ಕರೊನಾದಿಂದ ಆರ್ಥಿಕತೆಗೆ ಪಾಸಿಟಿವ್‌: 1 ಲಕ್ಷ ಕೋಟಿ ಡಾಲರ್‌ ದಾಟಿದ ಯುಪಿಐ ವಹಿವಾಟು - Vistara News

ವಾಣಿಜ್ಯ

ಕರೊನಾದಿಂದ ಆರ್ಥಿಕತೆಗೆ ಪಾಸಿಟಿವ್‌: 1 ಲಕ್ಷ ಕೋಟಿ ಡಾಲರ್‌ ದಾಟಿದ ಯುಪಿಐ ವಹಿವಾಟು

2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.09 ಲಕ್ಷ ಕೋಟಿ ಡಾಲರ್‌ ಮೊತ್ತದ ಯುಪಿಐ ವಹಿವಾಟು ದಾಖಲಾಗಿದೆ. ಅಂದರೆ 83.45 ಲಕ್ಷ ಕೋಟಿ ರೂ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಶ್ವದ ಎಲ್ಲ ರಾಷ್ಟ್ರಗಳ ಮೇಲೆ ಕರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಆಗರ್ಭ ಶ್ರೀಮಂತನಿಂದ ಕಡುಬಡವನವರೆಗೆ ಎಲ್ಲರನ್ನೂ ಕಾಡಿದ ಕರೊನಾ ಸಮಯದಲ್ಲೆ ಭಾರತದ ಆರ್ಥಿಕತೆ ಹೊಸ ದಾಖಲೆಯನ್ನು ಬರೆದಿದೆ. ಅತ್ಯಂತ ಸುಲಭವಾಗಿ ಹಣಕಾಸು ವಹಿವಾಟು ನಡೆಸಬಹುದಾದ ಯುಪಿಐ (ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ವೇದಿಕೆಯಲ್ಲಿ 2022ರ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ಡಾಲರ್‌ಗೂ ಹೆಚ್ಚು ಮೊತ್ತದ ವಹಿವಾಟು ನಡೆದಿದೆ.

ಇಂಟರ್ನೆಟ್‌ ಬ್ಯಾಂಕಿಂಗ್‌ನಲ್ಲಿನ ಸಂಕಷ್ಟ

ಅತ್ಯಂತ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಫೋನ್‌ಪೆ, ಜಿ ಪೇ ಮೂಲಕ ಇಂದು ಎಳನೀರು ಖರೀದಿಯಿಂದ ಹೋಟೆಲ್‌ ಬಿಲ್‌ ಪಾವತಿವರೆಗೆ ಬಳಸುತ್ತಿರುವ ವಿಧಾನವೇ ಯುಪಿಐ. ಈ ಹಿಂದೆ ಒಂದು ಬ್ಯಾಂಕ್‌ ಖಾತೆಯಿಂದ ಮತ್ತೊಂದು ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಮಾಡಬೇಕೆಂದರೆ ಮೊದಲಿಗೆ ಆ ಖಾತೆಯಲ್ಲಿ ಇಂಟರ್ನೆಟ್‌ ಬ್ಯಾಂಕಿಂಗ್‌ ಚಾಲನೆಯಲ್ಲಿರಬೇಕಿತ್ತು. ಯಾವ ಖಾತೆಗೆ ಹಣ ವರ್ಗಾವಣೆ ಮಾಡಬೇಕೊ ಆ ಖಾತೆಯ ಸಂಖ್ಯೆ, ಖಾತೆದಾರರ ಹೆಸರು, ಬ್ಯಾಂಕ್‌ ಹೆಸರು, ಶಾಖೆ, ಐಎಫ್‌ಎಸ್‌ಸಿ ಕೋಡ್‌, ಸಿಐಎಫ್‌ ನಂಬರ್‌ನಂತಹ ವಿವರಗಳು ಬೇಕಿತ್ತು. ಈ ವಿವರಗಳೆಲ್ಲವನ್ನೂ, ಹಣ ಕಳಿಸುವವರು ತಮ್ಮ ಖಾತೆಯಲ್ಲಿ ನೋಂದಣಿ ಮಾಡಿದ ನಾಲ್ಕು ಗಂಟೆಯ ನಂತರ ಹಣ ವರ್ಗಾವಣೆ ಮಾಡಲು ಅವಕಾಶವಾಗುತ್ತಿತ್ತು. ಅದರಲ್ಲೂ ಐಎಂಪಿಎಸ್‌ ವ್ಯವಸ್ಥೆ ಮೂಲಕವಾದರೆ ತಕ್ಷಣವೇ ಹಣ ವರ್ಗಾವಣೆ ಆಗುತ್ತಿತ್ತು. ಆರ್‌ಟಿಜಿಎಸ್‌ ಮೂಲಕ ಸಾಕಷ್ಟು ಸಮಯ ತಗಲುತ್ತಿತ್ತು. ಇಷ್ಟೆಲ್ಲ ತಲೆಬಿಸಿಯ ಕಾರಣಕ್ಕೆ ಸಾಕಷ್ಟು ಜನರು ಸಣ್ಣಪುಟ್ಟ ವ್ಯವಹಾರಗಳಿಗೆ ಆನ್‌ಲೈನ್‌ ವಹಿವಾಟಿನತ್ತ ಚಿತ್ತ ಹರಿಸುತ್ತಿರಲಿಲ್ಲ. ದೊಡ್ಡ ಮಟ್ಟದ ಖರೀದಿ, ಉದ್ಯಮ, ವ್ಯಾಪಾರಗಳಲ್ಲಿ ಮಾತ್ರ ಬಳಕೆಯಲ್ಲಿತ್ತು. ಈ ವ್ಯವಸ್ಥೆ ಈಗಲೂ ಇದೆಯಾದರೂ ಪರ್ಯಾಯವಾಗಿ ಯುಪಿಐ ವೇದಿಕೆ ಕಾರ್ಯನಿರ್ವಹಿಸುತ್ತಿದೆ.

ಯುಪಿಐ ಆಧರಿತ ಪೇಮೆಂಟ್‌

ಹಣಕಾಸು ವಹಿವಾಟು ನಡೆಸುವುದು ಕಷ್ಟವಾದ್ಧರಿಂದ ಸಾಮಾನ್ಯರು ಇಂಟರ್ನೆಟ್‌ ಬ್ಯಾಂಕಿಂಗ್‌ನಿಂದ ದೂರವೇ ಉಳಿದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್‌ ಇಂಡಿಯಾ ಕನಸನ್ನು ಹೊತ್ತಿದ್ದರಾದರೂ ಇಂಟರ್ನೆಟ್‌ ಬ್ಯಾಂಕಿಂಗ್‌ನ ಸಂಕೀರ್ಣತೆಯಿಂದಾಗಿ ಎಲ್ಲರನ್ನೂ ಡಿಜಿಟಲ್‌ ಆರ್ಥಿಕತೆಯೊಳಗೆ ತರಲು ಕಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ 2016ರ ಏಪ್ರಿಲ್‌ 11ರಂದು ಪ್ರಾಯೋಗಿಕವಾಗಿ ಯುಪಿಐ ಪೇಮೆಂಟ್‌ ವ್ಯವಸ್ಥೆಯನ್ನು ಜಾರಿಗೊಳಿಸಿತು. ಸಾಮಾನ್ಯ ಹಣದ ವಹಿವಾಟುಗಳೆಲ್ಲವನ್ನೂ ನಿಗಾ ವಹಿಸಲು ಆರ್‌ಬಿಐ ವತಿಯಿಂದ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(ಎನ್‌ಸಿಪಿಐ) ಸ್ಥಾಪಿಸಲಾಯಿತು. ಅದರ ಅಡಿಯಲ್ಲೆ ಆರಂಭಿಸಲಾದ ಯುಪಿಐ ವ್ಯವಸ್ಥೆಗೆ 21 ಬ್ಯಾಂಕುಗಳನ್ನು ಸೇರಿಸಿ 2016ರ ಆಗಸ್ಟ್‌ 25ರಂದು ಅಂದಿನ ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಚಾಲನೆ ನೀಡಿದರು.

ಹೆಚ್ಚಿನ ಓದು: ಸರಿಯಲಿಲ್ಲ ಕ್ರಿಪ್ಟೊ ಕರೆನ್ಸಿ ಮೇಲಿನ ತೂಗುಗತ್ತಿ!: ಕ್ರಿಪ್ಟೊ ಬಗ್ಗೆ ನಿಮಗೆಷ್ಟು ಗೊತ್ತು?

ಯುಪಿಐ ಎನ್ನುವುದು ಒಂದು ಬ್ಯಾಂಕ್‌ ಖಾತೆಯಿಂದ ಮತ್ತೊಂದು ಬ್ಯಾಂಕ್‌ ಖಾತೆಗೆ ನೇರವಾಗಿ ಹಾಗೂ ತಕ್ಷಣವೇ ಹಣ ವರ್ಗಾವಣೆ ಮಾಡುವ ವ್ಯವಸ್ಥೆ. ಈ ವಹವಾಟು ನಡೆಸಲು ಬ್ಯಾಂಕ್‌ ಖಾತೆ ವಿವರ, ಖಾತೆದಾರರ ಹೆಸರಿನಂತಹ ಅನೇಕ ಮಾಹಿತಿ ಬೇಕಿಲ್ಲ. ಖಾತೆದಾರರ ಯುಪಿಐ ವಿಳಾಸ (ಹೆಚ್ಚಿನ ಸಂದರ್ಭದಲ್ಲಿ ಫೋನ್‌ ನಂಬರ್‌ ಆಗಿರುತ್ತದೆ) ಇದ್ದರೆ ಸಾಕು. ಈ ವಿಳಾಸವನ್ನು ಬಳಸಿ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಇಂತಹ ವ್ಯವಸ್ಥೆಯು ಸಾಕಷ್ಟು ಜನರನ್ನು ಆಕರ್ಷಿಸಿತು.

ಕರೊನಾ ಸಮಯದಲ್ಲಿ ಸವಾಲು

ಭಾರತದಲ್ಲಿ ಮೊದಲಿಗೆ ಡಿಜಿಟಲ್‌ ಆರ್ಥಿಕತೆಗೆ ಒತ್ತು ಸಿಕ್ಕಿದ್ದು 2016ರಲ್ಲಿ ಘೋಷಣೆಯಾದ ನೋಟು ಅಮಾನ್ಯೀಕರಣ ನಿರ್ಧಾರದ ನಂತರ. ನೋಟು ಅಮಾನ್ಯೀಕರಣದಿಂದ ಸಾಕಷ್ಟು ಜನರು ಸಂಕಷ್ಟ ಅನುಭವಿಸಿದರು. ಆದರೆ ಪರಸ್ಪರ ನೀಡಲು ನೋಟುಗಳು ಲಭ್ಯವಿಲ್ಲದಿದ್ದ ಕಾರಣಕ್ಕೆ ಹೆಚ್ಚಿನ ಜನರು ಆನ್‌ಲೈನ್‌ ಪೇಮೆಂಟ್‌ಗಳತ್ತ ಗಮನಹರಿಸಿದರು. ಅಷ್ಟರವೇಳೆಗೆ ಚಾಲನೆಯಲ್ಲಿದ್ದ ಯುಪಿಐ ವಹಿವಾಟು ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿತ್ತು. ಮೂರ್ನಾಲ್ಕು ತಿಂಗಳಲ್ಲೆ ಶೇಕಡಾ ಐವತ್ತಕ್ಕೂ ಹೆಚ್ಚು ಬಳವಣಿಗೆ ದಾಖಲಿಸಿತು. ನಂತರವೂ ಇದೇ ವೇಗದಲ್ಲಿ ಮಂದುವರಿಯುತ್ತಿದ್ದ ಯುಪಿಐ ಪೇಮೆಂಟ್ಸ್‌ ವ್ಯವಸ್ಥೆಗೆ ಕೇಂದ್ರ ಸರ್ಕಾರ ಪುಷ್ಠಿ ನೀಡಲು ವಿಶಿಷ್ಠ ಆಪ್‌ ರೂಪಿಸಿ ಅದಕ್ಕೆ ಭೀಮ್‌ ಎಂದು ಹೆಸರಿಟ್ಟಿತು.

ಅದಾಗಲೇ ಏರಿಕೆ ಹಂತದಲ್ಲಿದ್ದ ಡಿಜಿಟಲ್‌ ಪೇಮೆಂಟ್‌ ಕ್ಷೇತ್ರಕ್ಕೆ ಪೇಟಿಎಂ, ಫೋನ್‌ಪೆ, ಗೂಗಲ್‌ ಪೇ(ಜಿ ಪೇ) ಸೇರಿ ಅನೇಕ ಕಂಪನಿಗಳು ಪಾದಾರ್ಪಣೆ ಮಾಡಿದವು. ಪ್ರಾರಂಭದಲ್ಲಿ ಪ್ರತಿ ಆಪ್‌ಗೂ ಪ್ರತ್ಯೇಕ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪೇಮೆಂಟ್‌ ಮಾಡಬೇಕಿತ್ತು. ನಂತರದಲ್ಲಿ ತಂತ್ರಜ್ಞಾನ ಸುಧಾರಣೆಯಿಂದಾಗಿ ಎಲ್ಲ ಯುಪಿಐ ಆಪ್‌ಗಳಿಗೂ ಒಂದೇ ಕ್ಯೂಆರ್‌ ಕೋಡ್‌ ಸಾಕಾಯಿತು. ಇದೇ ವೇಳೆಗೆ ಆವರಿಸಿದ ಕರೊನಾ ಸಂಕಷ್ಟವು ಯುಪಿಐ ಪೇಮೆಂಟ್‌ ವ್ಯವಸ್ಥೆಯನ್ನು ಮನೆಮನೆಗೂ, ಬೀದಿ ಗಾಡಿಗಳವರೆಗೂ ತಂದು ನಿಲ್ಲಿಸಿತು. ಇಂದು ರಸ್ತೆಯಲ್ಲಿ ಎಳನೀರು ಮಾರುವವರು. ಸೊಪ್ಪು ಮಾರುವವರೂ ಯುಪಿಐ ಪೇಮೆಂಟ್‌ ಸ್ವೀಕರಿಸುತ್ತಾರೆ. ಅತ್ಯಂತ ಸಾಮಾನ್ಯ ಜನರನ್ನು ಆರ್ಥಿಕತೆಯೊಳಕ್ಕೆ ಸೇರಿಸಿಕೊಳ್ಳುವಲ್ಲಿ ಸಾಕಷ್ಟು ಯಶಸ್ಸು ಸಿಕ್ಕಂತಾಗಿದೆ.

1 ಲಕ್ಷ ಕೋಟಿ ಡಾಲರ್‌ ಮೊತ್ತ

2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.09 ಲಕ್ಷ ಕೋಟಿ ಡಾಲರ್‌ ಮೊತ್ತದ ಯುಪಿಐ ವಹಿವಾಟು ದಾಖಲಾಗಿದೆ. ಇದೇ ಮೊತ್ತವನ್ನು ಭಾರತದ ರೂಪಾಯಿಯಲ್ಲಿ ಹೇಳುವುದಾದರೆ 83.45 ಲಕ್ಷ ಕೋಟಿ ರೂ.ನಷ್ಟು ವಹಿವಾಟು. ಇದರ ಗಾತ್ರ ಎಷ್ಟು ಎಂದು ತಿಳಿಯಬೇಕೆಂದರೆ, ಕರ್ನಾಟಕ 2020-21ರಲ್ಲಿ 20.49 ಲಕ್ಷ ಕೋಟಿ ರೂ. ಒಟ್ಟು ದೇಶೀಯ ನಿವ್ವಳ ಉತ್ಪನ್ನ(ಜಿಎಸ್‌ಡಿಪಿ) ಹೊಂದುವ ನಿರೀಕ್ಷೆಯಿದೆ. ಇದೀಗ ಒಂದು ವರ್ಷದಲ್ಲಿ ದಾಖಲಾಗಿರುವ ಯುಪಿಐ ವಹಿವಾಟು ಕರ್ನಾಟಕದ ಜಿಎಸ್‌ಡಿಪಿಯ ನಾಲ್ಕು ಪಟ್ಟು ದೊಡ್ಡದಾಗಿದೆ ಎಂದರೆ ಇದರ ವಹಿವಾಟಿನ ಗಾತ್ರವನ್ನು ಅಂದಾಜಿಸಬಹುದು.

2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಯುಪಿಐ ವಹಿವಾಟು

ಯುಪಿಐ ವಹಿವಾಟಿನ ಅಂಕಿಅಂಶಗಳ ಪ್ರಕಾರ ಅರ್ಧದಷ್ಟು ವಹಿವಾಟು ತಲಾ 200 ರೂ.ಗಿಂತ ಕಡಿಮೆ ಮೊತ್ತ ಹೊಂದಿವೆ. ಕಡಿಮೆ ಮೊತ್ತದ ಹಾಗೂ ಹೆಚ್ಚಿನ ಸಂಖ್ಯೆಯ ಈ ವಹಿವಾಟುಗಳ ಕಾರಣದಿಂದಾಗಿ, ಸದ್ಯ ಇರುವ ಡಿಜಿಟಲ್‌ ಮೂಲಸೌಕರ್ಯ ಒತ್ತಡಕ್ಕೊಳಗಾಗಿ ಕೆಲವೊಮ್ಮೆ ಸ್ಥಗಿತವಾದ ಉದಾಹರಣೆಗಳೂ ಇವೆ. ಇವುಗಳನ್ನು ಸರಿಪಡಿಸಿಕೊಂಡೇ, ಈ ಆರ್ಥಿಕ ವರ್ಷದಲ್ಲಿ ಒಟ್ಟು ನಾಲ್ಕುಸ ಆವಿರ ಕೋಟಿ ವಹಿವಾಟನ್ನು ಯುಪಿಐ ವೇದಿಕೆ ಮುಟ್ಟಿದೆ. ಈ ಕುರಿತು ಇತ್ತೀಚೆಗೆ ಟ್ವೀಟ್‌ ಮಾಡಿದ್ದ ಹಣಕಾಸು ಸಚಿವೆ ನರ್ಮಲಾ ಸೀತಾರಾಮನ್‌, ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಅತ್ಯಂತ ಸಾಮಾನ್ಯ ಜನರು, ಸಣ್ಣ ಪುಟ್ಟ ವ್ಯವಹಾರಗಳಿಗೂ ಯುಪಿಐ ಬಳಸುತ್ತಿದ್ದಾರೆ ಎನ್ನುವುದು ಸಂತಸ ವಿಚಾರ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Family health insurance: ಕುಟುಂಬದ ಯೋಗಕ್ಷೇಮಕ್ಕಾಗಿ ಆರೋಗ್ಯ ವಿಮೆಯನ್ನು ಆಯ್ಕೆ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು. ಇದರಿಂದ ನಮ್ಮ ಬಜೆಟ್ ಹಾಗೂ ಕುಟುಂಬಕ್ಕೆ ಪರಿಪೂರ್ಣವಾಗಿ ಹೊಂದಿಕೆಯಾಗುವ ಆರೋಗ್ಯ ವಿಮೆಯನ್ನು ನಾವು ಪಡೆದುಕೊಳ್ಳಬಹುದು.

VISTARANEWS.COM


on

By

Family health insurance
Koo

ಬೆಂಗಳೂರು: ಕುಟುಂಬದ ಆರೋಗ್ಯ ವಿಮೆಯ (Family health insurance) ಕುರಿತು ಮಾತನಾಡಿರುವ ತಜ್ಞರೊಬ್ಬರು ಕನಿಷ್ಠ 5 ಲಕ್ಷ ರೂ. ವರೆಗಿನ ಹಣಕಾಸಿನ ಭದ್ರತೆಯನ್ನು (Money Guide) ಪ್ರತಿಯೊಂದು ಕುಟುಂಬ (family) ಸದ್ಯದ ಪರಿಸ್ಥಿತಿಯಲ್ಲಿ ಹೊಂದಿರಲೇಬೇಕು ಎನ್ನುತ್ತಾರೆ. ಯಾಕೆಂದರೆ ಮೆಡಿಕಲ್ ತುರ್ತು ಪರಿಸ್ಥಿತಿಯಲ್ಲಿ (medical emergency) ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ ಇಡೀ ಕುಟುಂಬವೇ ಒಬ್ಬನ ಆರೋಗ್ಯ ವೆಚ್ಚದಿಂದಾಗಿ (Health care costs) ಬೀದಿಗೆ ಬೀಳಬೇಕಾಗುತ್ತದೆ ಎನ್ನುತ್ತಾರೆ ಅವರು.

ಇವತ್ತು ಕುಟುಂಬದ ಯೋಗಕ್ಷೇಮವನ್ನು (well-being) ಹೆಚ್ಚು ಭದ್ರ ಪಡಿಸಿಕೊಳ್ಳಬೇಕಾಗಿದೆ. ಇದು ಯಾವುದೇ ಹಣಕಾಸಿನ ಒತ್ತಡವಿಲ್ಲದೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ನಾವು ಮೊದಲೇ ಪಡೆದುಕೊಳ್ಳುವ ಖಚಿತತೆಯಾಗಿದೆ. ಕುಟುಂಬ ಆರೋಗ್ಯ ವಿಮೆಯು ಈ ನಿಟ್ಟಿನಲ್ಲಿ ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ಇದು ನಮಗೆ ರಕ್ಷಣೆ ನೀಡುತ್ತದೆ. ಆದರೆ ಆರೋಗ್ಯ ವಿಮೆ ಖರೀದಿ ವೇಳೆ ನಾವು ಪಾಕೆಟ್-ಸ್ನೇಹಿ ನೀತಿಯಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ.

ಕೈಗೆಟುಕುವ ಕುಟುಂಬ ಆರೋಗ್ಯ ವಿಮೆಯನ್ನು ಖರೀದಿಸುವ ಮುನ್ನ ಕೆಲವೊಂದು ಅಂಶಗಳನ್ನು ನಾವು ಗಮನಿಸಲೇಬೇಕು.


ಕುಟುಂಬದ ಅಗತ್ಯ ಎಷ್ಟಿದೆ?

ಕುಟುಂಬಕ್ಕಾಗಿ ವಿಮೆ ಆಯ್ಕೆಗಳನ್ನು ಪರಿಶೀಲಿಸುವ ಮೊದಲು ಕುಟುಂಬದ ಆರೋಗ್ಯ ಅಗತ್ಯತೆಗಳನ್ನು ನೋಡಿಕೊಳ್ಳಬೇಕು. ವಯಸ್ಸು, ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು, ನಿರೀಕ್ಷಿತ ಆರೋಗ್ಯ ಅಗತ್ಯತೆಗಳನ್ನು ಪರಿಗಣಿಸಿ. ಇದರಿಂದ ಕುಟುಂಬದ ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ಸೂಕ್ತ ವಿಮೆ ಸೌಲಭ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

ಕವರೇಜ್ ಮತ್ತು ವೆಚ್ಚದ ನಡುವೆ ಸಮತೋಲನ

ಆರೋಗ್ಯ ವಿಮೆಯಲ್ಲಿ ಸಮಗ್ರ ಕವರೇಜ್ ಎಲ್ಲರೂ ಬಯಸುತ್ತಾರೆ. ಆದರೆ ಸಾಮಾನ್ಯವಾಗಿ ಪ್ರೀಮಿಯಂನಲ್ಲಿ ಇದು ಸೇರಿರುತ್ತದೆ. ಆದರೆ ಕುಟುಂಬದ ಆರೋಗ್ಯ ರಕ್ಷಣೆಯ ಆದ್ಯತೆಗಳನ್ನು ಮೌಲ್ಯಮಾಪನ ಮಾಡಿ ಸಾಕಷ್ಟು ಕವರೇಜ್ ಮತ್ತು ಕೈಗೆಟುಕುವ ನಡುವೆ ಸಮತೋಲನವನ್ನು ಸಾಧಿಸಿ. ನಿರ್ದಿಷ್ಟ ಅಗತ್ಯಗಳಿಗಾಗಿ ಆಡ್-ಆನ್ ರೈಡರ್‌ಗಳೊಂದಿಗೆ ಅಗತ್ಯವಾದ ಕವರೇಜ್ ಅನ್ನು ಆಯ್ಕೆ ಮಾಡಿಕೊಂಡರೆ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡು ಪಾಲಿಸಿಯನ್ನು ಸರಿಹೊಂದಿಸಲು ಸಹಾಯವಾಗುತ್ತದೆ.


ಪ್ರೀಮಿಯಂ ಮತ್ತು ಕಡಿತ

ವಿಮೆ ಪ್ರಾರಂಭವಾಗುವ ಮೊದಲು ಕಡಿತಗಳನ್ನು ಪರೀಕ್ಷಿಸಿ. ಕಡಿಮೆ ಪ್ರೀಮಿಯಂ ಎಂದು ಮಾತ್ರ ಯೋಚನೆ ಮಾಡುವುದು ಸರಿಯಲ್ಲ. ಸ್ವಲ್ಪ ಹೆಚ್ಚಿನ ಪ್ರೀಮಿಯಂ ಹೊಂದಿರುವ ಆದರೆ ಕಡಿಮೆ ಕಡಿತಗೊಳ್ಳುವ ದೀರ್ಘಾವಧಿಯಲ್ಲಿ ಹೆಚ್ಚು ವೆಚ್ಚ ಪರಿಣಾಮಕಾರಿಯಾಗಬಹುದು ಎಂದು ಸಾಬೀತಾಗುವ, ವಿಶೇಷವಾಗಿ ಆಗಾಗ್ಗೆ ಆರೋಗ್ಯದ ಅಗತ್ಯತೆಗಳನ್ನು ಹೊಂದಿಕೆಯಾಗುವ ಪ್ರೀಮಿಯಂ ಮೊತ್ತವನ್ನು ಆಯ್ದುಕೊಳ್ಳಿ.

ನೆಟ್‌ವರ್ಕ್ ಪರಿಗಣಿಸಿ

ವಿಮಾ ಯೋಜನೆಗಳು ಸಾಮಾನ್ಯವಾಗಿ ರಿಯಾಯಿತಿ ದರಗಳನ್ನು ನೀಡುವ ಆರೋಗ್ಯ ಪೂರೈಕೆದಾರರ ನೆಟ್‌ವರ್ಕ್‌ಗಳೊಂದಿಗೆ ಬರುತ್ತವೆ. ಈ ನೆಟ್‌ವರ್ಕ್‌ಗಳ ಪ್ರವೇಶಿಸುವ ಮೊದಲು ಗುಣಮಟ್ಟವನ್ನು ನೋಡಿಕೊಳ್ಳಿ. ಹತ್ತಿರದ, ಹೆಚ್ಚು ಸೌಕರ್ಯಗಳನ್ನು ಒಳಗೊಂಡಿರುವ, ಆದ್ಯತೆಯ ಆರೋಗ್ಯ ಪೂರೈಕೆದಾರರನ್ನು ಸೇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇನ್-ನೆಟ್‌ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡಿದರೆ ಓವರ್‌ಹೆಡ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಹೆಚ್ಚುವರಿ ಪ್ರಯೋಜನ

ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುವರಿ ಪ್ರಯೋಜನಗಳಿವೆಯೇ ಎಂಬುದನ್ನು ವಿಮೆ ಖರೀದಿಯ ಮೊದಲು ನೋಡಿ. ಕೆಲವೊಂದನ್ನು ಪ್ರೀಮಿಯಂನಲ್ಲಿ ಸೇರಿಸಬಹುದು. ಮಾತೃತ್ವ ಆರೈಕೆ, ಮಾನಸಿಕ ಆರೋಗ್ಯ ಬೆಂಬಲ ಅಥವಾ ಪರ್ಯಾಯ ಚಿಕಿತ್ಸೆಗಳನ್ನು ನಿಮ್ಮ ಪ್ರೀಮಿಯಂ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ಇದರ ವೆಚ್ಚ ಮತ್ತು ಆಗುವ ಲಾಭದ ಅನುಪಾತಗಳನ್ನು ಮೌಲ್ಯಮಾಪನ ಮಾಡಿಕೊಳ್ಳಿ.

ಮುನ್ನೆಚ್ಚರಿಕೆ ಕವರೇಜ್ ಇದೆಯೇ ಪರಿಶೀಲಿಸಿ

ಆರೋಗ್ಯ ಮುನ್ನೆಚ್ಚರಿಕೆಗಾಗಿ ಆರೈಕೆಗೆ ಒತ್ತು ನೀಡುವ ನಿಯಮಗಳನ್ನು ಒಳಗೊಂಡಿರುವ ವಿಮೆಯ ಮೇಲೆ ಹೂಡಿಕೆ ಮಾಡಿ. ದಿನನಿತ್ಯದ ತಪಾಸಣೆ, ವ್ಯಾಕ್ಸಿನೇಷನ್‌ ಮತ್ತು ಸ್ಕ್ರೀನಿಂಗ್‌ಗಳ ವ್ಯಾಪ್ತಿಯು ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಶೀಘ್ರದಲ್ಲಿ ಚಿಕಿತ್ಸೆ ಪಡೆದು ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ವೆಚ್ಚದ ಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.

ಪಾವತಿ ಆಯ್ಕೆಗಳನ್ನು ಹುಡುಕಿ

ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ನೀಡುವ ವಿಮೆದಾರರನ್ನು ನೋಡಿ. ವಾರ್ಷಿಕ ಒಟ್ಟು ಮೊತ್ತದ ಪಾವತಿಗಳಿಗೆ ಹೋಲಿಸಿದರೆ ಮಾಸಿಕ ಅಥವಾ ತ್ರೈಮಾಸಿಕ ಪಾವತಿ ಬಜೆಟ್ ನಿರ್ಬಂಧಗಳೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತದೆ. ಹೆಚ್ಚುವರಿಯಾಗಿ ವೆಚ್ಚವನ್ನು ಕಡಿಮೆ ಮಾಡಿ ಉಳಿತಾಯವನ್ನು ಗರಿಷ್ಠಗೊಳಿಸಲು ವಾರ್ಷಿಕ ಪಾವತಿಗಳಿಗೆ ರಿಯಾಯಿತಿಗಳ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ.

ವಿಮಾ ಪಾಲಿಸಿ ಬಗ್ಗೆ ಸಂಶೋಧಿಸಿ

ಕುಟುಂಬಕ್ಕೆ ಸರಿಯಾದ ವಿಮಾ ಪಾಲಿಸಿಯನ್ನು ಹುಡುಕುತ್ತಿದ್ದರೆ ಸಂಪೂರ್ಣ ಸಂಶೋಧನೆಯು ಅಗತ್ಯ. ಇದಕ್ಕಾಗಿ ಆನ್‌ಲೈನ್ ನಲ್ಲಿ ನೋಡಬಹುದು. ಗೆಳೆಯರ ಶಿಫಾರಸು ಪಡೆಯಿರಿ. ಅಗತ್ಯವಿದ್ದರೆ ವಿಮಾ ಸಲಹೆಗಾರರನ್ನು ಸಂಪರ್ಕಿಸಿ. ವಿಮೆಯಲ್ಲಿರುವ ನಿಯಮಗಳು, ವ್ಯಾಪ್ತಿ ಮಿತಿಗಳು ಮತ್ತು ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಿ.


ವಿನಾಯಿತಿಗಳ ಬಗ್ಗೆ ಪರಿಶೀಲಿಸಿ

ವಿಮೆ ಖರೀದಿಯ ಮೊದಲು ಯಾವುದನ್ನೆಲ್ಲ ಇದು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಇದನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಉತ್ತಮ. ಕೆಲವೊಂದು ಹೊರಗಿಡಬಹುದಾದ ಅಥವಾ ಸೇರಿಸಿಕೊಳ್ಳಬಹುದಾದ ಸೌಕರ್ಯಗಳಿರುತ್ತವೆ. ಇದು ತುರ್ತು ಸಂದರ್ಭಗಳಲ್ಲಿ ನಿರೀಕ್ಷಿತ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕ್ಷೇಮ ಪ್ರೋತ್ಸಾಹದ ಪ್ರಯೋಜನ ಪಡೆಯಿರಿ

ಕೆಲವು ವಿಮಾ ಪೂರೈಕೆದಾರರು ಆರೋಗ್ಯಕರ ನಡವಳಿಕೆಯನ್ನು ಪ್ರೋತ್ಸಾಹಿಸಲು ಕ್ಷೇಮ ಕಾರ್ಯಕ್ರಮಗಳು ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತವೆ. ಇದು ಫಿಟ್‌ನೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲು, ಧೂಮಪಾನವನ್ನು ತ್ಯಜಿಸಲು ಅಥವಾ ತಡೆಗಟ್ಟುವ ಸ್ಕ್ರೀನಿಂಗ್‌ಗಳಿಗೆ ಹಾಜರಾಗಲು ಬಹುಮಾನಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ಆರೋಗ್ಯವನ್ನು ಸುಧಾರಿಸಬಹುದು. ಇದರಿಂದ ವಿಮಾ ಕಂತುಗಳನ್ನು ಸಂಭಾವ್ಯವಾಗಿ ಕಡಿಮೆ ಮಾಡಬಹುದು ಅಥವಾ ಪ್ರೋತ್ಸಾಹಕಗಳನ್ನು ಗಳಿಸಬಹುದು.

ಗುಂಪು ವಿಮಾ ಆಯ್ಕೆ

ಉದ್ಯೋಗದಾತರು, ವೃತ್ತಿಪರ ಸಂಘಗಳು ಅಥವಾ ಸಮುದಾಯ ಸಂಸ್ಥೆಗಳ ಮೂಲಕ ಗುಂಪು ವಿಮಾ ಆಯ್ಕೆಗಳನ್ನು ಅನ್ವೇಷಿಸಿ. ಗುಂಪು ವಿಮಾ ಯೋಜನೆಗಳು ಸಾಮಾನ್ಯವಾಗಿ ವೈಯಕ್ತಿಕ ನೀತಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ದರ ಮತ್ತು ವಿಶಾಲ ವ್ಯಾಪ್ತಿಯ ಆಯ್ಕೆಗಳನ್ನು ನೀಡುತ್ತವೆ.

ವಾರ್ಷಿಕ ನೀತಿಯಲ್ಲೇನಿದೆ ?

ಪಾಲಿಸಿಯು ಕುಟುಂಬದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಾರ್ಷಿಕವಾಗಿ ಪಾಲಿಸಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಮದುವೆ, ಹೆರಿಗೆ ಅಥವಾ ಉದ್ಯೋಗದಲ್ಲಿನ ಬದಲಾವಣೆಗಳಂತಹ ಜೀವನದ ಬದಲಾವಣೆಗಳು ಕವರೇಜ್ ಮಟ್ಟಗಳು ಅಥವಾ ನೀತಿ ರಚನೆಗೆ ಹೊಂದಾಣಿಕೆಯಾಗುವುದನ್ನು ಈ ಸಂದರ್ಭದಲ್ಲಿ ಖಾತರಿಪಡಿಸಬಹುದು.

Continue Reading

ಪ್ರಮುಖ ಸುದ್ದಿ

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

VISTARANEWS.COM


on

India Economy
Koo

ಬೆಂಗಳೂರು: ಐಎಂಎಫ್​​ನ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರ ಪ್ರಕಾರ, ಭಾರತದ ಆರ್ಥಿಕತೆ (Indian Economy) ಚೀನಾವನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದ್ದು, ಗಾತ್ರದಲ್ಲಿ ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂಬುದಾಗಿ ವಿವರಿಸಿದ್ದಾರೆ. ಜತೆಗೆ ಇದು ನಿರೀಕ್ಷಿತ ಹಾಗೂ ಅಚ್ಚರಿಯ ಸಂಗತಿಯೇನೂ ಅಲ್ಲ ಎಂದು ಹೇಳಿದ್ದಾರೆ.

“ಚೀನಾದ ಆರ್ಥಿಕತೆಯ ಗಾತ್ರ ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಆದರೆ ಭಾರತವು ಇಂದು ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದ್ದರೆ. ಇದು ಆಶ್ಚರ್ಯಕರವಲ್ಲ” ಎಂದು ಶ್ರೀನಿವಾಸನ್ ಎಎನ್ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕೃಷ್ಣ ಶ್ರೀನಿವಾಸನ್ ಅವರು ಭಾರತದ ಆರ್ಥಿಕ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, 2024-25ರ ಹಣಕಾಸು ವರ್ಷದಲ್ಲಿ ಭಾರತದ ಯೋಜಿತ ಬೆಳವಣಿಗೆಯ ದರ 6.8% ಎಂದು ನಿರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ: China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

ಕೋವಿಡ್ -19 ಸಾಂಕ್ರಾಮಿಕ ರೋಗ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಲ್ಫ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನತೆ ಸೇರಿದಂತೆ ಅನೇಕ ಆಘಾತಗಳನ್ನು ಪರಿಹರಿಸು ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಶ್ರೀನಿವಾಸನ್, ದೇಶದ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದರು. “ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಅನೇಕ ಆಘಾತಗಳನ್ನು ಭಾರತವು ಯಶಸ್ವಿಯಾಗಿ ನಿಭಾಯಿಸಿದೆ” ಎಂದು ಅವರು ಎಎನ್ಐಗೆ ತಿಳಿಸಿದರು.

ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ ಎಂದು ಶ್ರೀನಿವಾಸನ್ ಹೇಳಿದರು, “ನಾನು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳನ್ನು ನೋಡುವುದಿಲ್ಲ” ಎಂಬುದಾಗಿಯೂ ಹೇಳಿದರು. ಆದಾಗ್ಯೂ, ಭಾರತದ ವಿಸ್ತರಿಸುತ್ತಿರುವ ಕಾರ್ಮಿಕ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಗಮನಾರ್ಹ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಮಿಕ ಶಕ್ತಿಯ ಬಳಕೆ ಅಗತ್ಯ

“ಭಾರತವು ಯುವ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ಇದು ಪ್ರತಿವರ್ಷ ಸುಮಾರು 15 ಮಿಲಿಯನ್ ಜನರನ್ನು ಕಾರ್ಮಿಕ ಬಲಕ್ಕೆ ಸೇರಿಸುವ ನಿರೀಕ್ಷೆಯಿದೆ” ಎಂದು ಶ್ರೀನಿವಾಸನ್ ಗಮನಸೆಳೆದರು. “ಈ ಜನಸಂಖ್ಯಾ ಅನುಕೂಲವನ್ನು ಬಳಸಿಕೊಳ್ಳಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಣನೀಯ ಹೂಡಿಕೆಗಳು ನಿರ್ಣಾಯಕ. ಇದರಿಂದಾಗಿ ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯು ಆರ್ಥಿಕತೆಗೆ ನೆರವು ನೀಡಬಹುದು ಎಂದು ಹೇಳಿದ್ದಾರೆ.

ಸುಮಾರು 6.5% ಬೆಳವಣಿಗೆಯ ದರದೊಂದಿಗೆ ಭಾರತದ ಮಧ್ಯಮಾವಧಿಯ ನಿರೀಕ್ಷೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಶ್ರೀನಿವಾಸನ್, ಹಲವು ಸುಧಾರಣೆಗಳ ಮಹತ್ವವನ್ನು ಒತ್ತಿ ಹೇಳಿದರು. ಸಮಗ್ರ ಸುಧಾರಣೆಗಳನ್ನು ಶ್ರದ್ಧೆಯಿಂದ ಜಾರಿಗೆ ತಂದರೆ ಮುಂದಿನ ಹಲವಾರು ವರ್ಷಗಳಲ್ಲಿ ಭಾರತವು 6.5% ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಸಾಧಿಸಬಹುದು ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

Electoral Bond: ಸುಪ್ರೀಂ ಕೋರ್ಟ್​​ ಈಗಷ್ಟೇ ಈ ಯೋಜನೆಯಲ್ಲಿ ಪಾರದರ್ಶಕತೆ ತಂದಿದೆ. ಈ ಮೊದಲು ಎಲ್ಲವೂ ಮೋಸದ ಜಾಲವಾಗಿತ್ತು ಎಂದು ಅವರು ಹೇಳಿದ್ದಾರೆ. ಯೋಜನೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ಸೀತಾರಾಮನ್ ಸಮಾಲೋಚನೆ ಯ ನಂತರ ಅವುಗಳನ್ನು ಮರಳಿ ತರುವ ಸಾಧ್ಯತೆಗಳಿವೆ ಎಂದು ಹೇಳಿದರು.

VISTARANEWS.COM


on

electoral Bond
Koo

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲ ಪಾಲುದಾರರ ಜತೆ ಸಮಾಲೋಚನೆಯ ಮಾಡಿ ಚುನಾವಣಾ ಬಾಂಡ್ (Electoral Bond) ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳಿವು ನೀಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅವರು “ನಾವು ಇನ್ನೂ ಮಧ್ಯಸ್ಥಗಾರರೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಬೇಕಾಗಿದೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾದ ಚೌಕಟ್ಟನ್ನು ರಚಿಸಲು ಅಥವಾ ತರಲು ನಾವು ಏನು ಮಾಡಬೇಕು ಎಂಬುದನ್ನು ಪರಿಶೀಲಿಸಬೇಕಾಗಿದೆ. ಮುಖ್ಯವಾಗಿ ಪಾರದರ್ಶಕತೆಯ ಮಟ್ಟವನ್ನು ಉಳಿಸಿಕೊಳ್ಳಬೇಕು. ಕಪ್ಪು ಹಣ ಇಲ್ಲಿಗೆ ಪ್ರವೇಶಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿವಾಳಿಸಬೇಕು ಎಂದು ಹೇಳಿದರು. ಆದಾಗ್ಯೂ, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಸುಪ್ರೀಂ ಕೋರ್ಟ್​​ ಈಗಷ್ಟೇ ಈ ಯೋಜನೆಯಲ್ಲಿ ಪಾರದರ್ಶಕತೆ ತಂದಿದೆ. ಈ ಮೊದಲು ಎಲ್ಲವೂ ಮೋಸದ ಜಾಲವಾಗಿತ್ತು ಎಂದು ಅವರು ಹೇಳಿದ್ದಾರೆ. ಯೋಜನೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ಸೀತಾರಾಮನ್ ಸಮಾಲೋಚನೆ ಯ ನಂತರ ಅವುಗಳನ್ನು ಮರಳಿ ತರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಹಿಂದೆಯೂ ಸಮರ್ಥಿಸಿಕೊಂಡಿದ್ದರು

ಚುನಾವಣಾ ಬಾಂಡ್ ಯೋಜನೆಯನ್ನು ಹಣಕಾಸು ಸಚಿವರು ಸಮರ್ಥಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಈ ಯೋಜನೆಯು “ಹಿಂದಿನ ಕಪ್ಪು ಹಣಕ್ಕಿಂತ ಒಂದು ಹೆಜ್ಜೆ ಉತ್ತಮ” ಎಂದು ಹೇಳಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​​ಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಬಿಜೆಪಿ ಆಡಳಿತವು ಚುನಾವಣಾ ಹಣಕಾಸು ಶುದ್ಧೀಕರಣಕ್ಕಾಗಿ ಕಾನೂನನ್ನು ತಂದಿದೆ ಎಂದು ಹೇಳಿದ್ದರು. ಚುನಾವಣಾ ನಿಧಿಯು ಹೆಚ್ಚು ಪಾರದರ್ಶಕತೆಯನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರಲು ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗಳಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರವು ಜನವರಿ 2, 2018 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತ್ತು. ಫೆಬ್ರವರಿ 2024 ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು.

Continue Reading

ಮನಿ-ಗೈಡ್

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

Money Guide: ಹೂಡಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರೇ ಮ್ಯೂಚುವಲ್‌ ಫಂಡ್‌. ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸದವರಿಗೆ ಇದು ಸೂಕ್ತ. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಅನೇಕ ಮಂದಿ ಮ್ಯೂಚುವಲ್‌ ಫಂಡ್‌ (Mutual Fund)ನಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುತ್ತಾರೆ. ಇನ್ನು ಕೆಲವು ಮಂದಿ ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ, ಅದು ಹೇಗೆ ಎಂಬುದು ಕರಗತವಾಗಿರುವುದಿಲ್ಲ. ಅವರಿಗೆ ಮಾರುಕಟ್ಟೆ ಮತ್ತು ಕಂಪೆನಿಗಳ ಫಂಡಮೆಂಟಲ್‌ ಅನಾಲಿಸಿಸ್‌ ನಡೆಸಲು ಸಮಯದ ಅಭಾವ ಇರುವುದೂ ಇದಕ್ಕೆ ಕಾರಣ ಇರಬಹುದು. ಅಂತಹ ಮಂದಿ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಮ್ಯೂಚುವಲ್‌ ಫಂಡ್‌ ಎಂದರೇನು?

ಪ್ರಸ್ತುತ ಅತ್ಯುತ್ತಮ ಹೂಡಿಕೆ ವಿಧಾನಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ವೈಯಕ್ತಿಕವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ನಿಮಗಿರುವ ಅತ್ಯುತ್ತಮ ಮಾರ್ಗ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪೆನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನೀವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ. ಗಮನಿಸಿ, ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತದೆ. ಅಲ್ಪಾವಧಿಗೆ ಅಲ್ಲ.

ಆದಾಗ್ಯೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿ ದಾಖಲೆಯನ್ನು ಎಚ್ಚರಿಕೆಯಿಂದ ಓದಬೇಕು. ಅಲ್ಲದೆ ಯೋಜನೆಯ ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದ ಆದಾಯವನ್ನು ಸೂಚಿಸುವುದಿಲ್ಲ. ಯಾವುದೇ ಕನಿಷ್ಠ ಅಥವಾ ಗರಿಷ್ಠ ಆದಾಯದ ಭರವಸೆ ಅಥವಾ ಖಾತರಿ ಇರಲು ಸಾಧ್ಯವಿಲ್ಲ ಮುಂತಾದ ಅಂಶಗಳನ್ನು ಹೂಡಿಕೆ ಮೊದಲೇ ಗಮನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಭಾರತದಲ್ಲಿ ಲಭ್ಯವಿರುವ ಮ್ಯೂಚುವಲ್‌ ಫಂಡ್‌ನ ವಿಧಗಳು

ಈಕ್ವಿಟಿ ಫಂಡ್‌ (Equity Funds): ಈ ಫಂಡ್‌ ಮುಖ್ಯವಾಗಿ ಕಂಪೆನಿಗಳ ಸ್ಟಾಕ್‌ಗಳು / ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿವೆ. ಇದರ ಮೂಲಕ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅವು ಹೆಚ್ಚಿನ ಆದಾಯವನ್ನು ನೀಡುವ ಜತೆಗೆ ಆದರೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಈಕ್ವಿಟಿ ಫಂಡ್‌ಗಳನ್ನು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಬ್ಯಾಂಕಿಂಗ್, ತಂತ್ರಜ್ಞಾನ, ಇತ್ಯಾದಿ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಬಹುದು.

ಡೆಬ್ಟ್ ಫಂಡ್ (Debt Fund): ಡೆಬ್ಟ್ ಫಂಡ್ ಪ್ರಾಥಮಿಕವಾಗಿ ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳಂತಹ ಸ್ಥಿರ-ಆದಾಯದ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಈಕ್ವಿಟಿ ಫಂಡ್‌ಗೆ ಹೋಲಿಸಿದರೆ ನಿಯಮಿತ ಆದಾಯ ಮತ್ತು ಕಡಿಮೆ ಅಪಾಯವನ್ನು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ.

ಹೈಬ್ರಿಡ್ ಫಂಡ್ (Hybrid Funds): ಬ್ಯಾಲೆನ್ಸ್ಡ್ ಫಂಡ್ (Balanced funds) ಎಂದೂ ಕರೆಯಲ್ಪಡುವ ಇದರಲ್ಲಿ ಈಕ್ವಿಟಿ ಮತ್ತು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಅಪಾಯದೊಂದಿಗೆ ಮಧ್ಯಮ ಆದಾಯವನ್ನು ಬಯಸುವ ಹೂಡಿಕೆದಾರರು ಇದನ್ನು ಆಯ್ಕೆ ಮಾಡಬಹುದು.

ಇಂಡಕ್ಸ್‌ ಫಂಡ್‌ (Index Funds): ಇದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕದಂತೆ ಅದೇ ಪ್ರಮಾಣದಲ್ಲಿ ಅದೇ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವ ಯೋಜನೆ. ಸೂಚ್ಯಂಕಕ್ಕೆ ಹೋಲುವ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ.

ಸೆಕ್ಟರಲ್‌ ಫಂಡ್‌ (Sectoral Funds): ಬ್ಯಾಂಕಿಂಗ್, ಐಟಿ, ಆರೋಗ್ಯ ರಕ್ಷಣೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವ ವಿಧಾನ ಇದು. ಇದು ಹೆಚ್ಚಿನ ಅಪಾಯವನ್ನು ಹೊಂದಿದೆ.

ಥೀಮಾಟಿಕ್‌ ಫಂಡ್‌ (Thematic Funds): ಮೂಲಸೌಕರ್ಯ ಅಥವಾ ತಂತ್ರಜ್ಞಾನದಂತಹ ನಿರ್ದಿಷ್ಟ ವಿಷಯಗಳು ಅಥವಾ ಪ್ರವೃತ್ತಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿಯೂ ಅಪಾಯ ಸಾಧ್ಯತೆ ಅಧಿಕ.

ಟ್ಯಾಕ್ಸ್‌ ಸೇವಿಂಗ್‌ ಫಂಡ್‌ (Tax Saving Funds): ಈ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ (Equity Linked Savings Schemes) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಇದರಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.

ಲಿಕ್ವಿಡ್ ಫಂಡ್ (Liquid Funds): ಲಿಕ್ವಿಡ್ ಫಂಡ್‌ 91 ದಿನಗಳಲ್ಲಿ ಮುಕ್ತಾಯಗೊಳ್ಳುವ ಅಲ್ಪಾವಧಿಯ ಹೂಡಿಕೆಯಾಗಿದೆ. ಅಲ್ಪಾವಧಿಯ ಹೂಡಿಕೆದಾರರಿಗೆ ಇದು ಸೂಕ್ತ.

ಗಿಲ್ಟ್‌ ಫಂಡ್‌ (Gilt Funds): ಇದು ಉಳಿದ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ ಎಂದೇ ಹೇಳಬಹುದು. ಹೂಡಿಕೆ ಮಾಡಿದ ಹೆಚ್ಚಿನ ಹಣಗಳು ಸರ್ಕಾರ ಅಭಯವಿರುವ ಕಡೆಯೇ ಇರುತ್ತವೆ. ಇಲ್ಲಿ ಹಣ ಕಳೆದುಕೊಳ್ಳುವ ಆತಂಕ ಇರುವುದಿಲ್ಲ.

ಇಂಟರ್‌ನ್ಯಾಷನಲ್‌ ಫಂಡ್‌ (International Funds): ಈ ಸ್ಕೀಮ್‌ ಮೂಲಕ ಭಾರತದ ಹೊರಗಿನ ಸ್ವತ್ತುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿನ ವೈವಿಧ್ಯತೆಯನ್ನು ನೀಡುತ್ತದೆ. ಸ್ಟಾಕ್, ಬಾಂಡ್ ಅಥವಾ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Continue Reading
Advertisement
Farmers Protest
ದೇಶ3 mins ago

Farmers Protest: ರೈತರ ಪ್ರತಿಭಟನೆ; ಅಂಬಾಲಾ-ಅಮೃತಸರ ಮಾರ್ಗದ 54 ರೈಲು ಸಂಚಾರ ರದ್ದು

Vinesh Phogat
ಕ್ರೀಡೆ14 mins ago

Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

Dalit Student
ದೇಶ15 mins ago

Dalit Student: ದೇಶ, ರಾಮನ ವಿರೋಧ; ದಲಿತ ಪಿಎಚ್‌.ಡಿ ವಿದ್ಯಾರ್ಥಿಯ ಅಮಾನತು!

Apricot Benefits
ಆರೋಗ್ಯ29 mins ago

Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

Family health insurance
ಮನಿ ಗೈಡ್29 mins ago

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Modi in Karnataka
ಪ್ರಮುಖ ಸುದ್ದಿ34 mins ago

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ1 hour ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ1 hour ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ1 hour ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ1 hour ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20245 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ7 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ8 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌