಾನ್ ಆದ ರಾಜ್ ಕಪೂರ್ ಅವರ ಪ್ರಸ್ತಾಪವನ್ನು ಪ್ರೀತಿಯಿಂದ ನಿರಾಕರಿಸಿ, ಕೊನೆಯವರೆಗೂ ಆತನ ಪ್ರಿಯತಮೆ ಆಗಿ ಉಳಿದು ಆತನಿಂದ ಮಹಾ ಸಿನೆಮಾಗಳನ್ನು ಮಾಡಿಸಿದ ಮೇರು ನಟಿ ನರ್ಗೀಸ್ ಅವರಿಗೆ.

16. ಹಾಡುವುದಕ್ಕಾಗಿಯೇ ಹುಟ್ಟಿ ಬಂದ, ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಭಾರತದ ಧ್ವನಿ ಎಂದೇ ಪ್ರಸಿದ್ಧಿ ಪಡೆದ ಮೇರು ಗಾಯಕಿ ಲತಾ ಮಂಗೇಷ್ಕರ್ ಅವರಿಗೆ.

Raja marga Column : ಗಟ್ಟಿತನಕ್ಕೆ ಇನ್ನೊಂದು ಹೆಸರು ಇಂದಿರಾ ಗಾಂಧಿ

17. ಗಟ್ಟಿತನ, ದಿಟ್ಟತನ ಮತ್ತು ಕಠಿಣ ನಿರ್ಧಾರಗಳಿಗೆ ಹೆಸರು ಮಾಡಿದ, ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ.

 Raja Marga column 
 Indira Gandhi

18. ತಾನೇ ಸ್ವತಃ ಅನಾಥೆ ಆಗಿದ್ದರೂ, ಭಿಕ್ಷೆ ಬೇಡಿ ಅನಾಥಾಶ್ರಮಗಳನ್ನು ಕಟ್ಟಿ ಸಾವಿರಾರು ಅನಾಥ ಮಕ್ಕಳ ತಾಯಿಯಾದ ಸಿಂಧುತಾಯಿ ಸಪ್ಕಲ್ ಅವರಿಗೆ.

19. ರೆಕ್ಕೆ ಬಿಚ್ಚಿ ಹಾರಾಡುವ ತನ್ನ ಕನಸನ್ನು ಬಾಹ್ಯಾಕಾಶ ಯಾನದ ಮೂಲಕ ನನಸು ಮಾಡಲು ಹೊರಟು ಅರ್ಧದಲ್ಲಿಯೇ ಬೂದಿ ಆಗಿ ಹೋದ ಕಲ್ಪನಾ ಚಾವ್ಲಾ ಅವರಿಗೆ.

20. ಇಡೀ ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪೋರ್ಚುಗೀಸರ ಜೊತೆಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಉಳ್ಳಾಲದ ರಾಣಿ ಅಬ್ಬಕ್ಕ ಅವರಿಗೆ..

ಇದನ್ನೂ ಓದಿ : Womens Day 2024: ಉದ್ಯಾನನಗರಿಯ ಫ್ಯಾಷನ್‌ ಲೋಕದಲ್ಲಿ ಮಹಿಳೆಯರದೇ ಮೇಲುಗೈ!

21. ‘ದ ವುಮನ್ ವಿದ್ ದ ಲ್ಯಾಂಪ್’ ಎಂದು ಎಲ್ಲರಿಂದ ಕರೆಸಿಕೊಂಡು ಯುದ್ಧದಲ್ಲಿ ಸಂತ್ರಸ್ತರಾದ ಸೈನಿಕರ ಆರೈಕೆಗೆ ಸಂಕಲ್ಪ ಮಾಡಿದ, ವಿಶ್ವದ ಮೊದಲ ನರ್ಸಿಂಗ್ ಕಾಲೇಜನ್ನು ತೆರೆದ ಫ್ಲಾರೆನ್ಸ್ ನೈಟಿಂಗೇಲ್‌ ಅವರಿಗೆ.

22. ‘ಕಲಾ ಮಂಡಲಮ್ ‘ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿ ಸಂಗೀತ ಮತ್ತು ನೃತ್ಯಗಳನ್ನು ಆರಾಧನೆ ಮಾಡಿದ ಮಹಾನ್ ಕಲಾವಿದೆ ರುಕ್ಮಿಣೀ ದೇವಿ ಆರುಂಡೇಲ್ ಅವರಿಗೆ…

23. ಗಂಡಾಗಿ ಹುಟ್ಟಿ, ಒಳಗಿನ ಧ್ವನಿಗಳಿಗೆ ಕಿವಿಕೊಟ್ಟು ಮುಂದೆ ಹೆಣ್ಣಾಗಿ ಪರಿವರ್ತನೆ ಆಗಿ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ, ಕನ್ನಡದ ಜಾನಪದ ಜಗತ್ತನ್ನು ವಿಸ್ತರಿಸಿದ ಮಂಜಮ್ಮ ಜೋಗತಿ ಅವರಿಗೆ.

Raja Marga Column Manjamma Joagathi

24. ಶಂಕರನಾಗ್ ಅವರ ನೂರಾರು ಅಪೂರ್ಣ ಕನಸುಗಳನ್ನು ಅವರ ಮರಣದ ನಂತರ ಒಂದೊಂದಾಗಿ ಪೂರ್ತಿ ಮಾಡಿ ಕನ್ನಡದಲ್ಲಿ ರಂಗ ಸಂಸ್ಕೃತಿಯನ್ನು ಬೆಳೆಸಿದ ಅವರ ಪತ್ನಿ ಅರುಂಧತಿ ನಾಗ್ ಅವರಿಗೆ.

25. ಕನ್ನಡದ ಅತೀ ಶ್ರೇಷ್ಟವಾದ ಕಾದಂಬರಿಗಳನ್ನು ಬರೆದು ಸಾರಸ್ವತ ಲೋಕಕ್ಕೆ ಪರಿಚಯ ಮಾಡಿದ ಕನ್ನಡದ ಮಹಾ ಲೇಖಕಿ ಎಂ ಕೆ ಇಂದಿರಾ ಅವರಿಗೆ.

26. ಬೆಂಗಳೂರಿನಲ್ಲಿ ಬಯೋಕಾನ್ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಅವರಿಗೆ.

27. ಮಹಾಕವಿ ರನ್ನನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ಮತ್ತು ಬೆಂಬಲವಾಗಿ ನಿಂತ ಮಹಾ ದಾನಿ ಅತ್ತಿಮಬ್ಬೆಗೆ.

28. ಭಾರತದ ಮೊದಲ ಐಪಿಎಸ್ ಅಧಿಕಾರಿ ಆಗಿ ಮೂಡಿಬಂದು, ತನಗೆ ದೊರೆತ ಅವಕಾಶಗಳನ್ನು ಅತ್ಯಂತ ಸಮರ್ಥವಾಗಿ ಬೆಳೆಸಿಕೊಂಡ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ .

raja Marga Column Kiran Bedi tihar jail

29. ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕವು ಸಿಗಲು ಸಾಧ್ಯವೇ ಇಲ್ಲ ಎಂಬ ಕೂಗಿನ ನಡುವೆಯೂ ಎಂಬತ್ತರ ದಶಕದಲ್ಲಿ ಭಾರತೀಯರಿಗೆ ಮೊದಲ ಬೆಳಕಿನ ಕಿಟಕಿ ತೆರೆದ ಪಯ್ಯೋಳಿ ಎಕ್ಸ್‌ಪ್ರೆಸ್‌ ಪಿ.ಟಿ. ಉಷಾ ಅವರಿಗೆ.

ಇದನ್ನೂ ಓದಿ : Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ನಾವು ಬದುಕುವ ಜಗತ್ತನ್ನು ತನ್ನ ಅದಮ್ಯ ಶಕ್ತಿಗಳ ಮೂಲಕ ಶ್ರೀಮಂತಗೊಳಿಸಿದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ಇನ್ನೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅಷ್ಟರ ಮಟ್ಟಿಗೆ ಭಾರತವನ್ನು ಪುಣ್ಯಗರ್ಭೆ ಎಂದೇ ಕರೆಯಬಹುದು. ಅವರಿಗೆಲ್ಲ ಒಂದು ದಿನ ತಡವಾಗಿ ಆದರೂ ಮತ್ತೆ ಅವರದೇ ದಿನಗಳ ಶುಭಾಶಯಗಳು. ಸ್ತ್ರೀಯರನ್ನು ಗೌರವಿಸುವ ಎಲ್ಲರಿಗೂ ಎಲ್ಲಾ ದಿನವೂ ಮಹಿಳಾ ದಿನಗಳೇ ಎನ್ನುವುದು ನನ್ನ ನಂಬಿಕೆ.

Continue Reading

ಆರೋಗ್ಯ

Women’s Day 2024: 30 ವರ್ಷದ ನಂತರ ಮಹಿಳೆಯರು ಮಾಡಿಸಲೇಬೇಕಾದ ಆರೋಗ್ಯ ತಪಾಸಣೆಗಳಿವು

Women’s Day 2024: ಮೂವತ್ತರ ನಂತರ ಮಹಿಳೆಯರಿಗೆ ಅಗತ್ಯವಾಗಿ ಕೆಲವು ಆರೋಗ್ಯ ತಪಾಸಣೆಗಳು ಬೇಕಾಗುತ್ತವೆ. ಇದರಿಂದ ಮೊಳಕೆಯಲ್ಲಿರಬಹುದಾದ ಸಮಸ್ಯೆಗಳನ್ನು ಚಿವುಟಲು ಸಾಧ್ಯವಿದೆ. ಆರೋಗ್ಯಪೂರ್ಣ ದೇಹ-ಮನಸ್ಸುಗಳನ್ನು ಹೊಂದಲು ಇಂಥ ಕ್ರಮಗಳು ಮಹತ್ವದ್ದೆನಿಸುತ್ತವೆ.

VISTARANEWS.COM


on

These are the health checks that women should do after the age of 30
Koo

ಬದುಕಿನ ಪ್ರತಿಯೊಂದು ಹಂತದಲ್ಲೂ ಹಲವಾರು ಬದಲಾವಣೆಗಳಿಗೆ ಸ್ತ್ರೀಯರ ದೇಹಗಳು ಒಳಪಡುತ್ತಲೇ ಇರುತ್ತವೆ. ಇದಕ್ಕೆ ಜೊತೆಯಾಗಿ ಮಾನಸಿಕ ಬದಲಾವಣೆಗಳೂ ಸಂಭವಿಸುತ್ತಿರುತ್ತವೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎನಿಸಿದರೂ, ಆಂತರಿಕವಾಗಿ ಆಗುವ ಸಮಸ್ಯೆಗಳು ಆರಂಭದಲ್ಲಿ ಗೋಚರಿಸದೇ ಹೋಗಬಹುದು. ಹಾಗಾಗಿ ಮೂವತ್ತು ವರ್ಷಕ್ಕೆ ಮೇಲ್ಪಟ್ಟ ಮಹಿಳೆಯರಿಗೆ ಕೆಲವು ಮುಂಜಾಗ್ರತಾ ಪರೀಕ್ಷೆಗಳು ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತವೆ. ಯಾವ ಪರೀಕ್ಷೆಗಳವು?

ಥೈರಾಯ್ಡ್‌ ಪರೀಕ್ಷೆ

ದೇಹದ ಕೆಲಸಕ್ಕೆ ಅಗತ್ಯವಾಗಿ ಬೇಕಾದಂಥ ಚೋದಕಗಳನ್ನು ಥೈರಾಯ್ಡ್‌ ಗ್ರಂಥಿ ನೀಡುತ್ತದೆ. ಈ ಗ್ರಂಥಿಯ ಕೆಲಸದಲ್ಲಿ ಏರುಪೇರಾದರೆ ದೇಹದ ಆರೋಗ್ಯವೂ ಏರುಪೇರಾಗುತ್ತದೆ. ಕೂದಲು ಉದುರುವುದು, ಋತುಸ್ರಾವದಲ್ಲಿ ಏರುಪೇರು, ಮಾನಸಿಕ ಸಮಸ್ಯೆಗಳು ಮುಂತಾದ ಹಲವು ತೊಂದರೆಗಳು ಬೆನ್ನು ಬೀಳುತ್ತವೆ. ಹಾಗಾಗಿ ರಕ್ತ ಪರೀಕ್ಷೆಯಲ್ಲಿ ಟಿಎಸ್‌ಎಚ್‌ ಪತ್ತೆ ಪರೀಕ್ಷೆ ಮಾಡಿಸುವುದು 30 ವರ್ಷದ ನಂತರ ಅಗತ್ಯವಾಗಿ ಬೇಕು.

ಪಾಪ್‌ ಸ್ಮೇರ್‌

ಸರ್ವೈಕಲ್‌ ಅಥವಾ ಗರ್ಭಕಂಠದ ಕ್ಯಾನ್ಸರ್‌ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಾಪಟ್ಟೆ ಹೆಚ್ಚಿದೆ. ಶೇ. 9ಕ್ಕೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಈ ತೊಂದರೆಯನ್ನು ಪ್ರಾರಂಭವಾಗುವ ಮೊದಲೇ ಪತ್ತೆ ಮಾಡುವ ಸಾಧ್ಯತೆ ಪಾಪ್‌ ಪರೀಕ್ಷೆಯಲ್ಲಿದೆ. 30 ವರ್ಷದ ನಂತರ ಪ್ರತಿಯೊಬ್ಬ ಮಹಿಳೆಯೂ ಪ್ರತಿ ಮೂರು ವರ್ಷಗಳಿಗೊಮ್ಮೆ ಸ್ತ್ರೀರೋಗ ತಜ್ಞರಲ್ಲಿ ಈ ಪರೀಕ್ಷೆಯನ್ನು ಮಾಡಿಸಲೇಬೇಕು.

ಇದನ್ನೂ ಓದಿ: Women’s Day 2024: ಅಪರೂಪದ ಕಾಯಿಲೆಯ ಮಗನ ಜತೆಗೂ ಪ್ರಪಂಚ ಸುತ್ತುವ ಈ ಅಮ್ಮನೆಂಬ ಸ್ಫೂರ್ತಿ!

ವಿಟಮಿನ್‌ ಡಿ ಮತ್ತು ಕ್ಯಾಲ್ಶಿಯಂ

ಮೂಳೆಗಳ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಈ ಅಂಶಗಳು ದೇಹದಲ್ಲಿ ಎಷ್ಟಿವೆ ಎಂಬುದನ್ನು ಪತ್ತೆ ಮಾಡುವ ಪರೀಕ್ಷೆಯಿದು. ಇವುಗಳು ಕಡಿಮೆಯಿದ್ದರೆ ಆಸ್ಟಿಯೊಪೊರೊಸಿಸ್‌ ಅಥವಾ ಮೂಳೆಗಳು ಟೊಳ್ಳಾಗಿ ಮುರಿಯುವ ಭೀತಿ ಎದುರಾಗುತ್ತದೆ. ಕ್ಯಾಲ್ಶಿಯಂ ಮತ್ತು ವಿಟಮಿನ್‌ ಡಿ ಕೊರತೆಯಿದ್ದರೆ, ಮೊದಲಿಗೆ ಪೂರಕಗಳನ್ನು ತೆಗೆದುಕೊಂಡು ನಂತರ ಆಹಾರದ ಮೂಲಕ ಮಟ್ಟವನ್ನು ನಿರ್ವಹಿಸಬಹುದು.

ಸಿಬಿಸಿ

ಸಂಪೂರ್ಣ ರಕ್ತ ಪರೀಕ್ಷೆಯೂ ಬೇಕಾದೀತು. ಇದರಲ್ಲಿ ಅಂಗಾಂಗಗಳ ಕ್ಷಮತೆ, ಕೊಲೆಸ್ಟ್ರಾಲ್‌, ಹಿಮೊಗ್ಲೋಬಿನ್‌ ಮಟ್ಟ ಮುಂತಾದ ಹಲವಾರು ವಿಷಯಗಳನ್ನು ಪತ್ತೆ ಮಾಡಬಹುದು. ರಕ್ತಹೀನತೆಯಂಥ ಸಮಸ್ಯೆಗಳಿದ್ದರೆ ಇಲ್ಲಿ ಪತ್ತೆಯಾಗುತ್ತದೆ. ಪ್ರತಿ ವರ್ಷ ಹುಟ್ಟಿದ ದಿನಕ್ಕೆ ತಮಗೆ ತಾವೇ ಇಂಥದ್ದೊಂದು ಪರೀಕ್ಷೆಯ ಉಡುಗೊರೆಯನ್ನು ಕೊಟ್ಟುಕೊಳ್ಳಬಹುದು.

ಮೂಳೆ ಸಾಂದ್ರತೆ

ರಜೋನಿವೃತ್ತಿಯಾದ ಮಹಿಳೆಯರು ಮಾಡಿಸಬೇಕಾದ ಪರೀಕ್ಷೆಯಿದು. ಮೂಳೆಗಳ ಸಾಂದ್ರತೆ ಎಷ್ಟಿದೆ ಎಂಬುದನ್ನು ಡೆಕ್ಸ ಸ್ಕ್ಯಾನ್‌ ಮೂಲಕ ಪರೀಕ್ಷಿಸಲಾಗುತ್ತದೆ. ಋತುಬಂಧದ ನಂತರ ಮೂಳೆಗಳು ದುರ್ಬಲವಾಗುವ ಸಾಧ್ಯತೆ ಹೆಚ್ಚಾಗುವುದರಿಂದ, ಇಂಥ ಪರೀಕ್ಷೆಗಳು ಆರಂಭದಲ್ಲೇ ಸಮಸ್ಯೆಗಳನ್ನು ಸೂಚಿಸಬಲ್ಲವು. ಇದಕ್ಕೆ ಸೂಕ್ತ ಚಿಕಿತ್ಸೆಯನ್ನೂ ತೆಗೆದುಕೊಂಡು ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು.

Continue Reading

ಮಹಿಳೆ

Dr Sudha Murthy : ಸುಧಾ ಮೂರ್ತಿ, ಇವರು ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ!

Dr Sudha Murthy : ಡಾ. ಸುಧಾ ಮೂರ್ತಿಯನ್ನು ನೋಡಿದ ಕೂಡಲೇ ಅಮ್ಮ ನೆನಪಾಗುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ಈ ರೀತಿಯ ಗೌರವವನ್ನು ಪಡೆಯುವುದು, ಪ್ರೀತಿಯನ್ನು ಗಳಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ.

VISTARANEWS.COM


on

Raja marga Column Dr Sudha Murthy
Koo

ಬೆಂಗಳೂರು: ‌ಇನ್ಫೋಸಿಸ್‌ (Infosys Company) ಎಂಬ ಮಹಾಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹೆಗಲೆಣೆಯಾಗಿ ದುಡಿದ, ಪರೋಪಕಾರ, ಸಜ್ಜನಿಕೆ, ವಿನಮ್ರತೆಗೆ ಮತ್ತೊಂದು ಹೆಸರಾಗಿ, ಎಲ್ಲರಿಂದಲೂ ಅಮ್ಮ ಎಂದೇ ಕರೆಸಿಕೊಳ್ಳುವ ಡಾ. ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ (Nominated to Rajya sabha) ಮಾಡಲಾಗಿದೆ. ಸರಳತೆ, ವಿನಮ್ರತೆಗಳನ್ನೇ ಆವಾಹಿಸಿಕೊಂಡ ಡಾ. ಸುಧಾ ಮೂರ್ತಿ (Dr Sudha Murthy) ಎಂಬ ಸಾತ್ವಿಕ ಸಾಧಕಿಯ ಬದುಕಿನ ಸಾಧನೆಯ ಹೆಜ್ಜೆ ಗುರುತುಗಳು ಇಲ್ಲಿವೆ.

ಇವರು ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಏಕೈಕ ಮಹಿಳಾ ವಿದ್ಯಾರ್ಥಿನಿ

ಸುಧಾ ಮೂರ್ತಿ (ಹಿಂದೆ ಸುಧಾ ಕುಲಕರ್ಣಿ- Sudha Kulkarni)) ಅವರು ಹುಟ್ಟಿದ್ದು 1950ರ ಆಗಸ್ಟ್‌ 19ರಂದು. ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಗ್ರಾಮದ ಕುಲಕರ್ಣಿ ಮನೆತನ ಇವರದು. ಇವರ ತಂದೆ ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು ಮ್ತು ಪ್ರಾಧ್ಯಾಪಕರಾಗಿದ್ದರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಸಾಧಕಿ.

ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಒಬ್ಬರು ಸುಧಾ. ಹುಟ್ಟೂರಾದ ಶಿಗ್ಗಾಂವಿಯಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದ ಅವರು‌ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದು ಟಾಪರ್‌ ಆಗಿದ್ದರು.

1972ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಮಾಡಿದ ಅವರು, 1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಪದವಿ ಪೂರೈಸಿದರು. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದರು. ಟಾಟಾ ಸಂಸ್ಥೆಯಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಇವರು.

Dr Sudha murthy 11

ಟಾಟಾ ಕಂಪನಿಯಲ್ಲಿ ಉದ್ಯೋಗ ಪಡೆದ ಮೊದಲ ಮಹಿಳೆ!

ಸುಧಾ ಮೂರ್ತಿ ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಎಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಮುಂದೆ ಅವರು ಪುಣೆಯ ವಾಲಚಂದ್‌ ಗ್ರೂಪ್ ಆಫ್ ಇಂಡಸ್ಟ್ರೀಸ್‌ನಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ಆಗಿದ್ದರು.

ಇನ್ಫೋಸಿಸ್‌ ಎಂಬ ಮಹಾ ಕನಸು ನನಸಾದ ಬಗೆ..

1970ರ ಫೆಬ್ರವರಿ 10ರಂದು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ವಿವಾಹ ನಡೆಯಿತು. ತಾವು ದುಡಿದ ಅಷ್ಟೂ ಹಣವನ್ನು, ತಮ್ಮಲ್ಲಿದ್ದ ಚಿನ್ನಾಭರಣಗಳೆಲ್ಲವನ್ನೂ ಮಾರಿ ಇನ್ಫೋಸಿಸ್‌ ಎಂಬ‌ ಸಾಫ್ಟ್‌ವೇರ್‌ ಸಂಸ್ಥೆಯನ್ನು ಕಟ್ಟಿದರು. ತಾವು ಹಗಲು ರಾತ್ರಿ ದುಡಿದು ಅದನ್ನು ಎತ್ತರಕ್ಕೆ ಬೆಳೆಸಿದರು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಷ್ಟು ಮಟ್ಟಕ್ಕೆ ಬೆಳೆಸಿದರು.

ಸಾರ್ವಜನಿಕ ಸೇವೆಯಲ್ಲಿ ಮಮತೆಯ ತಾಯಿಯಾದರು

ಎಂಜಿನಿಯರ್‌ ಆಗಿದ್ದರೂ, ದೊಡ್ಡ ಸಂಸ್ಥೆಯನ್ನೇ ಕಟ್ಟಿದರೂ ಅವರ ತುಡಿತ ಇದ್ದಿದ್ದು ಸಮಾಜಸೇವೆಯಲ್ಲಿ. ಹೀಗಾಗಿ ಅವರು 1996ರಲ್ಲಿ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಸುಧಾ ಮೂರ್ತಿ ಅವರು ದೇವದಾಸಿಯರ ಬದುಕಿನಲ್ಲಿ ಬದಲಾವಣೆ ಮಾಡಿದರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಿದರು. ಅವರ ಟ್ರಸ್ಟ್ ಇದುವರೆಗೆ 2,300 ಮನೆಗಳನ್ನು ನಿರ್ಮಿಸಿದೆ. ಟ್ರಸ್ಟ್​ ಮೂಲಕ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಇದುವರೆಗೆ 70,000 ಗ್ರಂಥಾಲಯಗಳನ್ನು ನಿರ್ಮಾಣಮಾಡಿದ್ದಾರೆ. ಇವರ ಸಂಸ್ಥೆ ಇದುವರೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.

ಅಪೂರ್ವ ಸಾಹಿತ್ಯ ಸೇವೆ, ಅವರು ಪುಸ್ತಕಗಳಿಂದಲೇ ಗಳಿಸಿದ್ದು 300 ಕೋಟಿ

ಸುಧಾ ಮೂರ್ತಿ ಅವರು ಸಾಧಕಿ, ಸಮಾಜಸೇವಕಿ ಮಾತ್ರವಲ್ಲ ಅಪರೂಪದ ಲೇಖಕಿ, ಬರಹಗಾರ್ತಿ. ಅವರು ಕನ್ನಡ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ನಿಜವೆಂದರೆ, ಅವರು ಈಗಾಗಲೇ ಪುಸ್ತಕಗಳಿಂದಲೇ 300 ಕೋಟಿ ರೂ. ಆದಾಯ ಗಳಿಸಿದ್ದಾರೆ.

ಸುಧಾ ಮೂರ್ತಿಯವರ ಕನ್ನಡ ಕೃತಿಗಳು ಇವು

ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿಧಿ, ಮನದ ಮಾತು (ಅಂಕಣ ಬರಹಗಳ ಸಂಗ್ರಹ), ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸರ್ಪೆಂಟ್ಸ್ ರಿವೇಂಜ್, ತುಮುಲ, ಋಣ, ಯಶಸ್ವಿ, ಸಾಫ್ಟ್ ಮನ, ಏರಿಳಿತದ ದಾರಿಯಲ್ಲಿ, ನೂನಿಯ ಸಾಹಸಗಳು

ಸುಧಾ ಮೂರ್ತಿಯವರ ಇಂಗ್ಲಿಷ್‌ ಪುಸ್ತಕಗಳು

The Serpent’s Revenge, How I Taught My Grandmother to Read., Something Happened on the Way to Heaven, The Old Man and His God: Discovering the Spirit of India, The Day I Stopped Drinking Milk, Wise and Otherwise, Gently Falls the Bakula, The Accolades Galore, The Bird with Golden Wings: Stories of Wit and Magic, Dollar Bahu, Grandma’s Bag of Stories (children’s fiction), The Magic Drum And Other Favourite Stories (children’s stories), House of Cards
The Mother I Never Knew (two novellas), Three thousand stitches, The Man from the Egg
Here, There, Everywhere, Magic of the lost Temple, How the earth got its beauty

ಬ್ರಿಟನ್‌ ಪ್ರಧಾನಿಯ ಅತ್ತೆಯಾದರೂ ಕಿಂಚಿತ್ತೂ ಹಮ್ಮಿಲ್ಲ, ಬಿಮ್ಮಿಲ್ಲ!

ಇನ್ಫೋಸಿಸ್‌ ಕಟ್ಟಿದ ಗರಿಮೆಯ ಸುಧಾ ಮೂರ್ತಿ ಅವರಿಗೆ ಇಬ್ಬರು ಮಕ್ಕಳು. ಮಗ ರೋಹನ್‌ ಮೂರ್ತಿ ಮತ್ತು ಮಗಳು ಅಕ್ಷತಾ ಮೂರ್ತಿ. ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ. ಇಷ್ಟೆಲ್ಲ ದೊಡ್ಡ ಹಿನ್ನೆಲೆ ಹೊಂದಿದ್ದರೂ ಸುಧಾ ಮೂರ್ತಿ ಸರಳತೆಯ ಸಾಕಾರ ಮೂರ್ತಿಯಾಗಿದ್ದಾರೆ. ಯಾವುದೇ ಆಭರಣ ಹಾಕಿಕೊಳ್ಳದೆ, ಕೇವಲ ಸರಳ ಸಾದಾ ಸೀರೆಯಲ್ಲಿ ಮಿಂಚುವ ಇವರು ಆಭರಣ ಖರೀದಿ ಮಾಡಿಯೇ ಇಲ್ಲವಂತೆ.

Sudhamurty ddd

ಚೆನ್ನಾಗಿ ತಲೆ ಬಾಚಿ ಕಟ್ಟಿ, ಹೂವಿಟ್ಟುಕೊಂಡು, ದೊಡ್ಡದೊಂದು ತಿಲಕವಿಟ್ಟು ಪುಟಪುಟನೆ ನಡೆಯುವ ಇವರನ್ನು ನೋಡಿದರೆ ಎಲ್ಲರಿಗೂ ಅಮ್ಮನೋ, ಅಕ್ಕನೋ ಎಂಬ ಆಪ್ತ ಭಾವ. ಅವರೂ ಅಷ್ಟೆ ದೇವಾಲಯಗಳಿಗೆ ಹೋಗಿ ತರಕಾರಿ ಹೆಚ್ಚುತ್ತಾರೆ, ಭಜನೆ ಹೇಳುತ್ತಾರೆ, ಯಾವುದೋ ಅಂಗಡಿಗೆ ಹೋಗಿ ಖರೀದಿ ಮಾಡುತ್ತಾರೆ.. ಹೀಗೆ ಸರಳತೆಯಿಂದಲೇ ಬದುಕು ಸಾಗಿಸುವ ಅವರು ಸಾಧನೆ, ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ.

ಸುಧಾ ಮೂರ್ತಿ ಅವರಿಗೆ ದೇಶವು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇದೀಗ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಮೂಲಕ ದೊಡ್ಡ ಗೌರವ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಧಾ ಮೂರ್ತಿ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: Sudha Murty: ರಾಜ್ಯಸಭೆಗೆ ಕನ್ನಡತಿ ಸುಧಾ ಮೂರ್ತಿ ನಾಮನಿರ್ದೇಶನ; ನಾರಿ ಶಕ್ತಿ ಎಂದ ಮೋದಿ

Continue Reading

ಮಹಿಳೆ

Women’s Day 2024: ಅಪರೂಪದ ಕಾಯಿಲೆಯ ಮಗನ ಜತೆಗೂ ಪ್ರಪಂಚ ಸುತ್ತುವ ಈ ಅಮ್ಮನೆಂಬ ಸ್ಫೂರ್ತಿ!

Women’s Day 2024: ಜಗತ್ತಿನ ಅಮ್ಮಂದಿರೆಲ್ಲರಿಗೆ ಸ್ಫೂರ್ತಿಯಾಗುವ ಇದಕ್ಕಿಂತ ಚಂದದ ಸ್ಫೂರ್ತಿ ಕತೆ ಬೇಕೇ? ತಪ್ಪದೇ ಈ ಬರಹ ಓದಿ.

VISTARANEWS.COM


on

Unlimited Lessons Moushmi Priyesh Kapadia story
Koo

ಚಂದಕ್ಕೆ ಸಾಗುವ ಬದುಕು ಇದ್ದಕ್ಕಿದ್ದಂತೆ ಹಠಾತ್ತನೆ (Women’s Day 2024) ಬದಲಾದಾಗ, ಬದುಕಿನಲ್ಲಿ ಸಮಸ್ಯೆಗಳ ಸುಳಿಯಲ್ಲಿ ನಾವು ಸಿಕ್ಕಿ ಹಾಕಿಕೊಂಡಾಗ, ಇನ್ನು ಮರಳಿ ಬರಲಿಕ್ಕೇ ಆಗುವುದಿಲ್ಲವೇನೋ ಎಂಬಷ್ಟು ಅಧೀರರಾಗಿಬಿಡುತ್ತೇವೆ. ಅದರಲ್ಲಿ ಕೆಲವರು ಮಾತ್ರ ಅವುಗಳನ್ನು ಗೆದ್ದು, ಫೀನಿಕ್ಸಿನಂತೆ ಮೇಲೆದ್ದು ಬರುತ್ತಾರೆ! ಮೌಶ್ಮಿ ಕಪಾಡಿಯಾ ಕತೆ ಅಂಥದ್ದು. ಅಯ್ಯೋ ನನ್ನ ಬದುಕು ಮುಗಿಯಿತು ಎಂದು ಅಂದುಕೊಳ್ಳುವವರಿಗೆ ಮೌಶ್ಮಿ ಕಪಾಡಿಯಾ ಕತೆಯೇ ಸ್ಫೂರ್ತಿಯಾಗಬೇಕು!

ಒಂದು ಕೈಯಲ್ಲಿ ಐದು ವರ್ಷದ ಅಪರೂಪದ ವಂಶವಾಹಿನಿಯ ಕಾಯಿಲೆಗೆ ತುತ್ತಾಗಿದ್ದ ಮಗು, ಇನ್ನೊಂದು ಕೈಯಲ್ಲಿ ಹಸುಗೂಸು, ಮೊದಲ ಮಗುವಿಗೆ ಪದೇ ಪದೇ ಬಿಡದೆ ಕಾಡಲು ಬರುತ್ತಿದ್ದ ನ್ಯುಮೋನಿಯಾ ಕಾಯಿಲೆ, ಮುಗಿಯದ ಆಸ್ಪತ್ರೆ ವಾಸಗಳು, ಪತಿ ಪ್ರಿಯೇಶ್‌ಗೆ ದೂರದ ದುಬೈನಲ್ಲಿ ಕೆಲಸ ಇತ್ಯಾದಿ ಇತ್ಯಾದಿಗಳು ಮೌಶ್ಮಿ ಕಪಾಡಿಯಾರನ್ನು ಹಿಂಡಿ ಹಿಪ್ಪೆ ಮಾಡಿದ್ದಲ್ಲದೆ, ಇದೇ ಕಾರಣಕ್ಕೆ ಆಕೆ ಖಿನ್ನತೆಗೆ ತುತ್ತಾಗಿದ್ದರು. ಮೂರು ವರ್ಷಗಳ ಕಾಲ ಖಿನ್ನತೆಯ ಜೊತೆಗೆ ಹೋರಾಡಿದ ಆಕೆ, 2009ರಲ್ಲಿ ಒಂದು ನಿರ್ಧಾರ ಮಾಡಿದ್ದರು. ಇನ್ನೆಂದೂ ತನ್ನ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗಲು ತಾನು ಬಿಡಬಾರದು ಎಂದು ನಿರ್ಧರಿಸಿದ ಆಕೆ, ತಾನು ಅಂದುಕೊಂಡಂತೆ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಅಷ್ಟೇ ಅಲ್ಲ. ತನ್ನ ಪರಿಸ್ಥಿತಿಯ ಜೊತೆಗೆ ತನ್ನ ಕನಸನ್ನೂ ವಿಸ್ತರಿಸಿಕೊಂಡು ಎಲ್ಲವನ್ನೂ ಅದ್ಭುತವಾಗಿ ಸಂಭಾಳಿಸಿಕೊಂಡು ಇಂದು ಬೈಕರ್‌, ಚಾರಣಿಗ ಎಂದಿನಿಸಿಕೊಂಡಿದ್ದಾರೆ. 21 ದೇಶಗಳನ್ನು ಸುತ್ತಿದ್ದಾರೆ. 12 ಚಾರಣಗಳನ್ನು ಮಾಡಿದ್ದಾರೆ. 26 ರಾಜ್ಯಗಳಲ್ಲಿ ದೇಶದ ಉದ್ದಗಲಕ್ಕೂ ಹಲವಾರು ಬೈಕ್‌ ಯಾತ್ರೆಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ಅಪರೂಪದ ಕಾಯಿಲೆಯಿರುವ ಮಗನಿಗೂ ಹಲವು ದೇಶಗಳ ಪ್ರವಾಸ ಮಾಡಿಸಿದ್ದಾರೆ!
ರಿಜಿಡ್‌ ಸ್ಪೈನ್‌ ಮಸ್ಕ್ಯುಲರ್‌ ಡಿಸ್ಟ್ರೊಫಿ ಎಂಬ ಬೆನ್ನುಹುರಿಯ ಅಪರೂಪದ ವಂಶವಾಹಿನಿ ಸಂಬಂಧೀ ಕಾಯಿಲೆಗೆ ತುತ್ತಾಗಿದ್ದ ಆಕೆಯ ಮೊದಲ ಮಗ ವೇದಾಂಶ್‌ ಕೂಡಾ, ಈಗ ಹಲವರಿಗೆ ಸ್ಪೂರ್ತಿಯ ಚಿಲುಮೆ! ಈತನಿಗೆ ತನ್ನ ಈ ಸ್ಥಿತಿಯ ಬಗೆಗೆ ಬೇಸರವಿಲ್ಲ. ಬದಲಾಗಿ ತನ್ನಮ್ಮನ ಬಗೆಗೆ ಹೆಮ್ಮೆಯಿದೆ!

ಇದನ್ನೂ ಓದಿ: Women’s Day 2024: ಮೀನಾ ಬಿಂದ್ರಾರ ಕನಸಿನ ಕೂಸು ‘ಬೀಬಾ’ ಪ್ರತಿ ಮಹಿಳೆಗೂ ಸ್ಫೂರ್ತಿಕತೆ!

ಗೊತ್ತಾಗಿದ್ದು ಹೇಗೆ?

ಈಕೆ ಹೇಳುವಂತೆ, ಮೊದಲು ವೇದಾಂಶ್‌ಗೆ ಒಂದು ವರ್ಷ ವಯಸ್ಸಾದಾಗ, ಗಂಡ ಪ್ರಿಯೇಶ್‌ ತನ್ನ ಮಗುವಿಗೆ ಕತ್ತು ನೇರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿದರಂತೆ. ಅದಕ್ಕಾಗಿ ವೈದ್ಯರನ್ನು ಸಂಪರ್ಕಿಸಿದಾಗ ಹಲವಾರು ಪರೀಕ್ಷೆಗಳ ನಂತರ ಮಗುವಿಗೆ ಇರುವ ಕಾಯಿಲೆ ಗುಣಪಡಿಸಲಾಗದ್ದು ಎಂಬುದು ತಿಳಿಯಿತು. ಸುಮಾರು ೧೮ ತಿಂಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ದಂಪತಿಗಳಿಗೆ ಈ ಕಾಯಿಲೆ ಏನೆಂಬುದು ಗೊತ್ತಾದದ್ದು. ಕಾಯಿಲೆ ಏನೆಂದು ಗೊತ್ತಾದುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡದಂತೆ ದಂಪತಿಗಳನ್ನು ಅಧೀರರನ್ನಾಗಿಸಲು ಮತ್ತೊಂದು ಸುದ್ದಿಯೂ ಕಾದಿತ್ತು. ತಮ್ಮ ಮಗು, ಇನ್ನೆಂದಿಗೂ ತಲೆಯನ್ನು ಎತ್ತಿ ಎಲ್ಲರಂತೆ ಬದುಕುವ ಸಾಮರ್ಥ್ಯ ಪಡೆಯಲಾರದು ಎಂದು ತಿಳಿದರೆ ಯಾವ ಹೆತ್ತವರ ಎದೆ ಒಡೆಯಲಿಕ್ಕಿಲ್ಲ ಹೇಳಿ! ಅಷ್ಟೇ ಅಲ್ಲ, ಇದರ ಬೆನ್ನಿಗೇ ಮಗುವಿಗೆ ನ್ಯುಮೋನಿಯಾ. ೨೦ ವರ್ಷಗಳ ಹಿಂದೆ ದುಬೈನಲ್ಲಿ ಇದಕ್ಕೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ, ಮಗುವನ್ನು ಕರೆದುಕೊಂಡು ಭಾರತಕ್ಕೆ ಬರಬೇಕಾಯ್ತು. ಮಗು ಇಲ್ಲಿ ಗುಣಮುಖವಾಯ್ತು. ಆದರೆ, ಪದೇ ಪದೇ ನ್ಯುಮೋನಿಯಾ ಬರುವುದು ತಪ್ಪಲಿಲ್ಲ. ಹೀಗಾಗಿ, ಮೌಶ್ಮಿ ಕಪಾಡಿಯಾ ಮಗುವಿನ ಜೊತೆಗೆ ಇಲ್ಲಿ, ಪತಿ ಕೆಲಸಕ್ಕಾಗಿ ದುಬೈಯಲ್ಲಿರುವುದು ಅನಿವಾರ್ಯವಾಯಿತು.

ಹತಾಶೆಯ ಬದುಕು

ಈ ನಡುವೆ ಕೆಲವೇ ವರ್ಷಗಳಲ್ಲಿ ಅವರಿಗೆ ಇನ್ನೊಂದು ಮಗುವೂ ಆಯಿತು. ಎರಡು ಮಕ್ಕಳಾದ ಮೇಲೆ ಕಪಾಡಿಯ ಜೀವನ ಇನ್ನಷ್ಟು ದುಸ್ತರವಾಯಿತು. ಇದರ ಪರಿಣಾಮ ನಿತ್ಯವೂ ಕೋಪ, ಹತಾಶೆಯ ಬದುಕು ಹೆಚ್ಚಾಯಿತು. ಖಿನ್ನತೆಗಾಗಿ ಮನೋವೈದ್ಯರ ಸಲಹೆ, ಮಾತ್ರೆ ಇತ್ಯಾದಿಗಳು ಸಾಮಾನ್ಯವಾಯಿತು. ಮೂರು ವರ್ಷಗಳ ಖಿನ್ನತೆಯ ಸಮಸ್ಯೆಯಿಂದ ಕೊನೆಗೂ ಚೇತರಿಸಿಕೊಂಡಾಗ, ಮಾತ್ರೆಗಳ ಅಡ್ಡ ಪರಿಣಾಮದಿಂದಾಗಿ ಫಿಟ್‌ನೆಸ್‌ ಇರಲಿಲ್ಲ. ಕೂಡಲೇ ತಾನಿನ್ನು ಇದರಿಂದ ಹೊರಬರಬೇಕು, ಇರುವ ಪರಿಸ್ಥಿತಿಯಲ್ಲೇ ನಮ್ಮ ಖುಷಿಯನ್ನು ಹುಡುಕಿಕೊಳ್ಳಬೇಕು ಎಂದು ನಿರ್ಧರಿಸಿದ ಆಕೆ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಆಕೆಯ ಕನಸಿಗೆ ಒತ್ತಾಸೆಯಾಗಿ ಅತ್ತೆ ಮಾವನವರೂ ನಿಂತರು.

ಫಿಟ್ ನೆಸ್ ಕಡೆಗೆ ಗಮನ

ಟಿನಿಸ್‌, ಝುಂಬಾ, ಜಿಮ್‌ ಎಂದು ಫಿಟ್‌ನೆಸ್‌ ಕಡೆಗೆ ಗಮನ ಹರಿಸಲು ಆರಂಭಿಸಿದ ಆಕೆ, ಬೈಕಿಂಗ್‌, ಟ್ರೆಕ್ಕಿಂಗ್‌ ಆರಂಭಿಸಿದರು. ಒಂದು ದಿನದ ಬೈಕಿಂಗ್‌ ಇತ್ಯಾದಿಗಳನ್ನು ಮಾಡುತ್ತಿದ್ದ ಆಕೆ ಮೊದಲ ಬಾರಿಗೆ ಲೇಹ್‌ಗೆ ೧೦ ದಿನಗಳ ಬೈಕಿಂಗ್‌ ಯಾತ್ರೆಗೆ ಹೊರಟಾಗ ಎದೆ ಹೊಡೆದುಕೊಳ್ಳುತ್ತಿತ್ತಂತೆ. ಮನೆಯಿಂದ ಒಂದು ಕರೆ ಬಂದರೂ ಮಗನಿಗೇನಾಗಿದೆಯೋ ಎಂಬ ಆತಂಕ, ನಿನಗೇನಾದರೂ ಆದರೆ ನಿನ್ನ ಮಗನ ಗತಿಯೇನು ಎಂದು ಪ್ರಶ್ನೆ ಮಾಡಿದ್ದ ಗೆಳೆಯ ಗೆಳತಿಯ ನುಡಿಗಳು ಆಗಾಗ ಆಕೆಯನ್ನು ಧೃತಿಗೆಡಿಸುತ್ತಿದ್ದರೂ, ತನ್ನ ಅಚಲ ಆತ್ಮವಿಶ್ವಾಸದಿಂದ ಆಕೆ ಲೇಹ್‌ ಯಾತ್ರೆ ಮುಗಿಸಿ ಬಂದರು. ಆಗ ಅಮ್ಮನ ಖುಷಿಯನ್ನು ಹೆಚ್ಚಿಸಿದ್ದು ಅದೇ ವೇದಾಂಶ್‌. ಈ ಎಲ್ಲವುಗಳ ನಡುವೆ, ತನ್ನದೇ ಆದ ಹೋಂ ಡೆಕೋರ್‌ ಸಂಸ್ಥೆಯನ್ನೂ ಹುಟ್ಟು ಹಾಕಿ ನಡೆಸುತ್ತಿದ್ದಾರೆ.
ಮೌಶ್ಮಿ ಕಪಾಡಿಯಾ ಹೇಳುವಂತೆ, ಮಹಿಳೆಯರು ತ್ಯಾಗ ಮಾಡಬೇಕು. ಬದುಕಿನೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ನಮಗೆ ಹಿರಿಯರು ಹೇಳುವ ಬುದ್ಧಿಮಾತು. ಆದರೆ, ನಾವು ಸಂತೋಷವಾಗಿದ್ದರೆ, ನಮ್ಮನ್ನು ಪ್ರೀತಿಸುತ್ತಿದ್ದರೆ, ನಮ್ಮ ಮಕ್ಕಳನ್ನೂ ಹಾಗೆಯೇ ಪ್ರೀತಿಸಬಹುದು ಎನ್ನುತ್ತಾರೆ. ಅಂದುಕೊಂಡದ್ದನ್ನು, ಬಯಸಿದ್ದನ್ನು ಮಾಡಲಾಗುವುದಿಲ್ಲ ಎಂದು ಅನೇಕ ಮಹಿಳೆಯರು ನನಗೆ ಹೇಳುತ್ತಾರೆ. ಅನಾರೋಗ್ಯವಿರುವ ಮಗು ಹಾಗೂ ವಿದೇಶದಲ್ಲಿರುವ ಗಂಡನನ್ನು ಹೊಂದಿರುವ ನಾನೇ ಇವೆಲ್ಲವನ್ನು ಮಾಡಲು ಸಾಧ್ಯವಿದೆ ಎಂದರೆ, ಯಾರಿಗೂ ಸಾಧ್ಯವಾಗದೆ ಇರದು. ನಿಮಗೆ ಕೇವಲ ಸ್ಪೂರ್ತಿಯ ಕೊರತೆಯಿದೆ ಅಷ್ಟೇ. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸು ಹಾಗೂ ದೇಹದ ಆರೋಗ್ಯಕ ಕಾಳಜಿ ವಹಿಸಿಕೊಳ್ಳಿ. ಮಹಿಳೆಯರಿಗೆ ಅದು ಬಹಳ ಮುಖ್ಯ ಎಂದೂ ಸಲಹೆ ಮಾಡುತ್ತಾರೆ.
ಅಮ್ಮಂದಿರು ನಾವು ಯಾವಾಗಲೂ ಪಾಪಪ್ರಜ್ಞೆಗಳನ್ನು ಬೆಳೆಸಿಕೊಂಡುಬಿಡುತ್ತೇವೆ. ಮಕ್ಕಳನ್ನು ನಾವು ಬಿಟ್ಟು ಹೋದರೆ ಯಾರು ಅವರನ್ನು ನೋಡಿಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೇವೆ. ಮೊದಲು ನಾವು ಈ ಪಾಪಪ್ರಜ್ಞೆಗಳಿಂದ ಹೊರಬರಬೇಕು ಎನ್ನುತ್ತಾರೆ.

ಇದನ್ನೂ ಓದಿ: Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಶಿಕ್ಷಣಕ್ಕೆ ಕೊರತೆ ಇಲ್ಲ

ಈ ಎಲ್ಲ ನ್ಯೂನತೆ ಸಮಸ್ಯೆಗಳ ಹೊರತಾಗಿಯೂ ವೇದಾಂಶ್‌ಗೆ ಶಿಕ್ಷಣ ಸಿಕ್ಕಿದೆ. ಸದ್ಯ ಅಮ್ಮನ ಜೊತೆಗೆ ಹಲವು ದೇಶಗಳನ್ನೂ ಸುತ್ತಿ ಬಂದಿರುವ ವೇದಾಂಶ್‌ಗೆ ಪ್ರವಾಸವೆಂದರೆ ಅಚ್ಚುಮೆಚ್ಚು. 20 ವರ್ಷ ವಯಸ್ಸಿನ ಈ ವೇದಾಂಶ್‌ ಈಗ ತಮ್ಮ ಕುಟುಂಬದ ಐಸ್‌ಕ್ರೀಂ ಪಾರ್ಲರ್‌ ಒಂದನ್ನೂ ನಡೆಸುತ್ತಾ ತನ್ನ ಕಾಲ ಮೇಲೆ ನಿಂತಿರುವ ಆತ್ಮವಿಶ್ವಾಸ ಹೊಂದಿದ್ದಾನೆ. ಅಮ್ಮನ ಖುಷಿಗೆ ಇನ್ನೇನು ಬೇಕು! ಜೊತೆಗೆ, ಜಗತ್ತಿನ ಅಮ್ಮಂದಿರೆಲ್ಲರಿಗೆ ಸ್ಫೂರ್ತಿಯಾಗುವ ಇದಕ್ಕಿಂತ ಚಂದದ ಸ್ಫೂರ್ತಿ ಕತೆ ಬೇಕೇ?

Continue Reading
Advertisement
Rishabh Pant -IPL 2024
ಕ್ರೀಡೆ8 mins ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Parliament Flashback
ಕರ್ನಾಟಕ38 mins ago

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Lok Sabha Election 2024 HD Kumaraswamy to file nomination for Mandya Lok Sabha seat on April 4
ಕರ್ನಾಟಕ44 mins ago

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

IPL 2024- Jayadev Unadkat
ಕ್ರೀಡೆ59 mins ago

IPL 2024 : ಐಪಿಎಲ್ ಇತಿಹಾಸದಲ್ಲಿ ವಿಭಿನ್ನ ಸಾಧನೆ ಮಾಡಿದ ಎಸ್​ಆರ್​​ಎಚ್​​ ಬೌಲರ್​ ಉನಾದ್ಕಟ್​

bengaluru dc
ಬೆಂಗಳೂರು1 hour ago

Hindu Temple: ಜಾತ್ರೆ, ಉತ್ಸವಗಳಲ್ಲಿ ಹಿಂದುಯೇತರರ ಅಂಗಡಿಗೆ ಅನುಮತಿ ನೀಡಬೇಡಿ; ಜಿಲ್ಲಾಧಿಕಾರಿಗೆ ಮನವಿ

minister Lakshmi hebbalkar latest statement
ಬೆಳಗಾವಿ1 hour ago

Belagavi News: ಕರ್ಮಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಶೆಟ್ಟರ್‌ಗೆ ಹೆಬ್ಬಾಳ್ಕರ್ ಪ್ರಶ್ನೆ

Chikkaballapura lok sabha constituency congress ticket aspirants Sivasankar Reddy Veerappa Moily and Raksha Ramayya
Lok Sabha Election 20241 hour ago

Lok Sabha Election 2024: ಕಾಂಗ್ರೆಸ್‌ಗೆ ಚಿಕ್ಕಬಳ್ಳಾಪುರ ಟೆನ್ಶನ್‌; ಟಿಕೆಟ್‌ ಸಿಗದಿದ್ದರೆ ಪಕ್ಷ ತೊರೆಯುವ ಎಚ್ಚರಿಕೆ ಕೊಟ್ಟ ಶಿವಶಂಕರ ರೆಡ್ಡಿ!

Karnataka Weather
ಮಳೆ1 hour ago

Karnataka Weather : ಕಲಬುರಗಿಯಲ್ಲಿ 40ರ ಗಡಿದಾಟಿದ ತಾಪಮಾನ; 4 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಲರ್ಟ್‌

Suryakumar Yadav
ಕ್ರೀಡೆ1 hour ago

SuryaKumar Yadav : ಮುಂಬೈ ತಂಡಕ್ಕೆ ಮತ್ತಷ್ಟು ಸಂಕಷ್ಟ; ಸೂರ್ಯಕುಮಾರ್​ ಸೇರ್ಪಡೆ ಅನುಮಾನ

modi
ದೇಶ2 hours ago

ಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ; ಮುಖ್ಯ ನ್ಯಾಯಮೂರ್ತಿಗೆ ಬರೆದ ವಕೀಲರ ಪತ್ರಕ್ಕೆ ಮೋದಿ ಪ್ರತಿಕ್ರಿಯೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20246 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20248 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ15 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌