Motivational Tips: ನಿಮ್ಮದೇ ಈ 10 ಅಭ್ಯಾಸಗಳು ಜೀವನದ ಯಶಸ್ಸಿಗೆ ಅಡ್ಡಗೋಡೆಯಾಗಬಹುದು! - Vistara News

ಲೈಫ್‌ಸ್ಟೈಲ್

Motivational Tips: ನಿಮ್ಮದೇ ಈ 10 ಅಭ್ಯಾಸಗಳು ಜೀವನದ ಯಶಸ್ಸಿಗೆ ಅಡ್ಡಗೋಡೆಯಾಗಬಹುದು!

Motivational Tips: ಬದುಕಿನಲ್ಲಿ ಕನಸು ಕಂಡು ಆ ನಿಟ್ಟಿನಲ್ಲಿ ಪಟ್ಟು ಹಿಡಿದು ಮಾಡುವ ತಾಳ್ಮೆಯೂ ಬೇಕು. ಅಷ್ಟರವರೆಗೆ ಲೋಕದ ಕಣ್ಣಿಗೆ ಏನೂ ಅಲ್ಲದೆ ಇದ್ದ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ ಆಗಿ ಬದಲಾಗಬಹುದು. ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಚಿಲುಮೆಯಾಗಬಹುದು. ಇವೆಲ್ಲ ಒಂದೇ ದಿನದಲ್ಲಿ ನಿಜವಾಗಿಯೂ ಆಗುವುದಿಲ್ಲ. ಯಶಸ್ಸು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ. ಅದರ ಹಿಂದೆ ಹಲವು ವಿಚಾರಗಳು ಕೆಲಸ ಮಾಡುತ್ತವೆ. ನೀವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕೆ? ಈ ಲೇಖನ ಓದಿ.

VISTARANEWS.COM


on

Motivational Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಧನೆ ಮಾಡಬೇಕಾದರೆ ಪರಿಶ್ರಮ (Motivational Tips) ಬೇಕು. ಬದುಕಿನಲ್ಲಿ ಕನಸು ಕಂಡು ಆ ನಿಟ್ಟಿನಲ್ಲಿ ಪಟ್ಟು ಹಿಡಿದು ಮಾಡುವ ತಾಳ್ಮೆಯೂ ಬೇಕು. ಅಷ್ಟರವರೆಗೆ ಲೋಕದ ಕಣ್ಣಿಗೆ ಏನೂ ಅಲ್ಲದೆ ಇದ್ದ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ ಆಗಿ ಬದಲಾಗಬಹುದು. ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಚಿಲುಮೆಯಾಗಬಹುದು. ಇವೆಲ್ಲ ಒಂದೇ ದಿನದಲ್ಲಿ ನಿಜವಾಗಿಯೂ ಆಗುವುದಿಲ್ಲ. ಈ ಒಂದು ದಿನದಲ್ಲಿ ಆತ ಜಗತ್ತಿಗೆ ಹಾಗೆ ಕಾಣಬೇಕಾದರೆ, ಅದರ ಹಿಂದೆ ಕನಿಷ್ಟ ಆತ/ಆಕೆ ಹತ್ತು ವರ್ಷಗಳಷ್ಟು ಪರಿಶ್ರಮ ಪಟ್ಟಿರುತ್ತಾನೆ/ಳೆ. ಯಶಸ್ಸು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ. ಅದರ ಹಿಂದೆ ಹಲವು ವಿಚಾರಗಳು ಕೆಲಸ ಮಾಡುತ್ತವೆ. ಬನ್ನಿ, ನೀವು ಜೀವನದಲ್ಲಿ ಯಶಸ್ಸು ಕಾಣಲು ನಿಮ್ಮ ಯಾವ ಹತ್ತು ಕೆಟ್ಟ ಅಭ್ಯಾಸಗಳು ಅಡ್ಡಗೋಡೆಯಾಗಬಹುದು ಎಂಬುದನ್ನು ನೋಡೋಣ.

Coach motivate to personal development
defeat

ಸರಿಯಾದ ಹೆಜ್ಜೆ ಮುಖ್ಯ

ಗುರಿಯನ್ನು ಸಾಧಿಸುವ ಯೋಜನಗೆಳು ಒಳ್ಳೆಯದೇ. ಆದರೆ, ಆ ಕಡೆಗೆ ಸರಿಯಾದ ಹೆಜ್ಜೆಯೂ ಅಷ್ಟೇ ಮುಖ್ಯ. ಇಲ್ಲವಾದರೆ, ಯಶಸ್ಸು ಕೇವಲ ಹಗಲು ಕನಸಾಗಬಹುದು. ಗುರಿಯೆಡೆಗಿನ ಹೆಜ್ಜೆಗಳನ್ನು ಮುಂದೂಡುತ್ತಲೇ ಇರುವುದು, ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು, ಅವಕಾಶಗಳನ್ನು ಕೈಬಿಡುವುದು ಇತ್ಯಾದಿ ಮಾಡುವುದರಿಂದ ಗುರಿ ಸಾಧಿಸುವುದು ಕಷ್ಟವಾಗಬಹುದು.

Discipline
defeat

ಶಿಸ್ತಿನ ಕೊರತೆ

ಶಿಸ್ತಿನ ಕೊರತೆ ನಿಮ್ಮ ಯಶಸ್ಸಿಗೆ ತಡೆಗೋಡೆಯಾಗಬಹುದು. ಹೌದು. ಯಾವುದೇ ಕೆಲಸವನ್ನು ಸಾಧಿಸುವವರೆಗೆ ಶಿಸ್ತಿನ ಹಾದಿಯೂ ಅಷ್ಟೇ ಮುಖ್ಯ. ಒಂದು ನಿರ್ಧಿಷ್ಟ ಬಗೆಯಲ್ಲಿ ನಿತ್ಯವೂ ಶಿಸ್ತಿನಿಂದ ಕೆಲಸ ಮಾಡುತ್ತಿದ್ದರೆ ಮಾತ್ರ ಅಂದುಕೊಂಡ ಕೆಲಸ, ಗುರಿ ಸಾಧಿಸಲು ಸಾಧ್ಯವಾದೀತು.

Negative thinking
defeat

ಋಣಾತ್ಮಕ ಯೋಚನೆ

ಋಣಾತ್ಮಕ ಯೋಚನೆಯೂ ನಿಮ್ಮ ಗುರಿಯೆಡೆಗಿನ ಪಯಣವನ್ನು ನಿಧಾನವಾಗಿಸಬಹುದು. ತನ್ನ ಬಗ್ಗೆಯೇ ಋಣಾತ್ಮಕವಾಗಿ ಮಾತನಾಡಿಕೊಳ್ಳುವುದು, ತನ್ನ ಬಗ್ಗೆಯೇ ನಂಬಿಕೆ ಇಲ್ಲದಿರುವುದು, ಆತ್ಮವಿಶ್ವಾಸವೇ ನಡುನಡುವೆ ಕಾಣೆಯಾಗುವುದು ಎಲ್ಲವೂ ಸಾಧನೆಯ ಹಾದಿಯ ತೊಡಕುಗಳೇ ಆಗಿವೆ.

ಜವಾಬ್ದಾರಿ ತೆಗೆದುಕೊಳ್ಳಬೇಕು

ಜವಾಬ್ದಾರಿಗಳನ್ನು ತೆಗೆದುಕೊಳ್ಳದಿರುವುದೂ ಕೂಡಾ ಬಾಧಕವೇ. ಜವಾಬ್ದಾರಿಗಳನ್ನೇ ತೆಗೆದುಕೊಳ್ಳಲು ಸಿದ್ಧವಿಲ್ಲದಿದ್ದರೆ, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಇದರಿಂದ ಸಾಧ್ಯವಾಗುವುದಿಲ್ಲ.

responsibility
defeat

ಸಮಯ ಪಾಲನೆ ಮುಖ್ಯ

ಸಮಯ ಪಾಲನೆ ಬಹಳ ಮುಖ್ಯ. ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಲು ಸಾಧ್ಯವಾಗದಿರುವುದು ಯಶಸ್ಸಿನ ಹಾದಿಯ ಮುಳ್ಳುಗಳು.

ಸೋಲುವ ಭಯ

ಸೋಲುವ ಭಯ ಕೂಡಾ ಯಶಸ್ಸಿನ ಹಾದಿಯ ದೊಡ್ಡ ತೊಡಕು. ತಾನು ಮಾಡಬೇಕಾದ ಕೆಲಸಗಳ ಬಗ್ಗೆ, ತನ್ನ ಬಗ್ಗೆಯೇ ಆತ್ಮವಿಶ್ವಾಸವಿಲ್ಲದೆ, ಸೋಲುವ ಭಯ ಇದ್ದರೆ ಖಂಡಿತ ಸಾಗುವ ಹಾದಿ ಸುಗಮವಾಗಿ ಕಾಣದು.

defeat
defeat

ಸರಿಯಾದ ಗುರಿ

ಸರಿಯಾದ ಗುರಿಯನ್ನೇ ಸೆಟ್‌ ಮಾಡದಿರುವುದೂ ಕೂಡಾ ಅತಂತ್ರರನ್ನಾಗಿಸುತ್ತದೆ. ಯಶಸ್ಸು ಬೇಕೆಂದರೆ ನಿರ್ಧಿಷ್ಠ ಗುರಿಯೂ ಬೇಕು. ಗುರಿಯೇ ಸರಿಯಾಗಿಲ್ಲದಿದ್ದರೆ ಸಾಗುವ ಹಾದಿಯ ಬಗ್ಗೆ ನಿಶ್ಚಿತತೆ ಸಾಧ್ಯವಾಗದು.

ಹೊಸ ಬದಲಾವಣೆ

ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದೆ ಇರುವುದೂ ಕೂಡಾ ಬೆಳವಣಿಗೆಯ ಹಾದಿಯಲ್ಲಿ ಬರುವ ಕಲ್ಲುಮುಳ್ಳುಗಳು. ಹೊಸದಕ್ಕೆ ಹೊಂದಿಕೊಳ್ಳುವುದೂ ಕೂಡಾ ಮುಖ್ಯವಾಗುತ್ತದೆ.

ಪಟ್ಟು ಬಿಡದೆ ಪ್ರಯತ್ನಿಸಿ

ಸೋತರೂ, ಮುಗ್ಗರಿಸಿದರೂ ಪಟ್ಟು ಬಿಡದೆ ಪ್ರಯತ್ನಿಸುವುದು ಅತ್ಯಂತ ಮುಖ್ಯವಾಗುತ್ತದೆ. ಸವಾಲುಗಳು ಬಂದಾಗ ಹೆದರಿ ಹಿಂತೆಗೆಯುವ ಪ್ರಯತ್ನವೂ ಕೂಡಾ ಸಾಧನೆಯ ಹಾದಿಗೆ ಮುಳ್ಳೇ.

ಇದನ್ನೂ ಓದಿ: Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

ಆರೋಗ್ಯ ಮುಖ್ಯ

ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದು ಕೂಡಾ ಸಾಧನೆಗೆ ಪ್ರೇರಣೆಯಾಗದು. ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಆರೋಗ್ಯ ಸರಿಯಾಗಿದ್ದರಷ್ಟೇ ಸಾಧನೆಯ ಹಾದಿ ಅನಾಯಾಸವಾಗಿರಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

High Calcium Foods: ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

High Calcium Foods
Koo

ಕ್ಯಾಲ್ಶಿಯಂ ಖನಿಜ (High Calcium Foods) ನಮ್ಮ ಆರೋಗ್ಯಕ್ಕೆ ಅಗತ್ಯ ಎಂಬುದು ನಮಗೆಲ್ಲ ಗೊತ್ತು. ಹಲ್ಲು, ಮೂಳೆಗಳಿಂದ ಹಿಡಿದು ನಮ್ಮಿಡೀ ದೇಹದ ಸ್ವಾಸ್ಥ್ಯ ರಕ್ಷಣೆಗೆ ಇದು ಅಗತ್ಯ. ನರಗಳ ಆರೋಗ್ಯ ಚೆನ್ನಾಗಿರಿಸಲು, ಸ್ನಾಯುಗಳ ವಿಕಸನಕ್ಕೆ, ರಕ್ತ ಹೆಪ್ಪುಗಟ್ಟಲು… ಹೀಗೆ ಬಹಳಷ್ಟು ಕೆಲಸಗಳಿಗೆ ಕ್ಯಾಲ್ಶಿಯಂ ಅಗತ್ಯವಿದೆ. ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಸಸ್ಯಾಹಾರಿಗಳಂತೂ ಹಾಲು, ಚೀಸ್‌, ಪನೀರ್‌ ಮುಂತಾದವುಗಳನ್ನೇ ಕ್ಯಾಲ್ಶಿಯಂ ಪೂರೈಕೆಗೆ ನೆಚ್ಚಿಕೊಂಡಿರುತ್ತಾರೆ. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು?

Greens vegetables

ಹಸಿರು ಸೊಪ್ಪುಗಳು

ಪಾಲಕ್‌ ಸೊಪ್ಪು, ಲೆಟೂಸ್‌, ಸ್ವಿಸ್‌ ಚಾರ್ಡ್‌, ಸಾಸಿವೆ ಸೊಪ್ಪುಗಳು, ಟರ್ನಿಪ್‌ ಸೊಪ್ಪು, ಕೆಲವು ಬಗೆಯ ಎಲೆಕೋಸು ಮುಂತಾದ ಹಲವು ಬಗೆಯ ಸೊಪ್ಪುಗಳಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದೆ. ಒಂದು ಕಪ್‌ ಬೇಯಿಸಿದ ಸೊಪ್ಪಿನಲ್ಲಿ 265 ಮಿ.ಗ್ರಾಂನಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದೇ ಒಂದು ಕಪ್‌ (160 ಎಂ.ಎಲ್‌) ಹಾಲಿನಲ್ಲಿ 250 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇಂಥ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾಲ್ಶಿಯಂ ಮಾತ್ರವಲ್ಲ, ಅವುಗಳಿಂದ ದೊರೆಯುವ ಸೂಕ್ಷ್ಮ ಪೋಷಕಾಂಶಗಳು ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Mackerel fish on ice
Broccoli

ಮೀನು

ಮೀನುಗಳಲ್ಲಿರುವ ಲೀನ್‌ ಮೀಟ್‌ ಆರೋಗ್ಯಕ್ಕೆ ಸೂಕ್ತವಾದದ್ದು. ಅದರಲ್ಲೂ ಭೂತಾಯಿಯಂಥ ಮೀನಿನಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕ 3.75 ಔನ್ಸ್‌ ಮೀನಿನಿಂದ 325 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮಾತ್ರವಲ್ಲ, ಹಲವು ಬಗೆಯ ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲವೂ ಇದರಿಂದ ವಿಫುಲವಾಗಿ ಸಿಗುತ್ತದೆ.

Health Benefits Of Tofu

ತೋಫು

ಸೋಯಾ ಉತ್ಪನ್ನವಾದ ತೋಫುವಿನಲ್ಲೂ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಇದರ ಸಂಸ್ಕರಣೆಯಲ್ಲಿ ಕ್ಯಾಲ್ಶಿಯಂ ಸಲ್ಫೇಟ್‌ ಬಳಸಲಾಗಿದ್ದರೆ, ಅರ್ಧ ಕಪ್‌ ತೋಫುವಿನಿಂದ 250ರಿಂದ 850 ಎಂ.ಜಿ.ವರೆಗೂ ಕ್ಯಾಲ್ಶಿಯಂ ದೊರೆಯುತ್ತದೆ. ನೋಡುವುದಕ್ಕೆ ಪನೀರ್‌ನಂತೆಯೇ ಇರುವ ಇದನ್ನು ಹಲವು ರೀತಿಯ ಅಡುಗೆಗಳಲ್ಲಿ ಬಳಸಿ, ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು.

Black Chia Seed

ಚಿಯಾ ಬೀಜಗಳು

ನೋಡುವುದಕ್ಕೆ ತೀರಾ ಸಣ್ಣದಾಗಿರು ಈ ಬೀಜಗಳು ಸತ್ವದಲ್ಲಿ ತ್ರಿವಿಕ್ರಮನಂತೆ. ಕೇವಲ ಎರಡು ಟೇಬಲ್‌ ಚಮಚ ಚಿಯಾ ಬೀಜಗಳಿಂದ 180 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇವುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಮೂದಿ, ಸಲಾಡ್‌ ಮುಂತಾದ ಯಾವುದಕ್ಕೇ ಆದರೂ ಸೇರಿಸಿಕೊಳ್ಳಬಹುದು. ಇವುಗಳಲ್ಲಿ ನಾರು ಮತ್ತು ಒಳ್ಳೆಯ ಕೊಬ್ಬು ವಿಫುಲವಾಗಿವೆ.

sesame-seeds

ಎಳ್ಳು

ಇದನ್ನು ಅಂತೆಯೇ ತಿನ್ನುವುದಕ್ಕಿಂತ ಚಟ್ನಿಯಂತೆ ರುಬ್ಬಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಯಾವುದೇ ರೀತಿಯಲ್ಲಿ ಎಳ್ಳನ್ನು ರುಬ್ಬಿ ಅಡುಗೆಗೆ ಸೇರಿಸಿಕೊಳ್ಳಬಹುದು. ಎರಡು ಟೇಬಲ್‌ ಚಮಚ ಎಳ್ಳಿನಿಂದ 130 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ.

Broccoli

ಬ್ರೊಕೊಲಿ

ವಿಟಮಿನ್‌ ಸಿ ಮತ್ತು ಕೆ ಹೆಚ್ಚಾಗಿರುವ ಈ ತರಕಾರಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಿಂದ 62 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಉಳಿದೆಲ್ಲ ಹಸಿರು ಸೊಪ್ಪುಗಳ ಜೊತೆಗೆ ಇದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ಬಾದಾಮಿ, ಅಂಜೂರ

ಒಂದು ಔನ್ಸ್‌ ಬಾದಾಮಿಯಲ್ಲಿ (ಅಂದಾಜು 23 ಬಾದಾಮಿ) 76 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದಲ್ಲದೆ, ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಇತರ ಖನಿಜಗಳು ಧಾರಾಳವಾಗಿವೆ. ಅಂಜೂರವೂ ಇದಕ್ಕಿಂತ ಕಡಿಮೆಯೇನಿಲ್ಲ. ಕಾಲು ಕಪ್‌ನಷ್ಟು ಅಂಜೂರದಲ್ಲಿ ಸುಮಾರು 90 ಎಂ.ಜಿಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ನಾರಿನಂಶವೂ ಸಾಕಷ್ಟಿದ್ದು, ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

Continue Reading

ಧಾರ್ಮಿಕ

Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

Varamahalaxmi Decoration: ಹಬ್ಬದಂದು ಮನೆಯಲ್ಲಿ ಕೂರಿಸುವ ವರಮಹಾಲಕ್ಷ್ಮಿಯನ್ನು ಆಕರ್ಷಕವಾಗಿ ಸಿಂಗರಿಸಲು ಮಾರುಕಟ್ಟೆಗೆ ನಾನಾ ಬಗೆಯ ಪುಟ್ಟ ಪುಟ್ಟ ವಸ್ತ್ರಾಭರಣಗಳು ಲಗ್ಗೆ ಇಟ್ಟಿವೆ. ಏನೆಲ್ಲಾ ಬಂದಿವೆ? ಈ ಬಾರಿ ಯಾವ್ಯಾವ ಡಿಸೈನ್‌ನವು ಲಭ್ಯ ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Varamahalaxmi Decoration
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಹಬ್ಬಕ್ಕೆ ವರಮಹಾಲಕ್ಷ್ಮಿ (Varamahalaxmi Decoration) ದೇವಿಯನ್ನು ಆಕರ್ಷಕವಾಗಿ ಅಲಂಕರಿಸುವ ಪುಟ್ಟ ಪುಟ್ಟ ವಸ್ತ್ರಾಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Varamahalaxmi Decoration

ವರಮಹಾಲಕ್ಷ್ಮಿಯ ಸಿಂಗಾರಕ್ಕೆ ವಸ್ತ್ರಾಭರಣ

ವರಮಹಾಲಕ್ಷ್ಮಿ ದೇವಿಯನ್ನು ಸಿಂಗಾರಗೊಳಿಸುವಂತಹ ಬಣ್ಣ ಬಣ್ಣದ ರೇ‍ಷ್ಟೇ ಹಾಗೂ ಬ್ರೋಕೆಡ್‌ನ ಪುಟ್ಟ ಸೀರೆ, ಮಿನಿ ದಾವಣಿ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವರವರ ಮನೆಯ ಡೆಕೋರೇಷನ್‌ ಥೀಮ್‌ಗೆ ತಕ್ಕಂತೆ ದೇವಿ ಲಕ್ಷ್ಮಿಯನ್ನು ಸುಂದರವಾಗಿ ಬಿಂಬಿಸಬಲ್ಲ, ಈ ದೇವಿ ವಸ್ತ್ರಗಳು, ಸಾಕಷ್ಟು ಶೇಡ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ಸಿಗುತ್ತಿವೆ.

Varamahalaxmi Decoration

ವರಮಹಾಲಕ್ಷ್ಮಿಗೆ ಮಿನಿ ಆಭರಣಗಳು

ಇವುಗಳೊಂದಿಗೆ ಟ್ರೆಡಿಷನಲ್‌ ಲುಕ್‌ ನೀಡುವ ಕೇಶಾಲಂಕಾರದ ಪುಟ್ಟ ಜಡೆ, ಕುಚ್ಚು, ಜಡೆ ನಾಗರ, ಕತ್ತಿಗೆ ಪುಟ್ಟ ತಾಳಿ, ಕಾಸಿನ ಸರ, ಹರಳಿನ ಲೇಯರ್‌ ಹಾರ, ನೆಕ್ಲೇಸ್‌, ಮೂಗುತಿ, ಕಿವಿಯೊಲೆ, ಕಿವಿ ಸರಪಳಿ, ಡಾಬು, ಕಿರೀಟ ಸೇರಿದಂತೆ ಎಲ್ಲವೂ ಮಿನಿ ಸೈಝಿನಲ್ಲಿ, ಡಿಸೈನ್‌ಗಳಲ್ಲಿ ಬಂದಿವೆ.

Varamahalaxmi Decoration

ಹೆಚ್ಚಿದ ಮಾರಾಟ

ಪೂಜಿಸುವ ಬಿಂದಿಗೆಗೆ ಉಡಿಸುವ ಸೀರೆಗಳು, ದೇವಿಯ ಬೊಂಬೆಗೆ ಉಡಿಸುವ ಸೀರೆಗಳು ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಇನ್ನು, ದೇವಿಯ ತೋಳಿಗೆ ಸಿಕ್ಕಿಸುವ ಹರಳಿನ ಅಸ್ತ್ರಗಳು, ಮಾತಾಪಟ್ಟಿ, ಕಿರೀಟದ ಹಿಂದಿನ ಚಕ್ರ, ಮೊಗ್ಗಿನ ಜಡೆ, ರೆಡಿಮೇಡ್‌ ಹರಳಿನ ತುರುಬು, ಸೊಂಟದ ಪಟ್ಟಿ, ಕಾಲ್ಗೆಜ್ಜೆ ಎಲ್ಲವೂ ನಾನಾ ಕಲರ್‌ಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಬಂದಿದ್ದು, ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಗಾಂಧಿ ಬಜಾರ್‌ ಶಾಪ್‌ವೊಂದರ ಮಾರಾಟಗಾರರು.

Varamahalaxmi Decoration

ವೆರೈಟಿ ಅಲಂಕಾರಿಕ ವಸ್ತ್ರಾಭರಣಗಳು

ಆಯಾ ಮನೆಯಲ್ಲಿ ಕೂರಿಸುವ ಅಥವಾ ಪ್ರತಿಷ್ಠಾಪಿಸುವ ವರಮಹಾಲಕ್ಷ್ಮಿಯ ಆಕಾರಕ್ಕೆ ತಕ್ಕಂತೆಯೂ ಈ ವಸ್ತ್ರಾಭರಣಗಳು ದೊರಕುತ್ತಿವೆ. ಉದಾಹರಣೆಗೆ., ಪುಟ್ಟ ಚೊಂಬನ್ನು ದೇವಿಯಂತೆ ಕೂರಿಸಿ, ಆರಾಧಿಸುವವರಿಗೆಂದೇ ಚಿಕ್ಕ ಸೈಜಿನ ವಸ್ತ್ರಗಳು ದೊರೆಯುತ್ತಿವೆ. ಅವುಗಳಲ್ಲಿ ರೇಷ್ಮೆ, ಕಾಟನ್‌, ಬಾರ್ಡರ್‌ನವು, ಬ್ರೋಕೆಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. 100 ರೂ.ಗಳಿಂದಿಡಿದು 1000 ಸಾವಿರ ರೂ. ಗಳವರೆಗೂ ಅವುಗಳಿಗೆ ಬೆಲೆ ನಿಗಧಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.

  • ಪೂಜಿಸುವ ದೇವಿಯ ಸೈಝಿಗೆ ತಕ್ಕಂತಹ ಮಿನಿ ಡಿಸೈನರ್‌ವೇರ್‌ ಕೊಳ್ಳಿ.
  • ವಸ್ತ್ರಾಭರಣಗಳನ್ನು ಬಳಸುವಾಗ ತೆಗೆದು ನಂತರ ಹಾಗೆಯೇ ಇಟ್ಟು ಪ್ಯಾಕಿಂಗ್‌ ಮಾಡಿ. ವರ್ಷಗಟ್ಟಲೇ ಬಣ್ಣ ಮಾಸುವುದಿಲ್ಲ.
  • ಹೆಚ್ಚಿನ ಬಿಲ್‌ಗೆ ಉಚಿತ ಹೋಮ್‌ ಡಿಲಿವೆರಿ ಸೌಲಭ್ಯ ನೀಡುವುದನ್ನು, ಬಳಸಿಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

Continue Reading

ಕರ್ನಾಟಕ

Davanagere Benne Dose: ದಾವಣಗೆರೆ ಬೆಣ್ಣೆ ದೋಸೆಗೆ ಜಿಐ ಟ್ಯಾಗ್‌ ಕೊಡಲ್ಲ ಎಂದ ಕೇಂದ್ರ; ಯಾಕೆಂದರೆ…

Davanagere Benne Dose: “ದಾವಣಗೆರೆ ಹೊರತುಪಡಿಸಿಯೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದನ್ನು ತಯಾರಿಸಿ ಮಾರಾಟ ಮಾಡುವುದರಿಂದ ಇದನ್ನು ಸಾಮಾನ್ಯ ವಸ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಜಿಐ ಟ್ಯಾಗ್‌ ನೀಡಲಾಗುವುದಿಲ್ಲ”ಎಂದು ಕೇಂದ್ರ ಸರಕಾರ ಹೇಳಿದೆ.

VISTARANEWS.COM


on

davanagere benne dose
Koo

ಬೆಂಗಳೂರು: ಬಿಸಿಯಾದ, ಗರಿಗರಿಯಾದ, ಪಕ್ಕದಲ್ಲಿ ಆಲೂ ಪಲ್ಯವನ್ನಿಟ್ಟುಕೊಂಡ, ಮೇಲೊಂದು ಕರಗುತ್ತಿರುವ ಬೆಣ್ಣೆಯ ಮುದ್ದೆ ಇಟ್ಟು ನೀಡುವ ದಾವಣಗೆರೆ ಬೆಣ್ಣೆ ದೋಸೆ (Davanagere Benne Dose) ಅದೆಷ್ಟೋ ವರ್ಷಗಳಿಂದ ಕರ್ನಾಟಕದಾದ್ಯಂತ (Karnataka) ಆಹಾರಪ್ರೇಮಿಗಳನ್ನು ತೃಪ್ತಿಪಡಿಸುತ್ತಿದೆ. ಆದರೆ ಈ ʼದಾವಣಗೆರೆ ಬೆಣ್ಣೆ ದೋಸೆʼ ಎಂಬ ಖಾದ್ಯಕ್ಕೆ ಜಿಐ ಟ್ಯಾಗ್‌ (GI tag) ಅರ್ಥಾತ್‌ ʼಭೌಗೋಳಿಕ ಗುರುತಿನʼ (Geographical Indication) ಟ್ಯಾಗ್‌ ನೀಡಲು ಸಾಧ್ಯವಿಲ್ಲವಂತೆ.

ಹೌದು, ಇದು ಕರ್ನಾಟಕದಾದ್ಯಂತ ಲಭ್ಯವಿದೆ ಎಂಬ ಅಂಶವೇ ಈ ಜನಪ್ರಿಯ ದೋಸೆಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಪಡೆಯುವ ದಾರಿಯಲ್ಲಿ ಮುಳ್ಳಾಗಿದೆ. ʼದಾವಣಗೆರೆ ಬೆಣ್ಣೆ ದೋಸೆ ಯಾವುದೇ ಒಂದು ಸೀಮಿತ ಪ್ರದೇಶಕ್ಕೆ ನಿರ್ದಿಷ್ಟವಾಗಿಲ್ಲದ ಕಾರಣ GI ಟ್ಯಾಗ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ (davanagere MP Prabha Mallikarjun) ಅವರು ಸದನದಲ್ಲಿ ಕೋರಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಈ ವಿಷಯ ತಿಳಿಸಿದೆ. ತಮ್ಮ ಜಿಲ್ಲೆಯ ಸುಪ್ರಸಿದ್ಧವಾದ ದೋಸೆಗೆ GI ಟ್ಯಾಗ್ ಒದಗಿಸಿಕೊಡುವ ಕುರಿತು ಪ್ರಭಾ ಪ್ರಶ್ನಿಸಿದ್ದರು.

“ದಾವಣಗೆರೆ ಹೊರತುಪಡಿಸಿಯೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದನ್ನು ತಯಾರಿಸಿ ಮಾರಾಟ ಮಾಡುವುದರಿಂದ ಇದನ್ನು ಸಾಮಾನ್ಯ ವಸ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಜಿಐ ಟ್ಯಾಗ್‌ ನೀಡಲಾಗುವುದಿಲ್ಲ. ಜಿಐ ಟ್ಯಾಗ್‌ ಪಡೆಯಲು ನಿರ್ದಿಷ್ಟ ಪ್ರದೇಶವು ವಿಶಿಷ್ಟತೆಯ ಅಂಶವಾಗಿ ಅಪೇಕ್ಷಿತವಾಗಿದೆ. ಇದು ಹಲವಾರು ಸ್ಥಳಗಳಲ್ಲಿ ಉತ್ಪಾದನೆಯಾಗುತ್ತಿರುವ ಕಾರಣ ನಿರ್ದಿಷ್ಟ ಪ್ರದೇಶಕ್ಕೆ ಹೆಚ್ಚು ವಿಶಿಷ್ಟವಾಗಿಲ್ಲ” ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಹಕಾರ ಸಚಿವ ಜಿತಿನ್ ಪ್ರಸಾದ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಉತ್ತರದ ನಂತರ, ಜಿಐ ಟ್ಯಾಗ್‌ಗೆ ನೋಂದಣಿಗೆ ಕನಿಷ್ಠ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಪ್ರಭಾ ಅವರು ತಿಳಿಸಿದ್ದಾರೆ.

“ರಸಗುಲ್ಲಾ, ಲೋನಾವಳ ಚಿಕ್ಕಿ ಮತ್ತು ಇತರ ಉತ್ಪನ್ನಗಳಿಗೆ ಈಗಾಗಲೇ ಜಿಐ ಟ್ಯಾಗ್ ಇದೆ. ಇದನ್ನು ಭಾರತದಾದ್ಯಂತ ವ್ಯಾಪಕವಾಗಿ ಉತ್ಪಾದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ದಾವಣಗೆರೆ ಬೆಣ್ಣೆ ದೋಸೆ ಕೂಡ ರಾಜ್ಯಾದ್ಯಂತ ಮಾರಾಟವಾಗುತ್ತಿದೆ. ಈ ಕಾರಣಕ್ಕಾಗಿ ಈ ವಿಶಿಷ್ಟ ಉತ್ಪನ್ನಕ್ಕಾಗಿ ಜಿಐ ಟ್ಯಾಗ್ ಅನ್ನು ಪಡೆದುಕೊಳ್ಳುವುದು ತಪ್ಪಬಾರದು” ಎಂದು ಪ್ರಭಾ ಹೇಳಿದ್ದಾರೆ.

“ದಾವಣಗೆರೆಯ ಯಾವುದೇ ವ್ಯಕ್ತಿ ದೇಶದ ಯಾವುದೇ ಸ್ಥಳಕ್ಕೆ ಹೋದರೆ ಅಲ್ಲಿ ಆತನನ್ನು ಮೊದಲು ಬೆಣ್ಣೆ ದೋಸೆಯ ಬಗ್ಗೆ ಕೇಳಲಾಗುತ್ತದೆ. ಈ ಉತ್ಪನ್ನಕ್ಕೆ ಅಂತಹ ಕ್ರೇಜ್ ಇದೆ. ನಾನು ಸಂಸತ್ತಿಗೆ ಹೋದ ಮೊದಲ ದಿನ, ದೇಶದ ವಿವಿಧ ಭಾಗಗಳಿಂದ ಬಂದ ನನ್ನ ಎಲ್ಲಾ ಸಹೋದ್ಯೋಗಿಗಳು ದಾವಣಗೆರೆ ಬೆಣ್ಣೆ ದೋಸೆಯ ಬಗ್ಗೆ ನನ್ನನ್ನು ಕೇಳಿದರು. ಆಗ, ಜಿಐ ಟ್ಯಾಗ್ ಪಡೆಯುವುದು ಎಷ್ಟು ಮುಖ್ಯ ಎಂದು ನಾನು ಅರಿತುಕೊಂಡೆ” ಎಂದು ಅವರು ಹೇಳಿದರು.

ಬೆಣ್ಣೆ ದೋಸೆಯ ಮೂಲವನ್ನು ನಾಲ್ಕು ಸಹೋದರರಲ್ಲಿ ಕಾಣಲಾಗುತ್ತದೆ. ಕೋಠಿನ್ ಶಾಂತಪ್ಪ, ಮಹದೇವಪ್ಪ, ಶಂಕರಪ್ಪ ಮತ್ತು ಬಸವಂತಪ್ಪ. ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗದ ಬೀಡ್ಕಿ ಗ್ರಾಮದಿಂದ 1928ರಲ್ಲಿ ದಾವಣಗೆರೆಗೆ ಉದ್ಯೋಗದ ಹುಡುಕಾಟದಲ್ಲಿ ವಲಸೆ ಬಂದವರು. ತಮ್ಮ ತಾಯಿ ಚೆನ್ನಮ್ಮ ಅವರಿಂದ ದೋಸೆ ತಯಾರಿಕೆಯ ಕಲೆಯನ್ನು ಕಲಿತರು. ಇವರ ಅಮ್ಮ ತಮ್ಮ ಮಕ್ಕಳಿಗೆ ರುಚಿಕರವಾದ ರಾಗಿ ದೋಸೆಯನ್ನು ತಯಾರಿಸುತ್ತಿದ್ದರಂತೆ. ಈ ಸೋದರರಿಂದ ಮಸಾಲೆ ಸಹಿತದ ಬೆಣ್ಣೆ ದೋಸೆ ಜನಪ್ರಿಯವಾಯಿತು. ಇವರ ಮೊದಲ ದೋಸೆ ಆರು ಪೈಸೆಗೆ ಮಾರಾಟವಾಯಿತು. ಈಗ ಈ ಅಂಗಡಿಗಳನ್ನು ನಡೆಸುತ್ತಿರುವ ಅವರ ಮಕ್ಕಳು, ಮೊಮ್ಮಕ್ಕಳು ತಯಾರಿಸುತ್ತಿರುವ ದೋಸೆಗೆ 55ರಿಂದ 65 ರೂ. ಬೆಲೆಯಿದೆ.

ಕರ್ನಾಟಕದಲ್ಲಿ ನಂಜನಗೂಡು ರಸಬಾಳೆ, ಚನ್ನಪಟ್ಟಣದ ಮರದ ಗೊಂಬೆಗಳು, ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ಬೀದರ್‌ನ ಬಿದರಿ ಕಲೆ, ಇಳಕಲ್‌ ಹಾಗೂ ಮೊಳಕಾಲ್ಮುರು ಸೀರೆಗಳು, ಕೊಡಗಿನ ಕಿತ್ತಳೆ, ಅಪ್ಪೆಮಿಡಿ ಮಾವು, ಧಾರವಾಡ ಪೇಡಾ, ಬಾಬಾಬುಡನ್‌ಗಿರಿಯ ಅರೇಬಿಕಾ ಕಾಫಿ ಮುಂತಾದವು ಜಿಐ ಟ್ಯಾಗ್‌ ಪಡೆದಿವೆ.

ಇದನ್ನೂ ಓದಿ: PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

Continue Reading

ಫ್ಯಾಷನ್

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

Sharara Fashion: ಇದೀಗ ಸೆಲೆಬ್ರೆಟಿಗಳ ಎಥ್ನಿಕ್‌ ಡಿಸೈನರ್‌ವೇರ್‌ಗಳಲ್ಲಿ ಸೇರಿರುವ ಶರಾರ ನಾನಾ ರೂಪ ಪಡೆದಿದೆ. ಕೆಲವು ಲಾಂಗ್‌ ಸ್ಕರ್ಟ್‌ನಂತೆ ಕಂಡರೇ, ಇನ್ನು, ಕೆಲವು ಇಂಡೋ-ವೆಸ್ಟರ್ನ್‌ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಏನಿದು ಶರಾರ ? ಆಯ್ಕೆ ಹೇಗೆ? ಈ ಕುರಿತಂತೆ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Sharara Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಟ್ರೆಂಡಿಯಾಗಿರುವ (Sharara Fashion) ಶರಾರ ಲಾಂಗ್‌ ಸ್ಕರ್ಟ್‌ನಂತೆ ಬದಲಾಗಿದೆ. ಧರಿಸಿದಾಗ ತಕ್ಷಣಕ್ಕೆ ನೋಡಲು ಶರಾರ ಎಂದೆನಿಸಿದರೂ, ನಿಂತಾಗ ಥೇಟ್‌ ಲಾಂಗ್‌ ಸ್ಕರ್ಟ್ ಅಥವಾ ಡಿವೈಡೆಡ್‌ ಸ್ಕರ್ಟ್‌ನಂತೆ ಕಾಣಿಸುತ್ತವೆ. ಇತ್ತೀಚೆಗೆ ಸೆಲೆಬ್ರೆಟಿಗಳು ಧರಿಸುವುದು ಹೆಚ್ಚಾಗುತ್ತಿದ್ದಂತೆ, ಈ ಎಥ್ನಿಕ್‌ ಔಟ್‌ಫಿಟ್‌ ಯುವತಿಯರನ್ನು ಹೆಚ್ಚು ಸೆಳೆಯುತ್ತಿದೆ.

ಸೆಲೆಬ್ರೆಟಿಗಳ ಚಾಯ್ಸ್‌‌ನಲ್ಲಿ ಶರಾರ

ಹೌದು. ಇದಕ್ಕೆ ಪೂರಕ ಎಂಬಂತೆ, ನಟಿ ದಿವ್ಯಾ ಕೋಸ್ಲಾ ಕುಮಾರ್‌ ಇವೆಂಟ್‌ವೊಂದರಲ್ಲಿ ಧರಿಸಿದ್ದ ಶರಾರ, ಲಾಂಗ್‌ ಸ್ಕರ್ಟ್‌ನಂತೆ ಕಾಣಿಸಿತ್ತು. ಅಲ್ಲದೇ, ಅವರಿಗೆ ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿತ್ತು. ಡಿಸೈನರ್‌ಗಳು ಹೇಳುವಂತೆ, ಶರಾರಗಳು, ಬಾಲಿವುಡ್‌ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿ ಸೇರಿದ ನಂತರ, ಲೆಕ್ಕವಿಲ್ಲದಷ್ಟು ಪ್ರಯೋಗಾತ್ಮಕ ಡಿಸೈನ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿವೆಯಂತೆ.

ಏನಿದು ಶರಾರ?

ಮೊಗಲರ ಕಾಲದ ಎಥ್ನಿಕ್‌ ಡಿಸೈನರ್‌ವೇರ್‌ ಇದಾಗಿದೆ. ಉತ್ತರ ಭಾರತದಲ್ಲಿ ಈ ಶರಾರ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಪ್ಯಾಂಟ್‌ ಶೈಲಿಯ ಡಿಸೈನರ್‌ವೇರ್‌ ಎನ್ನಬಹುದು. ನೋಡಲು ಪಲ್ಹಾಜೊನಂತೆ ಕಂಡರೂ ಅದಲ್ಲ! ಪ್ಯಾರಲೆಲ್‌ ಪ್ಯಾಂಟೂ ಕೂಡ ಅಲ್ಲ. ಶರಾರ ವಿಶೇಷತೆ ಎಂದರೇ, ಪ್ಯಾಂಟ್‌ ಕೆಳಗೆ ಅಗಲವಾದ ಫ್ಲೇರ್‌ ಇರುತ್ತದೆ. ಮೇಲಿನಿಂದ ಒಂದೇ ಹೊಲಿಗೆಯಲ್ಲಿ ವಿನ್ಯಾಸಗೊಂಡಿದ್ದರೂ, ಕೆಳಗೆ ಅಂಬ್ರೆಲ್ಲಾದಂತೆ ಹರಡಿಕೊಂಡಿರುತ್ತವೆ. ಶರಾರ ಮೂಲ ಲೆಬನಾನ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ರೀಟಾ.

ಟ್ರೆಂಡ್‌ನಲ್ಲಿರುವ ಶರಾರ ಎಥ್ನಿಕ್‌ವೇರ್ಸ್

ಸದ್ಯ ಸ್ಕರ್ಟ್‌ನಂತೆ ಕಾಣುವ ಡಿಸೈನ್‌ ಶರಾರಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿವೆ. ಲಾಂಗ್‌ ಸ್ಕರ್ಟ್‌ನಂತೆ ಬಿಂಬಿಸುವ ಜಾರ್ಜೆಟ್ ಫ್ಯಾಬ್ರಿಕ್‌ನ ಶರಾರಗಳು ಸಾಲಿಡ್‌ ಹಾಗೂ ಬ್ರೈಟ್‌ ಶೇಡ್‌ನವಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು, ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಶರಾರದ ಟಾಪ್‌ಗಳು ಹಾಗೂ ಸೆಟ್‌ಗಳು ಕೂಡ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗಿವೆ.

ಇದನ್ನೂ ಓದಿ: Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

ಶರಾರ ಪ್ರಿಯರಿಗೆ ತಿಳಿದಿರಬೇಕಾದ ಸಂಗತಿಗಳು

  • ಉದ್ದನಾಗಿರುವವರಿಗೆ ಮಾತ್ರ ಶರಾರ ಚೆನ್ನಾಗಿ ಕಾಣಿಸುತ್ತದೆ.
  • ರೆಡಿಮೇಡ್‌ ಶರಾರಗಳನ್ನು ಟ್ರಯಲ್‌ ನೋಡಿಯೇ ಕೊಳ್ಳಿ. ಇಲ್ಲವಾದಲ್ಲಿ ಪಾದದಿಂದ ಕೆಳಗೆ ಇಳಿದು ನಡೆಯಲು ಆಗದಿರಬಹುದು.
  • ಕಾಲಿಗೆ ಸಿಲುಕಿ ಹಾಕಿಕೊಳ್ಳುವಂತಹ ಶರಾರ ಪ್ಯಾಂಟ್‌ ಆಯ್ಕೆ ಬೇಡ, ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು.
  • ಇಂಡೋ-ವೆಸ್ಟರ್ನ್‌ ಶೈಲಿಯ ಎಥ್ನಿಕ್‌ ಡಿಸೈನ್‌ನವು ಚಾಲ್ತಿಯಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Actor Chetan Ahimsa
ಕರ್ನಾಟಕ5 mins ago

Actor Chetan Ahimsa: ಸ್ವಂತ ಮನೆಯಿಲ್ಲ ಎಂದ ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಅಹಿಂಸಾ ಕಿಡಿ

Hindu Population
ದೇಶ25 mins ago

Hindu Population: ಅಸ್ಸಾಂನಲ್ಲಿ ಹಿಂದುಗಳ ಸಂಖ್ಯೆ ಶೇ.10ರಷ್ಟು ಕುಸಿತ; ಲೆಕ್ಕ ಕೊಟ್ಟ ಹಿಮಂತ ಬಿಸ್ವಾ ಶರ್ಮಾ!

Kashmir Encounter
ದೇಶ46 mins ago

Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Parsis Olympics 2024
ಕ್ರೀಡೆ56 mins ago

Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

BJP-JDS Padayatra
ಕರ್ನಾಟಕ1 hour ago

BJP-JDS Padayatra: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ನಮ್ಮ ಹೋರಾಟ ಎಂದ ವಿಜಯೇಂದ್ರ

ಮಳೆ1 hour ago

Karnataka Weather : ವೀಕೆಂಡ್‌ ಮೋಜಿಗೆ ಮಳೆ ಅಡ್ಡಿ; ಬೆಂಗಳೂರು ಸೇರಿ ಇಲ್ಲೆಲ್ಲ ನಾಳೆ ವರ್ಷಧಾರೆ

ಪ್ರಮುಖ ಸುದ್ದಿ2 hours ago

Vinesh Phogat : ವಿನೇಶ್​ ಫೋಗಟ್​ಗೆ ಅನ್ಯಾಯವಾಗಿದೆ ಎಂದ ಆರ್​. ಅಶ್ವಿನ್​; ಅಥ್ಲೀಟ್​ಗಳ ಸಮಸ್ಯೆ ವಿವರಿಸಿದ ಸ್ಪಿನ್ನರ್​

TV Somanathan
ದೇಶ2 hours ago

TV Somanathan: ಸಂಪುಟ ಕಾರ್ಯದರ್ಶಿಯಾಗಿ ಸೋಮನಾಥನ್‌ ನೇಮಕ; ಯಾರಿವರು?

ಮೈಸೂರು2 hours ago

BJP-JDS Padayatra: ಬಂಡೆ ರೀತಿ ನಿಲ್ತೀನಿ ಎಂದು ನನ್ನ ಮೇಲೂ ಬಂಡೆ ಹಾಕಿದ್ರು: ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

Hindus in Bangla
ವಿದೇಶ2 hours ago

Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌