TOP NEWS: ಈ ದಿನದ ಪ್ರಮುಖ 7 ಸುದ್ದಿಗಳು Vistara News
Connect with us

ಹೊಸ ಸುದ್ದಿ

TOP NEWS: ಈ ದಿನದ ಪ್ರಮುಖ 7 ಸುದ್ದಿಗಳು

ಶನಿವಾರ ನಡೆದ ಹಾಗೂ ನೀವು ಓದಲೇಬೇಕಾದ ಪ್ರಮುಖ ಏಳು ಸುದ್ದಿಗಳು ಇಲ್ಲಿವೆ.

VISTARANEWS.COM


on

Koo

1. ವರವರ ರಾವ್‌ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್‌

“ಜೈಲಿನಲ್ಲಿ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಎಲ್ಲ ಆರೋಪಿಗಳೂ ಇದೇ ವೈದ್ಯಕೀಯ ಆಧಾರದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2. ನಿಮ್ಮ ಜಮೀನು ಸ್ಕೆಚ್‌ ನೀವೇ ಮಾಡಿಕೊಳ್ಳಿ: ಕಂದಾಯ ಇಲಾಖೆಯಿಂದ ಸ್ವಾವಲಂಬಿ ಆ್ಯಪ್

ರೈತರು ತಮ್ಮ ಜಮೀನಿನ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾದ ʼಸ್ವಾವಲಂಬಿ ಆ್ಯಪ್ʼ ಅನ್ನು ಕಂದಾಯ ಇಲಾಖೆ ಪರಿಚಯಿಸಿದೆ. ಏನಿದು ಸ್ವಾವಲಂಬಿ ಆ್ಯಪ್?

3. IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್

ʼನೋಬಾಲ್‌ʼ ಅಲ್ಲ ಎಂದು ಅಂಪೈರ್‌ ನಿರ್ಧಾರ ನೀಡಿದ್ದರು. ದಿಲ್ಲಿ ತಂಡದ ಕ್ಯಾಪ್ಟನ್‌ ರಿಷಭ್‌ ಪಂತ್‌ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.

4. Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ʼಸಹಾಯಕ ನಗರ ಯೋಜಕರʼ ಹುದ್ದೆಗೆ ಒಟ್ಟು 60 ಸ್ಥಾನಗಳಿವೆ. ಉಳಿಕೆ ಮೂಲ ವೃಂದದಲ್ಲಿ 50 ಹಾಗೂ ಹೈದ್ರಬಾದ್‌ ಕರ್ನಾಟಕ ವೃಂದಕ್ಕೆ 10 ಸ್ಥಾನಗಳನ್ನು ಮೀಸಲಿಡಲಾಗಿದೆ.

5. Niti Aayog: ರಾಜೀವ್‌ ಕುಮಾರ್‌ ರಾಜೀನಾಮೆ, ಸುಮನ್‌ ಬೆರಿ ನೂತನ ಉಪಾಧ್ಯಕ್ಷ

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್‌ ಕುಮಾರ್‌ ರಾಜೀನಾಮೆ ನೀಡಿದ್ದಾರೆ. ಸುಮನ್‌ ಕೆ. ಬೆರಿ ನೂತನ ಅಧ್ಯಕ್ಷರಾಗಿ ನಿಯುಕ್ತರಾಗಿದ್ದಾರೆ.

6. World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

ಏಪ್ರಿಲ್‌ 23 ವಿಶ್ವ ಪುಸ್ತಕ ದಿನ. ಇದರ ನಿಮಿತ್ತ ಕೇರಳದ ಮೊದಲ ಪುಸ್ತಕ ಗ್ರಾಮವನ್ನು ಪರಿಚಯ ಮಾಡಿಕೊಳ್ಳೋಣ. ನಾವು ಈ ಊರಿನ ಯಶಸ್ಸಿನಿಂದ ಏನು ಕಲಿಯಬಹುದು?

7. ಪಾಟಿದಾರ್‌ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ

ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್‌ ಷಾ ವಿರುದ್ಧ ಹರಿಹಾಯುತ್ತಿದ್ದ ಗುರಜಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಈಗ ಬದಲಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

Meter Taxi: ರೋಡಿಗಿಳಿದ ಕ್ಯೂಟ್‌ ಮೀಟರ್‌ ಟ್ಯಾಕ್ಸಿ; ಮಿನಿಮಮ್‌ ಚಾರ್ಜ್‌ ಎಷ್ಟು?

ಓಲಾ, ಉಬರ್ ಬಳಿಕ ಇದೀಗ ಕ್ಯೂಟ್ ಟ್ಯಾಕ್ಸಿ ಸೇವೆ (Meter Taxi) ಆರಂಭವಾಗುತ್ತಿದೆ. ಆಟೋ ರಿಕ್ಷಾ ಮಾದರಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಈಗಾಗಲೇ ಚಾಲ್ತಿಯಲ್ಲಿರುವ ಬಜಾಜ್‌ ಕ್ಯೂಟ್‌ಗೆ (ಕ್ವಾಡ್ರಿ ಸೈಕಲ್‌) ಮೀಟರ್‌ ದರವನ್ನು ನಿಗದಿಪಡಿಸಲಾಗಿದೆ.

VISTARANEWS.COM


on

Edited by

Qute meter taxi on the Bangalore road, What is the minimum charge
Koo

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಹೊಸ ಮೀಟರ್‌ ಟ್ಯಾಕ್ಸಿ ಸೇವೆ (Meter Taxi) ಆರಂಭವಾಗಿದೆ. ಬಜಾಜ್ ಕ್ಯೂಟ್ (ಕ್ವಾಡ್ರಿಸೈಕಲ್) ವಾಹನಕ್ಕೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದ್ದು, ಮೌಲ್ಯಮಾಪನ‌ ಇಲಾಖೆ ಸೂಚಿಸಿರುವ ಮೀಟರ್ ಅಳವಡಿಸಿ ವಾಹನಗಳಿಗೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.

ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಎಂಬ ಹೊಸ ಮಾದರಿಯ ವಾಹನವು 2019ರಲ್ಲಿ ಮಾರುಕಟ್ಟೆಗೆ ಬಂದಿತಾದರೂ, ಇದಕ್ಕೆ ಸಾರಿಗೆ ಇಲಾಖೆಯಿಂದ ದರ ನಿಗದಿಪಡಿಸಿರಲಿಲ್ಲ. ಕೇವಲ ಉಬರ್ ಸಂಸ್ಥೆಗೆ ಅವಲಂಬಿತರಾಗಿ ಚಾಲಕರು ಸೇವೆ ನೀಡುತ್ತಿದ್ದರು.

ಹಾಗಾಗಿ 2020ರ ಡಿಸೆಂಬರ್‌ನಲ್ಲಿ ಚಾಲಕರ ಸಂಘಟನೆಗಳು ಈ ವಾಹನಗಳಿಗೆ ಮೀಟರ್ ದರ ನಿಗದಿಪಡಿಸಿ ಕೊಡಲು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದವು. ಇದರಿಂದ ಈ ವಾಹನ ಚಾಲಕ ಮಾಲೀಕರು ಮೀಟರ್ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಲು ದಾರಿ ಮಾಡಿಕೊಡುವಂತೆ ತಿಳಿಸಿದ್ದವು.

ಮೀಟರ್‌ ಟ್ಯಾಕ್ಸಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ಇದೀಗ ಹಲವು ಅಡೆತಡೆಗಳ ದಾಟಿ, ಸತತ ಎರಡು ವರ್ಷಗಳ ಬಳಿಕ 2023ರ ಮಾರ್ಚ್‌ 20ರಂದು ಸಾರಿಗೆ ಇಲಾಖೆ ದರ ನಿಗದಿ ಪಡಿಸಿಕೊಟ್ಟಿತ್ತು. ಈ ದರದ ಪ್ರತಿಯನ್ನು ಮೌಲ್ಯಮಾಪನ ಇಲಾಖೆಗೆ ಸಲ್ಲಿಸಿ ಅವರಿಂದಲೂ ಸಹ ಅನುಮತಿ ದೊರೆತಿದೆ. ಇನ್ನು ರಾಜ್ಯದಲ್ಲಿ ಓಡಾಡುವ ಬಜಾಜ್‌ ಸಂಸ್ಥೆಯ ಕ್ಯೂಟ್‌ ಮೀಟರ್‌ ಟ್ಯಾಕ್ಸಿಗೆ ಪ್ರತಿ ಕಿ.ಮೀ.ಗೆ 16 ರೂಪಾಯಿ ಹಾಗೂ 4 ಕಿ.ಮೀ.ವರೆಗೆ 60 ರೂಪಾಯಿ ಕನಿಷ್ಠ ದರವನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: SSLC Exam 2023: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ; ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟ

ಬಜಾಜ್ ಸಂಸ್ಥೆಯ ಅಧ್ಯಕ್ಷ ಮೀಟರ್ ಟ್ಯಾಕ್ಸಿಗೆ ಫ್ಲಾಗ್ ಆಫ್ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಚಾಲನೆ ನೀಡಲಿದ್ದಾರೆ. ಸ್ವಾವಲಂಬಿಗಳಾಗಿ ದುಡಿಯಲು ಹೊರಟಿರುವ ಚಾಲಕರಿಗೆ ಶುಭಕೋರಲಿದ್ದಾರೆ.

Continue Reading

ಉತ್ತರ ಕನ್ನಡ

Anand Mahindra: ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಪರಿಸರ ಪ್ರೇಮ; ಸ್ವಚ್ಛ ಭಾರತ್‌ನ ಹೀರೊಗಳು ಇವರೇ ಎಂದು ಕೊಂಡಾಡಿದ ಆನಂದ್‌ ಮಹೀಂದ್ರ

ಅಂಕೋಲಾ ಬಸ್‌ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರ ಸ್ವಚ್ಛತಾ ಕಾರ್ಯಕ್ಕೆ ಮಹೀಂದ್ರ ಸಂಸ್ಥೆಯ ಆನಂದ್‌ ಮಹೀಂದ್ರ (Anand Mahindra) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Edited by

ಅಂಕೋಲಾ ಬಸ್‌ ನಿಲ್ದಾಣ ಹಾಲಕ್ಕಿ ಮಹಿಳೆ
Koo

ಕಾರವಾರ: ಹಾಲಕ್ಕಿ ಮಹಿಳೆಯೊಬ್ಬರ ಕಾರ್ಯವೂ ಇದೀಗ ದೇಶದ ಗಮನ ಸೆಳೆಯುತ್ತಿದೆ. ಅಂಕೋಲಾ ಬಸ್‌ ನಿಲ್ದಾಣದಲ್ಲಿ (Ankola Bus stop) ಹಣ್ಣು ಮಾರುವ ಹಾಲಕ್ಕಿ ಮಹಿಳೆಯ‌ ಸ್ವಚ್ಛತಾ ಕಾರ್ಯವನ್ನು (Swachh Bharat) ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರಾ (Anand Mahindra) ಕೊಂಡಾಡಿದ್ದಾರೆ.

ಸದ್ದಿಲ್ಲದೆ ಸ್ವಚ್ಛ ಭಾರತದ ಪ್ರಯತ್ನವನ್ನು ಸಹಕಾರಗೊಳಿಸುವ ಇಂತಹವರೇ ಸ್ವಚ್ಛ ಭಾರತ್‌ನ ನಿಜವಾದ ಹೀರೋಗಳು ಎಂದಿದ್ದಾರೆ. ಇವರ ಕಾರ್ಯವನ್ನು ಗಮನಿಸದಿರುವುದು, ಶ್ಲಾಘಿಸದೆ ಇರುವುದು ದುರಂತ ಎಂದು ಟ್ವೀಟ್‌ ಮೂಲಕ ಹಾಲಕ್ಕಿ ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್‌ ಮಹೀಂದ್ರಾ

ಅಂದಹಾಗೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರು ಜೀವನೋಪಾಯಕ್ಕಾಗಿ ಪ್ರತಿನಿತ್ಯ ಎಲೆಯ ಕೊಟ್ಟೆಯಲ್ಲಿ ನೇರಳೆ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಮಹಿಳೆಯಿಂದ ನೇರಳೆ ಹಣ್ಣು ಖರೀದಿಸುವ ಪ್ರಯಾಣಿಕರು ಹಣ್ಣುಗಳನ್ನು ತಿಂದು, ಎಲೆಯನ್ನು ಬಸ್‌ನ ಕಿಟಕಿಯಿಂದ ಹೊರಗೆ ಬಿಸಾಡಿ ತೆರಳುತ್ತಾರೆ.

ಹೀಗೆ ಪ್ರಯಾಣಿಕರು ಎಸೆದ ಎಲೆಗಳನ್ನು ಹಾಲಕ್ಕಿ ಮಹಿಳೆ ಆರಿಸಿ ತಂದು ಕಸದ ಬುಟ್ಟಿಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಮಹಿಳೆ ಎಲೆ ಹೆಕ್ಕುತ್ತಿದ್ದ ವೇಳೆ ಆದರ್ಶ ಹೆಗಡೆ ಎಂಬುವವರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Elephant attack: ಯುವತಿಯನ್ನು ಕೊಂದ ಆನೆ ಹಿಡಿಯಲು ಶತಪ್ರಯತ್ನ; ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಡಾಕ್ಟರ್‌ ಮೇಲೇ ಅಟ್ಯಾಕ್‌

ಈ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಅಲ್ಲದೇ ಹಾಲಕ್ಕಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿ ಸ್ವಚ್ಛ ಭಾರತದ ನಿಜವಾದ ಹೀರೋ ಇವರೇ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಸಂಪರ್ಕಿಸಿ ಮಾತನಾಡಿಸಲು ಅವಕಾಶ ಮಾಡಿಕೊಡಿ ಎಂದು ಕೂಡ ಕೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಇನ್ನಷ್ಟು ವೈರಲ್ ಆಗಿದ್ದು 3.59 ಲಕ್ಷ ವೀಕ್ಷಣೆ ಕಂಡಿದೆ.

Continue Reading

ಕರ್ನಾಟಕ

Loco Pilot: ಇನ್ನೇನು ರೈಲು ಹೊರಡುವಾಗಲೇ ಹಳಿ ದಾಟುತ್ತಿದ್ದ ವೃದ್ಧ ಎಡವಿ ಬಿದ್ದ; ಮುಂದೇನಾಯಿತು?

ಹಳಿ ದಾಟಲು ಹೋದ ವೃದ್ಧನೊಬ್ಬ ಎಡವಿ ಬಿದ್ದಿದ್ದು, ಇದನ್ನು ಗಮನಿಸಿದ ಲೋಕೋ ಪೈಲೆಟ್‌ (Loco Pilot) ರೈಲು ನಿಲ್ಲಿಸಿ ಜೀವ ಉಳಿಸಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದಲ್ಲಿ ನಡೆದಿದೆ.

VISTARANEWS.COM


on

Edited by

Loco pilot stops train, becomes punctual
Koo

ಕೋಲಾರ: ಹಳಿ ದಾಟಲು ಹೋದ ವೃದ್ಧರೊಬ್ಬರು ಎಡವಿ ಬಿದ್ದಿದ್ದು, ಇದನ್ನು ಗಮನಿಸಿದ ಲೋಕೊ ಪೈಲೆಟ್‌ (Loco Pilot) ರೈಲು ನಿಲ್ಲಿಸಿ ಪ್ರಾಣ ಉಳಿಸಿದ್ದಾರೆ. ನೆತ್ತಿ ಮೇಲೆ ಉರಿ ಬಿಸಿಲು ಸುಡುತ್ತಿತ್ತು. ವೃದ್ಧರೊಬ್ಬರು ಬಹುಬೇಗ ಮನೆ ಸೇರುವ ದಾವಂತದಲ್ಲಿ ಇದ್ದರು. ವೃದ್ಧ ಮನೆ ಸೇರಬೇಕಾದರೆ ರೈಲು ಹಳಿ ದಾಟಿಯೇ ಹೋಗಬೇಕಿತ್ತು. ರೈಲು ಬರುವ ಹೊತ್ತಿಗೆ ಹಳಿ ದಾಟಿ ಮನೆ ಸೇರುವ ಆತುರದಲ್ಲಿದ್ದರು. ಇನ್ನೇನು ರೈಲು ಬಂತಲ್ಲ ಎಂದು ಗಾಬರಿಯಲ್ಲೇ ಹಳಿ ದಾಟಲು ಹೋಗಿ ಎಡವಿ ಬಿದ್ದಿದ್ದರು. ಆದರೆ, ಎದ್ದೇಳಲು ಆಗದೆ ಪರದಾಡುತ್ತಿದ್ದರು. ರೈಲು ಸಹ ಸಮೀಪ ಬಂದುಬಿಟ್ಟಿತ್ತು.

Loco pilot stops train, becomes punctual
ಕುಪ್ಪಂ ರೈಲು ನಿಲ್ದಾಣ

ಹಳಿ ಮೇಲೆ ವೃದ್ಧ ಬೀಳುವುದನ್ನು ಗಮನಿಸಿದ ಲೋಕೋ ಪೈಲೆಟ್‌ ಕೂಡಲೇ ರೈಲು ನಿಲ್ಲಿಸಿ ಸಮಯಪ್ರಜ್ಞೆ ಮೆರೆದ ಅಪರೂಪದ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದಲ್ಲಿ ನಡೆದಿದೆ. ಚೆನ್ನೈ-ಬೆಂಗಳೂರು ನಡುವಿನ ಲಾಲ್‌ಬಾಗ್‌ ಲೋಕೋ ಪೈಲೆಟ್‌ನ ಸಮಯ ಪ್ರಜ್ಞೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Loco pilot stops train, becomes punctual
ರೈಲು ಹಳಿ ಮೇಲೆ ಎಡವಿದ ವೃದ್ಧ

ಇದನ್ನೂ ಓದಿ: Fire Accident: ದೇವರಾಯನದುರ್ಗ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿಜ್ವಾಲೆಗೆ ಸಿಲುಕಿ ಬಾಲಕಿ ಸಾವು‌, ಮತ್ತಿಬ್ಬರಿಗೆ ಗಾಯ

Loco pilot stops train, becomes punctual
ವೃದ್ಧನ ಸಹಾಯಕ್ಕೆ ಧಾವಿಸಿದ ಲೋಕೋ ಪೈಲೆಟ್‌

ಲೋಕೋ ಪೈಲೆಟ್‌ ರೈಲು ನಿಲ್ಲಿಸಿದ್ದು ಮಾತ್ರವಲ್ಲದೆ, ಟ್ರ್ಯಾಕ್ ಮೇಲೆ ಬಿದ್ದು ಒದ್ದಾಡುತ್ತಿದ್ದ ವೃದ್ಧನ ಸಹಾಯಕ್ಕೆ ಧಾವಿಸಿದ್ದಾರೆ. ಕಾಲು ಎಡವಿ ಹಳಿ ಮೇಲೆ ಬಿದ್ದಿದ್ದ ವೃದ್ಧನನ್ನು ಮೇಲ್ಕಕೆ ಎತ್ತಿದ್ದಾರೆ. ಬಳಿಕ ಪಕ್ಕದಲ್ಲಿ ಸುಧಾರಿಸಿಕೊಳ್ಳುವಂತೆ ಕೂರಿಸಿ ಬಳಿಕ ರೈಲು ಚಾಲನೆಗೊಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Chikkamagaluru News: 30 ಅಡಿ ಆಳದ ತೆರೆದ ಬಾವಿಗೆ ಬಿದ್ದ ಬೆಕ್ಕಿನ ಮರಿ; ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ರಕ್ಷಣೆ

Chikkamagaluru News: ತೆರೆದ ಬಾವಿ ಇರುವುದನ್ನು ಕಾಣದೆ ಬೆಕ್ಕಿನ ಮರಿಯೊಂದು 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬಾವಿಯಿಂದ ಮೇಲೆ ಬರಲು ಆಗದೆ ನರಳಾಡುತ್ತಿದ್ದ ಈ ಬೆಕ್ಕನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

VISTARANEWS.COM


on

Edited by

Cat falls into 30-foot deep open well
Koo

ಚಿಕ್ಕಮಗಳೂರು: ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ‌ ಮರಿಯೊಂದನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆ ಸಮೀಪದಲ್ಲಿದ್ದ ತೆರೆದ ಬಾವಿ (Chikkamagaluru News) ಇರುವುದನ್ನು ಕಾಣದ ಬೆಕ್ಕಿನ ಮರಿಯೊಂದು ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಾವಿಯಲ್ಲಿ ನೀರು ಇದ್ದರಿಂದ ಮೇಲಿಂದ ಹೊರಗೆ ಬರಲು ಆಗದೆ ಬೆಕ್ಕಿನ ಮರಿಯು ಒಮ್ಮೆಲೆ ಚೀರಾಡುತ್ತಿತ್ತು.

Cat falls into 30-foot deep open well
ತೆರೆದ ಬಾವಿಗೆ ಇಳಿದ ಸಿಬ್ಬಂದಿ

ಬೆಕ್ಕಿನ ಮರಿಯ ಚೀರಾಟ ನರಳಾಟ ಗಮನಿಸಿದ ಸ್ಥಳೀಯರು ಬಂದು ನೋಡಿದಾಗ, ತೆರೆದ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ಕೂಡಲೆ ಅಗ್ನಿ ಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಾಕ್ಕಾಮಿಸಿದ ಅಗ್ನಿಶಾಮಕ ದಳವರು ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

Cat falls into 30-foot deep open well

ಇದನ್ನೂ ಓದಿ: Manoj Bajpayee : ʼಮುಂಬೈಗೆ ಬಂದಾಗ ಹಣವಿರಲಿಲ್ಲ, ಹೊತ್ತಿನ ಊಟಕ್ಕೂ ಗತಿಯಿರಲಿಲ್ಲʼ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಫ್ಯಾಮಿಲಿ ಮ್ಯಾನ್‌

Cat falls into 30-foot deep open well

ಮೊದಲಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದಿದ್ದಾರೆ. ಬಳಿಕ ಬುಟ್ಟಿಯನ್ನು ಬಾವಿಗೆ ಬಿಟ್ಟು ಅದರ ಸಹಾಯದಿಂದ ಬೆಕ್ಕಿನ ಮರಿಯನ್ನು ಅದರೊಳಗೆ ಇಟ್ಟು, ಮೇಲಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ನೀರಲ್ಲಿ ಒದ್ದಾಡಿ ಸುಸ್ತಾಗಿದ್ದ ಬೆಕ್ಕಿನ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಟವೆಲ್‌ನಿಂದ ಮೈ ಒರೆಸಲಾಗಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಕ್ಕಿನ ಮರಿಯನ್ನು ರಕ್ಷಿಸಿದ ಖುಷಿ ಸಿಬ್ಬಂದಿಯ ಮೊಗದಲ್ಲಿ ಕಾಣುತ್ತಿತ್ತು.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
salman
ಬಾಲಿವುಡ್16 mins ago

Salman Khan: ಬರ್ತ್‌ ಡೇ ಪಾರ್ಟಿಯಲ್ಲಿ ಸಲ್ಮಾನ್‌ ಸಖತ್ ಡ್ಯಾನ್ಸ್! ಅಭಿಮಾನಿಗಳಿಗೆ ನಟನ ಆರೋಗ್ಯದ್ದೇ ಚಿಂತೆ

caste census repot image
ಕರ್ನಾಟಕ30 mins ago

Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?

Sachin tendulkar
ಕ್ರಿಕೆಟ್32 mins ago

ICC World Cup 2023 : ಕ್ರಿಕೆಟ್​ ದೇವರು ಸಚಿನ್​ಗೆ ಕ್ರಿಕೆಟ್​​ ವಿಶ್ವಕಪ್​ನ ವಿಶೇಷ ಗೌರವ

Eid Milad procession
ಕರ್ನಾಟಕ55 mins ago

Sagara News: ಸಾಗರದಲ್ಲಿ ತಲ್ವಾರ್‌ ಝಳಪಿಸಿ, ಹಿಂದು ವಿರೋಧಿ ಘೋಷಣೆ; ಮೂವರ ಬಂಧನ

gandhi
ಬಾಲಿವುಡ್1 hour ago

Gandhi Jayanti: ಗಾಂಧಿ ಪಾತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದೆ; ಬೊಮನ್‌ ಇರಾನಿ

Maharashtra News, another hospital witnessed for 10 patients death
ದೇಶ1 hour ago

Maharashtra News: ಮಹಾರಾಷ್ಟ್ರದ ಮತ್ತೊಂದು ಆಸ್ಪತ್ರೆಯಲ್ಲಿ 10 ರೋಗಿಗಳು ಮೃತ! ತನಿಖೆಗೆ ಮುಂದಾದ ಸರ್ಕಾರ

Arshad Nadeem
ಕ್ರೀಡೆ1 hour ago

Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್​; ನೀರಜ್​ಗೆ ಪದಕ ಬಹುತೇಕ ಖಾತರಿ

rashmika
South Cinema1 hour ago

Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!

Annu Rani
ಕ್ರೀಡೆ2 hours ago

Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ

Old Pension Scheme Madhu Bangarappa
ಕರ್ನಾಟಕ2 hours ago

Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ5 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ6 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ16 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌